ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಖಾಸಗಿ ಸಂಸ್ಥೆಯಲ್ಲೂ ಸ್ಥಳೀಯರಿಗೆ ಮೀಸಲಾತಿ: ಜಗನ್ ಮಹತ್ವದ ನಿರ್ಣಯ

|
Google Oneindia Kannada News

ಅಮರಾವತಿ, ಜುಲೈ 23: ಸ್ಥಳೀಯರಿಗೆ ಉದ್ಯೋಗದಲ್ಲಿ ಮೀಸಲಾತಿ ಕಲ್ಪಿಸುವ ದೃಷ್ಟಿಯಿಂದ ಮುಖ್ಯಮಂತ್ರಿ ಜಗನ್ ಮೋಹನ್ ರೆಡ್ಡಿ ಮಹತ್ವದ ನಿರ್ಧಾರ ಕೈಗೊಂಡಿದ್ದಾರೆ.

ಕರ್ನಾಟಕದಲ್ಲಿ ಸ್ಥಳೀಯರಿಗೆ ಉದ್ಯೋಗದಲ್ಲಿ ಮೀಸಲಾತಿ ಪೂರ್ಣಪ್ರಮಾಣದಲ್ಲಿ ಜಾರಿಗೊಳಿಸಲು ಆಗುತ್ತಿಲ್ಲ, ಆದರೆ, ಆಂಧ್ರಪ್ರದೇಶದಲ್ಲಿ ಈ ಮಹತ್ವದ ನಿರ್ಣಯ ಕೈಗೊಳ್ಳಲಾಗಿದೆ.

ಜಗನ್ ಮೋಹನ್ ರೆಡ್ಡಿ ಆಂಧ್ರಪ್ರದೇಶದ ಅತಿ ಸಿರಿವಂತ ಮಂತ್ರಿ ಜಗನ್ ಮೋಹನ್ ರೆಡ್ಡಿ ಆಂಧ್ರಪ್ರದೇಶದ ಅತಿ ಸಿರಿವಂತ ಮಂತ್ರಿ

ಆಂಧ್ರಪ್ರದೇಶದ ಔದ್ಯೋಗಿಕ ವಲಯದಲ್ಲಿ ಶೇ. 75 ಉದ್ಯೋಗವನ್ನು ಸ್ಥಳೀಯರಿಗೆ ಮೀಸಲಿಡುವಂತೆ ಕಾನೂನು ಜಾರಿಗೆ ತಂದಿರುವ ಜಗನ್ ರೆಡ್ಡಿ ಅವರು ಇಲಾಖೆಗೆ ಆದೇಶವನ್ನು ಕಳಿಸಿದ್ದಾರೆ.

Jagan law to provide 75 PC reservation to local youths in Private Companies

ಹೊಸ ನಿಯಮದ ಪ್ರಕಾರ, "ಖಾಸಗಿ ಸಂಸ್ಥೆ, ಕಾರ್ಖಾನೆ, ಸರ್ಕಾರ-ಖಾಸಗಿ ಸಹಭಾಗಿತ್ವದ ಸಂಸ್ಥೆಗಳಲ್ಲಿ ಸ್ಥಳೀಯ ಯುವ ಪ್ರತಿಭಾವಂತರಿಗೆ ಶೇ.75 ಮೀಸಲಾತಿ ನೀಡಬೇಕಾಗುತ್ತದೆ. ಸ್ಥಳೀಯರಿಗೆ ಕೌಶಲ್ಯವಿಲ್ಲ ಎಂಬ ಕಾರಣ ನೀಡುವ ಹಾಗಿಲ್ಲ ಎಂದು ನಿಬಂಧನೆ ಹೂಡಲಾಗಿದೆ"

ಶಾಸಕಿ ರೋಜಾಗೆ ಸಿಕ್ತು ಪವರ್, ಕೈಗಾರಿಕಾ ನಿಗಮಕ್ಕೆ ಮುಖ್ಯಸ್ಥೆ ಶಾಸಕಿ ರೋಜಾಗೆ ಸಿಕ್ತು ಪವರ್, ಕೈಗಾರಿಕಾ ನಿಗಮಕ್ಕೆ ಮುಖ್ಯಸ್ಥೆ

ಪಾದಯಾತ್ರೆ ವೇಳೆ ನೀಡಿದ್ದ ಆಶ್ವಾಸನೆ:
ಆಂಧ್ರಪ್ರದೇಶದ ವಿಧಾನಸಭೆ ಚುನಾವಣೆಗೂ ಮುನ್ನ ವೈಎಸ್ಸಾರ್ ಕಾಂಗ್ರೆಸ್ ಪಕ್ಷದ ಅಧ್ಯಕ್ಷ ಜಗನ್ ಮೋಹನ್ ರೆಡ್ಡಿ ಪಾದಯಾತ್ರೆ ನಡೆಸಿ ಜನರ ಅಹವಾಲುಗಳನ್ನು ಸ್ವೀಕರಿದ್ದರು. ಈ ಸಂದರ್ಭದಲ್ಲಿ "ಸ್ಥಳೀಯರಿಗೆ ಉದ್ಯೋಗದಲ್ಲಿ ಮೀಸಲಾತಿ" ಎಂಬುದು ದೊಡ್ಡ ಸಮಸ್ಯೆಯಾಗಿ ಕಾಣಿಸಿಕೊಂಡಿದೆ.

ಇದೇ ವೇಳೆಯಲ್ಲಿ ಯುವ ಪ್ರತಿಭಾವಂತರಿಗೆ ಅವಕಾಶ ನೀಡಿದ ಜಗನ್ ಅವರು, ವೈಎಸ್ಸಾರ್ ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ, 'ಉದ್ಯೋಗ ಮೀಸಲಾತಿ' ಒದಗಿಸುವುದಾಗಿ ಭರವಸೆ ನೀಡಿದ್ದರು. ಅದರಂತೆ, ಈ ನಿರ್ಣಯದ ಲಾಭವು ನೇರವಾಗಿ ಕೈಗಾರಿಕಾ ವಲಯಕ್ಕಾಗಿ ತಮ್ಮ ಸ್ವಂತ ಜಮೀನು ಕಳೆದುಕೊಂಡವರಿಗೆ ತಲುಪಬೇಕಿದೆ ಎಂದು ಜಗನ್ ಬಯಸಿದ್ದಾರೆ.

English summary
The Andhra Pradesh Employment of Local Candidates in Industries/Factories Act, 2019 was passed on Monday during the ongoing budget session of the assembly.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X