ಕಾಲೇಜು ಪುನರ್ ಆರಂಭ ದಿನಾಂಕ ಘೋಷಿಸಿದ ಮುಖ್ಯಮಂತ್ರಿ
ಅಮರಾವತಿ, ಆ.7: ಕೊರೊನಾವೈರಸ್ ಸೋಂಕು ಹರಡದಂತೆ ವಿಧಿಸಲಾಗಿರುವ ಲಾಕ್ಡೌನ್ ಎಲ್ಲೆಡೆ ತೆರವುಗೊಂಡು ಅನ್ ಲಾಕ್ ಮಾರ್ಗ ಸೂಚಿಗಳು ಜಾರಿಯಲ್ಲಿವೆ. ಹೀಗಾಗಿ, ಸೂಕ್ತ ನಿರ್ದೇಶನದೊಂದಿಗೆ ಅಕ್ಟೋಬರ್ 15 ರಿಂದ ಶಾಲೆಗಳನ್ನು ಪುನರ್ ಆರಂಭಿಸಲು ಸಿದ್ಧರಾಗುವಂತೆ ಮುಖ್ಯಮಂತ್ರಿ ವೈ.ಎಸ್ ಜಗನ್ ಮೋಹನ್ ರೆಡ್ಡಿ ಹೇಳಿದ್ದಾರೆ.
Recommended Video
ನಾಡು-ನೇಡು ಕಾರ್ಯಕ್ರಮದ ಅಡಿಯಲ್ಲಿ 456 ಕೋಟಿ ರು ವೆಚ್ಚದಲ್ಲಿ 15, 000 ಶಾಲೆ ರಿಪೇರಿ ಹಾಗೂ ಪುನರ್ ನಿರ್ಮಾಣ ಕಾರ್ಯದ ಮೊದಲ ಹಂತವನ್ನು ಪೂರೈಸಲಾಗಿದೆ. ಮಾರ್ಚ್ 23ರಿಂದ ಆಂಧ್ರಪ್ರದೇಶದ ಶಾಲೆ, ಕಾಲೇಜುಗಳು ಬಂದ್ ಆಗಿವೆ. ಆಗಸ್ಟ್ 03 ರಿಂದಲೇ ಶಾಲೆ ಆರಂಭಿಸಲು ಆಂಧ್ರ ಸರ್ಕಾರ ಮುಂದಾಗಿತ್ತು. ಆದರೆ, ಇತ್ತೀಚೆಗೆ ನಡೆದ ಉನ್ನತ ಮಟ್ಟದ ಸಭೆಯಲ್ಲಿ ಅಕ್ಟೋಬರ್ 15ರಿಂದ ಕಾಲೇಜು, ವಿದ್ಯಾಸಂಸ್ಥೆಗಳನ್ನು ಮತ್ತೆ ಆರಂಭಿಸಲು ತೀರ್ಮಾನಿಸಲಾಯಿತು.
ಆಂಧ್ರ ಪ್ರದೇಶದಲ್ಲಿ ಒಂದೇ ದಿನ 10328 ಮಂದಿಗೆ ಕೊರೊನಾವೈರಸ್!
ಶಾಲೆ, ಕಾಲೇಜು ಆರಂಭದ ಬಗ್ಗೆ ಅಧಿಕೃತ ಆದೇಶ ಹಾಗೂ ಮಾರ್ಗಸೂಚಿಗಳನ್ನು ಶೀಘ್ರದಲ್ಲೆ ಹೊರಡಿಸಲಾಗುತ್ತದೆ ಎಂದು ಜಗನ್ ಹೇಳಿದರು. ಇದೇ ವೇಳೆ ಪ್ರಕಾಶಂ ಹಾಗೂ ವಿಳಿಯನಗರಂ ಜಿಲ್ಲೆಗಳಲ್ಲಿ ಬುಡಕಟ್ಟು ವಿಶ್ವವಿದ್ಯಾಲಯ ಸ್ಥಾಪನೆಗೆ ಸರ್ಕಾರ ಒಪ್ಪಿಗೆ ಸೂಚಿಸಿದೆ. ಕರ್ನೂಲ್ ನಲ್ಲಿ ಕ್ಲಸ್ಟರ್ ವಿವಿ, ಕಡಪದಲ್ಲಿ ವಾಸ್ತುಶಿಲ್ಪ ವಿವಿ, ಕುರುಪ್ ನಲ್ಲಿ ಬುಡಕಟ್ಟು ಇಂಜಿನಿಯರಿಂಗ್ ಕಾಲೇಜು ಸ್ಥಾಪನೆಗೆ ನಿರ್ಧರಿಸಲಾಗಿದೆ ಎಂದು ಶಿಕ್ಷಣ ಸಚಿವ ಅದಿಮುಲಪು ಸುರೇಶ್ ಹೇಳಿದರು.
ಆಂಧ್ರಪ್ರದೇಶದಲ್ಲಿ 196789ಕ್ಕೂ ಅಧಿಕ ಕೊವಿಡ್ ಪ್ರಕರಣಗಳಿದ್ದು,ಇದುವರೆಗೂ 1,12,870 ಸೋಂಕಿತರು ಗುಣಮುಖರಾಗಿದ್ದಾರೆ. ಸಾವಿನ ಸಂಖ್ಯೆಯು 1,753ಕ್ಕೆ ಏರಿಕೆಯಾಗಿದೆ. 82,166 ಸೋಂಕಿತರಿಗೆ ನಿಗದಿತ ಕೊವಿಡ್-19 ಆಸ್ಪತ್ರೆಗಳಲ್ಲಿ ದಾಖಲಿಸಿದ್ದು, ಚಿಕಿತ್ಸೆ ನೀಡಲಾಗುತ್ತಿದೆ.