ಆಂಧ್ರದ ಐದು ಮತಗಟ್ಟೆಗಳಲ್ಲಿ ಮರುಮತದಾನ, ನಾಯ್ಡು ಕೆಂಡಾಮಂಡಲ!
ಅಮರಾವತಿ, ಮೇ 17: ಆಂಧ್ರಪ್ರದೇಶದ ಐದು ಮತಗಟ್ಟೆಗಳಲ್ಲಿ ಮರುಮತದಾನಕ್ಕೆ ಆದೇಶ ನೀಡಿದ ಚುನಾವಣಾ ಆಯೋಗದ ನಿರ್ಧಾರದ ವಿರುದ್ಧ ಆಂಧ್ರಪ್ರದೇಶ ಮುಖ್ಯಮಂತ್ರಿ ಎನ್ ಚಂದ್ರಬಾಬು ನಾಯ್ಡು ಕೆಂಡಾಮಂಡಲವಾಗಿದ್ದಾರೆ.
ಲೋಕಸಭಾ ಚುನಾವಣೆ 2019 | ವಿಶೇಷ ಪುಟ | ಗ್ಯಾಲರಿ
"ಚುನಾವಣಾ ಆಯೋಗ ನಾವು ಯಾವುದೇ ಬೇಡಿಕೆ ಇಟ್ಟರೂ ಅದಕ್ಕೆ ಕಿವಿಗೊಡುವುದಿಲ್ಲ. ಆದರೆ ಮರುಮತದಾನ ಮಾಡಬೇಕು ಎಂಬ ವೈಎಸ್ ಆರ್ ಕಾಂಗ್ರೆಸ್ ಮನವಿಗೆ ಮಾತ್ರ ಕಿವಿಗೊಡುತ್ತದೆ. ಇಂಥ ತಾರಮ್ಯದ ನಿರ್ಣಯವನ್ನು ನಾವು ವಿರೋಧಿಸುತ್ತೇವೆ" ಎಂದು ನಾಯ್ಡು ಹೇಳಿದರು.
ನಾನು ಪ್ರಧಾನಿ ಹುದ್ದೆ ಆಕಾಂಕ್ಷಿಯಲ್ಲ: ನಾಯ್ಡು ತ್ಯಾಗಕ್ಕೆ ಸಿದ್ಧರಾದರೆ?
ಚಂದ್ರಗಿರಿ ಲೋಕಸಭೆ ಕ್ಷೇತ್ರದ ಅಡಿಯಲ್ಲಿ ಬರುವ ಮತಗಟ್ಟೆ ಸಂಖ್ಯೆ 166 ಮತ್ತು ಚಿತ್ತೋರ್ ಕ್ಷೇತ್ರದ ಅಡಿ ಬರುವ ಮತಗಟ್ಟೆ ಸಂಖ್ಯೆ 25 ರಲ್ಲಿ ಮರುಮತದಾನಕ್ಕೆ ಚುನಾವಣಾ ಆಯೋಗ ಆದೇಶ ನೀಡಿದೆ.
ಜಗನ್ ರೆಡ್ಡಿ ಕಿಂಗ್ ಮೇಕರ್! NDA ಬೆಂಬಲಿಸುವಂತೆ ಅಮಿತ್ ಶಾ ಮನವಿ?
ಚಂದ್ರಗಿರಿಯ ವೈಎಸ್ ಆರ್ ಕಾಂಗ್ರೆಸ್ ಅಭ್ಯರ್ಥಿ ಚೆವಿರೆಡ್ಡಿ ಭಾಸ್ಕರ್ ರೆಡ್ಡಿ ಅವರು, ಈ ಮತಗಟ್ತೆಗಳಲ್ಲಿ ಕೆಲವು ಸಮುದಾಯದವರಿಗೆ ಮತದಾನ ಮಾಡಲು ಅವಕಾಶ ನೀಡಿರಲಿಲ್ಲ ಎಂದು ದೂರಿ, ಚುನಾವಣಾ ಆಯೋಗದ ಮೊರೆ ಹೋಗಿದ್ದರು. ಈ ಕುರಿತು ಆಯೋಗಕ್ಕೆ ಹಲವರಿಂದ ದೂರು ಬಂದ ಹಿನ್ನೆಲೆಯಲ್ಲಿ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ.