ಆಂಧ್ರಪ್ರದೇಶ: 13 ಹೊಸ ಜಿಲ್ಲೆಗಳಿಗೆ ಅನುಮೋದನೆ ನೀಡಿದ ಆಂಧ್ರ ಸಿಎಂ
ವಿಜಯವಾಡ, ಜನವರಿ 26: ಆಂಧ್ರಪ್ರದೇಶದ ಜಗನ್ ರೆಡ್ಡಿ ಸರ್ಕಾರ ರಾಜ್ಯದಲ್ಲಿ 13 ಹೊಸ ಜಿಲ್ಲೆಗಳ ರಚನೆಗೆ ಅನುಮೋದನೆ ನೀಡಿದೆ. ಆಂಧ್ರಪ್ರದೇಶ ಜಿಲ್ಲಾ ರಚನೆ ಕಾಯ್ದೆಯ ಸೆಕ್ಷನ್ 3(5) ರ ಅಡಿಯಲ್ಲಿ ಹೊಸ ಜಿಲ್ಲೆಗಳ ರಚನೆಗೆ ಸರ್ಕಾರದಿಂದ ಅಧಿಕೃತ ಗೆಜೆಟ್ ಅಧಿಸೂಚನೆಯನ್ನು ಹೊರಡಿಸಲಾಗಿದೆ. ಇದರಲ್ಲಿ 13 ಹೊಸ ಜಿಲ್ಲೆಗಳ ಘೋಷಣೆಯ ನಂತರ, ರಾಜ್ಯದ ಒಟ್ಟು ಜಿಲ್ಲೆಗಳ ಸಂಖ್ಯೆಯು 13 ರಿಂದ 26ಕ್ಕೆ ಏರಿಕೆಯಾಗಿದೆ.
ಬುಧವಾರ ಆಂಧ್ರಪ್ರದೇಶ ಸರ್ಕಾರವು 13 ಹೊಸ ಜಿಲ್ಲೆಗಳನ್ನು ರಚಿಸುವುದಾಗಿ ಘೋಷಿಸುವ ಮೂಲಕ 74 ನೇ ಗಣರಾಜ್ಯೋತ್ಸವವನ್ನು ಆಚರಿಸಿತು. ಇಲ್ಲಿನ ಐಜಿಎಂಸಿ ಸ್ಟೇಡಿಯಂನಲ್ಲಿ ನಡೆದ ಗಣರಾಜ್ಯೋತ್ಸವ ಸಮಾರಂಭವನ್ನು ಉದ್ದೇಶಿಸಿ ಮಾತನಾಡಿದ ರಾಜ್ಯಪಾಲ ಬಿಸ್ವ ಭೂಷಣ್ ಹರಿಚಂದನ್, ರಾಜ್ಯದಲ್ಲಿ ಹೊಸ ಜಿಲ್ಲೆಗಳನ್ನು ರಚಿಸಲಾಗುತ್ತಿದೆ ಎಂದು ಘೋಷಿಸಿದರು.
ಎಪಿ ಜಿಲ್ಲೆಗಳ ರಚನೆ ಕಾಯಿದೆ, ಸೆಕ್ಷನ್ 3(5) ಅಡಿಯಲ್ಲಿ ಹೊಸ ಜಿಲ್ಲೆಗಳನ್ನು ರಚಿಸಲಾಗುತ್ತಿದೆ. ರಾಜ್ಯದಲ್ಲಿ ಸಂಸದೀಯ ಕ್ಷೇತ್ರಗಳ ಆಧಾರದ ಮೇಲೆ ಹೊಸ ಜಿಲ್ಲೆಗಳನ್ನು ರಚಿಸಲಾಗಿದ್ದರೂ, ಅವುಗಳಲ್ಲಿ ಕೆಲವನ್ನು ಮರುನಾಮಕರಣ ಮಾಡಲಾಗಿದೆ. ಶ್ರೀಕಾಕುಲಂ ಪಟ್ಟಣವು ಶ್ರೀಕಾಕುಲಂ ಜಿಲ್ಲೆಯ ಪ್ರಧಾನ ಕಚೇರಿಯಾಗಲಿದೆ ಮತ್ತು ವಿಜಯನಗರಂ ವಿಜಯನಗರಂ ಜಿಲ್ಲೆಯ ಪ್ರಧಾನ ಕಚೇರಿಯಾಗಲಿದೆ. ಮಾನ್ಯಂ ಜಿಲ್ಲೆಯನ್ನು ವಿಜಯನಗರ ಜಿಲ್ಲೆಯಿಂದ ತೆಗೆದಿದ್ದು, ಪಾರ್ವತಿಪುರಂ ಇದರ ಕೇಂದ್ರ ಕಚೇರಿಯಾಗಿದೆ.
Government of Andhra Pradesh issues a gazette notification, taking the total number of districts in the State from the existing 13 to 26 pic.twitter.com/czn80VkOPQ
— ANI (@ANI) January 26, 2022
ಹೊಸ ಜಿಲ್ಲೆಗಳ ಹೆಸರುಗಳು ಹೀಗಿವೆ- ಮಾನ್ಯಂ, ಅಲ್ಲೂರಿ ಸೀತಾರಾಮ್ ರಾಜು, ಅನಕಾಪಲ್ಲಿ, ಕಾಕಿನಾಡ, ಕೋನ ಸೀಮಾ, ಏಲೂರು, ಎನ್ಟಿಆರ್, ಬಾಪತಿಯಾ, ಪಲ್ನಾಡು, ನಂದ್ಯಾಲ್, ಶ್ರೀ ಸತ್ಯಸಾಯಿ, ಅನ್ನಮಯ್ಯ, ಶ್ರೀ ಬಾಲಾಜಿ. ಈಗಾಗಲೇ ಅಸ್ತಿತ್ವದಲ್ಲಿರುವ 13 ಜಿಲ್ಲೆಗಳ ಹೆಸರುಗಳು ಇಂತಿವೆ ಶ್ರೀಕಾಕುಳಂ, ವಿಜಯನಗರಂ, ವಿಶಾಖಪಟ್ಟಣಂ, ಪೂರ್ವ ಗೋದಾವರಿ, ಪಶ್ಚಿಮ ಗೋದಾವರಿ, ಕೃಷ್ಣಾ, ಗುಂಟೂರು, ಪ್ರಕಾಶಂ, ನೆಲ್ಲೂರು, ಅನಂತಪುರಂ, ಕಡಪ, ಕರ್ನೂಲ್ ಮತ್ತು ಚಿತ್ತೂರು. ಸದ್ಯ ರಾಜ್ಯದಲ್ಲಿ ಒಟ್ಟು 26 ಕ್ಷೇತ್ರಗಳನ್ನು ಹೊಸ ಜಿಲ್ಲೆಗಳನ್ನಾಗಿ ಪರಿವರ್ತಿಸಲಾಗಿದೆ.
ವಿಶಾಖಪಟ್ಟಣಂ ಜಿಲ್ಲೆಯ ಅರಕು ಕಣಿವೆ ಪ್ರದೇಶವನ್ನು ಅಲ್ಲೂರಿ ಸೀತಾರಾಮ ರಾಜು ಜಿಲ್ಲೆ ಎಂದು ಹೆಸರಿಸಲಾಗಿದ್ದು, ಪಡೇರು ಕೇಂದ್ರ ಕಚೇರಿಯಾಗಿದೆ. ವಿಶಾಖಪಟ್ಟಣಂ ವಿಶಾಖಪಟ್ಟಣಂ ನಗರವನ್ನು ತನ್ನ ಪ್ರಧಾನ ಕಚೇರಿಯಾಗಿ ಹೊಂದಿರುತ್ತದೆ. ವಿಶಾಖಪಟ್ಟಣಂ ಪ್ರದೇಶವು ಈಗ 928 ಚದರ ಕಿ.ಮೀ ವಿಸ್ತೀರ್ಣವನ್ನು ಹೊಂದಿರುತ್ತದೆ, ಇದು ಮೂಲತಃ ಬಂದರು ನಗರ ಮತ್ತು ಅದರ ಉಪನಗರಗಳನ್ನು ಹೊಂದಿದೆ. ಅನಕಪಲ್ಲಿ ಪಟ್ಟಣವನ್ನು ಕೇಂದ್ರ ಕಚೇರಿಯನ್ನಾಗಿ ಮಾಡಿಕೊಂಡು ಅನಕಪಲ್ಲಿಯನ್ನು ಹೊಸ ಜಿಲ್ಲೆಯಾಗಿ ಮಾಡಲಾಗಿದೆ. ಪೂರ್ವ ಗೋದಾವರಿ ಜಿಲ್ಲೆಯನ್ನು ಮೂರು ಜಿಲ್ಲೆಗಳಾಗಿ ವಿಂಗಡಿಸಲಾಗಿದೆ - ಕಾಕಿನಾಡ, ಕೋನಸೀಮಾ ಮತ್ತು ಪೂರ್ವ ಗೋದಾವರಿ, ಕ್ರಮವಾಗಿ ಕಾಕಿನಾಡ, ಅಮಲಾಪುರಂ ಮತ್ತು ರಾಜಮಹೇಂದ್ರವರಂ ಇವುಗಳ ಕೇಂದ್ರ ಕಚೇರಿಯಾಗಿದೆ.
ಪಶ್ಚಿಮ ಗೋದಾವರಿ ಜಿಲ್ಲೆಯನ್ನು ಎರಡು ಜಿಲ್ಲೆಗಳಾಗಿ ವಿಭಜಿಸಲಾಗಿದೆ - ಪಶ್ಚಿಮ ಗೋದಾವರಿಯು ಭೀಮಾವರಂ ಅನ್ನು ಅದರ ಕೇಂದ್ರವಾಗಿ ಮತ್ತು ಏಲೂರು ಪ್ರಧಾನ ಕಚೇರಿ ಏಲೂರು ಆಗಿದೆ. ಕೃಷ್ಣಾ ಜಿಲ್ಲೆಯನ್ನು ಎರಡು ಜಿಲ್ಲೆಗಳಾಗಿ ವಿಭಜಿಸಲಾಗಿದೆ - ಎನ್ಟಿಆರ್ ಜಿಲ್ಲೆ ಮತ್ತು ಕೃಷ್ಣಾ ಜಿಲ್ಲೆ, ಕ್ರಮವಾಗಿ ವಿಜಯವಾಡ ಮತ್ತು ಮಚಲಿಪಟ್ಟಣವು ಅವುಗಳ ಕೇಂದ್ರ ಕಚೇರಿಯಾಗಿದೆ. ಗುಂಟೂರು ಜಿಲ್ಲೆಯನ್ನು ಮೂರು ಜಿಲ್ಲೆಗಳಾಗಿ ವಿಂಗಡಿಸಲಾಗಿದೆ - ಗುಂಟೂರು ಅದರ ಕೇಂದ್ರ ಕಚೇರಿಯಾಗಿ ಗುಂಟೂರು, ಬಾಪಟ್ಲ ಪ್ರಧಾನ ಕಚೇರಿ ಬಾಪಟ್ಲ, ನರಸರಾವ್ಪೇಟೆಗೆ ಪಲ್ನಾಡು ಕೇಂದ್ರ ಕಚೇರಿಯಾಗಿದೆ.