ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಆಂಧ್ರದಲ್ಲಿ ರಾಜಕೀಯ ಹೈಡ್ರಾಮಾ: ಚಂದ್ರಬಾಬು ನಾಯ್ಡು ಗೃಹಬಂಧನ

|
Google Oneindia Kannada News

Recommended Video

ಆಂಧ್ರದಲ್ಲಿ ಎನ್. ಚಂದ್ರಬಾಬು ನಾಯ್ಡು, ಪುತ್ರ ನಾರಾ ಲೋಕೇಶ್ ಸೇರಿದಂತೆ ಹಲವು ಮುಖಂಡರನ್ನು ಗೃಹಬಂಧನ

ನವದೆಹಲಿ, ಸೆಪ್ಟೆಂಬರ್ 11: ಆಂಧ್ರಪ್ರದೇಶದಲ್ಲಿ ವೈಎಸ್ ಆರ್ ಕಾಂಗ್ರೆಸ್ ಸರ್ಕಾರ ನೂರು ದಿನಗಳನ್ನು ಪೂರೈಸುತ್ತಿದ್ದಂತೆಯೇ ರಾಜಕೀಯ ಹೈಡ್ರಾಮಾ ಆರಂಭವಾಗಿದೆ.

ತೆಲುಗು ದೇಶಂ ಪಕ್ಷದ(ಟಿಡಿಪಿ) ಮುಖಂಡರಿಗೆ ಬೆದರಿಕೆ ಒಡ್ಡಲಾಗುತ್ತಿದೆ ಎಂದು ದೂರಿ ಮಾಜಿ ಮುಖ್ಯಮಂತ್ರಿ ಎನ್. ಚಂದ್ರಬಾಬು ನಾಯ್ಡು, ಪುತ್ರ ನಾರಾ ಲೋಕೇಶ್ ಸೇರಿದಂತೆ ಹಲವು ಮುಖಂಡರನ್ನು ಗೃಹಬಂಧನದಲ್ಲಿರಿಸಲಾಗಿದೆ.

ಆಂಧ್ರದಲ್ಲಿ ಭಾರೀ ಸಂಚಲನ: ವೈಎಸ್ ಜಗನ್ ಐತಿಹಾಸಿಕ ನಿರ್ಧಾರ?ಆಂಧ್ರದಲ್ಲಿ ಭಾರೀ ಸಂಚಲನ: ವೈಎಸ್ ಜಗನ್ ಐತಿಹಾಸಿಕ ನಿರ್ಧಾರ?

ಮುಖ್ಯಮಂತ್ರಿ ಜಗನ್ ಮೋಹನ್ ರೆಡ್ಡಿ ನೇತೃತ್ವದ ವೈಎಸ್ ಆರ್ ಕಾಂಗ್ರೆಸ್ ಸರ್ಕಾರದ ವಿರುದ್ಧ ಪ್ರತಿಭಟನೆ ನಡೆಸುತ್ತಿದ್ದ ಮಾಜಿ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಮತ್ತು ಕೆಲವು ಮುಖಂಡರು 12 ಗಂಟೆಗಳ ಕಾಲ ಉಪವಾಸ ಸತ್ಯಾಗ್ರಹ ನಡೆಸಲು ಮುಂದಾಗಿದ್ದರು. ಆದರೆ ಅದಕ್ಕೂ ಮೊದಲೇ ಅವರನ್ನು ಗೃಹಬಂಧನದಲ್ಲಿರಿಸಲಾಗಿದೆ.

Andhra Pradesh: Chandrababu Naidu under house arrest

ನಿಮ್ಮ 'ನಾಯಿ'ಯನ್ನು ಹದ್ದುಬಸ್ತಿನಲ್ಲಿಡಿ: ನಾಯ್ಡುಗೆ ಟಿಡಿಪಿ ಸಂಸದನ ವಾರ್ನಿಂಗ್ನಿಮ್ಮ 'ನಾಯಿ'ಯನ್ನು ಹದ್ದುಬಸ್ತಿನಲ್ಲಿಡಿ: ನಾಯ್ಡುಗೆ ಟಿಡಿಪಿ ಸಂಸದನ ವಾರ್ನಿಂಗ್

ಟಿಡಿಪಿ ಪ್ರತಿಭಟನೆಗೆ ಪ್ರತಿಯಾಗಿ, ನಾಯ್ಡು ಆಡಳಿತಾವಧಿಯಲ್ಲಿ ಆಂಧ್ರದ ಕೆಲವು ಪ್ರದೇಶಗಳಲ್ಲಿ ಸರ್ಕಾರವೇ ನಡೆಸಿದ್ದ ಹಿಂಸಾಚಾರಗಳ ಬಗ್ಗೆ ಮಾತಣಾಡಿರುವ ವೈಎಸ್ ಆರ್ ಕಾಂಗ್ರೆಸ್, ಅಂಥ ಯಾವುದೇ ಹಿಂಸೆ ನಡೆದಿದ್ದರೂ ಜನರು ಮುಂದೆ ಬಂದು ದೂರು ನೀಡಿ, ನಾವು ಪರಿಹಾರ ದೊರಕಿಸಿಕೊಡುತ್ತೇವೆ ಎಂದಿದೆ. ಈ ಮೂಲಕ ಟಿಡಿಪಿ ನಾಯಕರಿಗೆ ಮತ್ತಷ್ಟು ಸಂಕಷ್ಟವನ್ನು ಉಂಟು ಮಾಡಲು ಮುಂದಾಗಿದೆ.

English summary
Former CM of Andra Pradesh Chandrababu Naidu under house arrest for protesting against YSR Congress
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X