ಪ್ರಯಾಣಿಕರಿಗೆ ಸೂಚನೆ: ಈ ರೈಲು ಕ್ಯಾನ್ಸಲ್, ಆ ರೈಲುಮಾರ್ಗ ಬದಲು
ಹೈದರಾಬಾದ್, ಡಿ. 18: ದಕ್ಷಿಣ ಮಧ್ಯ ವಲಯ ರೈಲ್ವೆ ವಿಭಾಗದಿಂದ ರೈಲು ಮಾರ್ಗ ಬದಲು, ರೈಲ್ವೆ ಸೇವೆ ರದ್ದುಗೊಳಿಸಿರುವ ಬಗ್ಗೆ ಪ್ರಕಟಣೆ ಹೊರಡಿಸಿದೆ.
ಗುಂತಕಲ್ ಡಿವಿಷನ್ -ಗೂಡೂರು-ತಿರುಪತಿ ವಿಭಾಗದಲ್ಲಿರುವ ತಿರುಚಾನೂರು ಬಳಿ ಸುರಕ್ಷತೆಗೆ ಸಂಬಂಧಿಸಿದಂತೆ ಉನ್ನತೀಕರಣ ಕಾಮಗಾರಿ ಜಾರಿಯಲ್ಲಿದೆ. ಹೀಗಾಗಿ ಕೆಲವು ರೈಲುಗಳ ಮಾರ್ಗ ಬದಲಾವಣೆ ಮಾಡಲಾಗಿದೆ. ಕೆಲ ರೈಲುಗಳು ರದ್ದಾಗಿವೆ ಎಂದು ದಕ್ಷಿಣ ಮಧ್ಯ ವಲಯ ರೈಲ್ವೆ ವಿಭಾಗದ ವಕ್ತಾರರು ತಿಳಿಸಿದ್ದಾರೆ.
ರದ್ದಾಗಿರುವ
ರೈಲು
ಮಾರ್ಗಗಳು:
ರೈಲು
ಸಂಖ್ಯೆ:
08479
1.
ಭುವನೇಶ್ವರ-ತಿರುಪತಿ
ಸ್ಪೆಷಲ್
ಎಕ್ಸ್
ಪ್ರೆಸ್
*
ಡಿಸೆಂಬರ್
19,
2020ರಂದು
ಭುವನೇಶ್ವರದಿಂದ
ಹೊರಡಲು
ನಿಗದಿಯಾಗಿತ್ತು.
ಆದರೆ,
ಈಗ
ರದ್ದು
ಮಾಡಲಾಗಿದೆ.
2.
ರೈಲು
ಸಂಖ್ಯೆ:
08480
ತಿರುಪತಿ
-ಭುವನೇಶ್ವರ
ಸ್ಪೆಷಲ್
ಎಕ್ಸ್
ಪ್ರೆಸ್
*
ಡಿಸೆಂಬರ್
20,
2020ರಂದು
ತಿರುಪತಿಯಿಂದ
ಹೊರಡಲು
ನಿಗದಿಯಾಗಿದ್ದ
ರೈಲು
ರದ್ದು
ಮಾಡಲಾಗಿದೆ.
***
ಮಾರ್ಗ
ಬದಲಾವಣೆಯಾದ
ರೈಲು:
1.
ರೈಲು
ಸಂಖ್ಯೆ:
02890
ಯಶವಂತಪುರ
-ಟಾಟಾ
ಸ್ಪೆಷಲ್
ಎಕ್ಸ್
ಪ್ರೆಸ್
*
ಡಿಸೆಂಬರ್
21,
2020ರಂದು
ಯಶವಂತಪುರದಿಂದ
ಹೊರಡಲು
ನಿಗದಿಯಾಗಿದ್ದ
ರೈಲು
ಮಾರ್ಗ
ಬದಲಾಗಿದ್ದು,
ಕಾಟ್ಪಡಿ,
ಮೆಲ್ಪಾಕ್ಕಂ,
ರೇಣಿಗುಂಟ,
ಗೂಡೂರು
ತಲುಪಲಿದೆ.
ತಿರುಪತಿಗೆ
ಹೋಗದೆ
ಗೂಡೂರು
ಸೇರಲಿದೆ.
***
2.
ರೈಲು
ಸಂಖ್ಯೆ:
02836
ಯಶವಂತಪುರ
-ಹಾತಿಯಾ
ಸ್ಪೆಷಲ್
ಎಕ್ಸ್
ಪ್ರೆಸ್
*
ಡಿಸೆಂಬರ್
25,
2020ರಂದು
ಯಶವಂತಪುರದಿಂದ
ಹೊರಡಲು
ನಿಗದಿಯಾಗಿದ್ದ
ರೈಲು
ಕೂಡಾ
ಚಿತ್ತೂರು,
ತಿರುಪತಿ
ತಲುಪದೆ
ಮಾರ್ಗ
ಬದಲಾಯಿಸಿ
ಕಾಟ್ಪಡಿ,
ಮೆಲ್ಪಾಕ್ಕಂ,
ರೇಣಿಗುಂಟ,
ಗೂಡೂರು
ತಲುಪಲಿದೆ.
ಪ್ರಯಾಣಿಕರ ಸುರಕ್ಷತೆ ಅಗತ್ಯ ಸುಧಾರಣಾ ಕಾಮಗಾರಿಗಳನ್ನು ಈ ಮಾರ್ಗಗಳಲ್ಲಿ ಕೈಗೊಳ್ಳಲಾಗಿದ್ದು, ಹೀಗಾಗಿ ಪ್ರಯಾಣಿಕರು ಸಹಕರಿಸಬೇಕಾಗಿ ವಲಯದ ಅಧಿಕಾರಿಗಳು ಕೋರಿದ್ದಾರೆ.