ಸಿಎಎ ಪ್ರತಿಗಳನ್ನು ಸುಟ್ಟು ಪ್ರತಿಭಟನೆ: ಜಿಗ್ನೇಶ್ ಮೇವಾನಿ
ಅಹಮದಾಬಾದ್, ಜನವರಿ 9: ಪೌರತ್ವ ತಿದ್ದುಪಡಿ ಕಾಯ್ದೆಯನ್ನು (ಸಿಎಎ) ವಿರೋಧಿಸಿ ಅದರ ಪ್ರತಿಗಳನ್ನು ಅಹಮದಾಬಾದ್ನ 12 ಕಡೆಗಳಲ್ಲಿ ಸುಟ್ಟುಹಾಕುವುದಾಗಿ ಶಾಸಕ ಜಿಗ್ನೇಶ್ ಮೇವಾನಿ ತಿಳಿಸಿದ್ದಾರೆ.
ರೈತರು, ಮಹಿಳೆಯರು, ಕಾರ್ಮಿಕರು, ಬುಡಕಟ್ಟು ಸಮುದಾಯದವರು, ಮೀನುಗಾರರು, ಅಲೆಮಾರಿಗಳು ಮತ್ತು ಆದಿವಾಸಿಗಳ ಸಂಘಟನೆಗಳು ಸ್ವಪ್ರೇರಣೆಯಿಂದ ಪಾಲ್ಗೊಳ್ಳಲಿವೆ ಎಂದು ಅವರು ಹೇಳಿದ್ದಾರೆ. ಗುಜರಾತ್ನಲ್ಲಿನ ಬಿಜೆಪಿ ಸರ್ಕಾರವು ವಿಧಾನಸಭೆಯಲ್ಲಿ ಕಾಯ್ದೆ ಬೆಂಬಲಿಸಲು ನಿರ್ಣಯ ಅಂಗೀಕರಿಸಿದ ಹಿನ್ನೆಲೆಯಲ್ಲಿ ಈ ಪ್ರತಿಭಟನೆಯ ಮಾರ್ಗ ನಡೆಸಲು ನಿರ್ಧರಿಸಲಾಗಿದೆ.
ಸಿಎಎ ವಿರುದ್ಧ ಪ್ರತಿಭಟನೆ ಮಧ್ಯೆಯೇ ಪಾಕ್ ಮಹಿಳೆಗೆ ಭಾರತದ ಪೌರತ್ವ
ಗುಜರಾತ್ ಸರ್ಕಾರವು ಸಿಎಎ ಬೆಂಬಲಿಸಿ ಜ.10ರಂದು ವಿಧಾನಸಭೆಯಲ್ಲಿ ವಿಶೇಷ ಅಧಿವೇಶನ ಕರೆದಿದೆ. ಸಿಎಎ, ಉದ್ದೇಶಿತ ರಾಷ್ಟ್ರಯ ಪೌರತ್ವ ನೋಂದಣಿ ಮತ್ತು ರಾಷ್ಟ್ರೀಯ ಜನಸಂಖ್ಯಾ ನೋಂದಣಿ ವಿರುದ್ಧ ರಾಜ್ಯದಲ್ಲಿ ಸಂಘಟನೆಗಳು ಅಸಹಕಾರ ಚಳವಳಿ ನಡೆಸಲು ತೀರ್ಮಾನಿಸಿವೆ.
ಸುದ್ದಿಗೋಷ್ಠಿಯಲ್ಲಿ ಬುಧವಾರ ಮಾತನಾಡಿದ ಜಿಗ್ನೇಶ್ ಮೇವಾನಿ, ವಿಧಾನಸಭೆಯಲ್ಲಿ ಅಂಗೀಕಾರವಾಗಲಿರುವ ಸಿಎಎ ಪರ ನಿರ್ಣಯವನ್ನು ವಿರೋಧಿಸಲು ನಾವೆಲ್ಲರೂ 'ನಾವು ಭಾರತದ ಜನರು' ಎಂಬ ಅನೌಪಚಾರಿಕ ಬ್ಯಾನರ್ ಅಡಿಯಲ್ಲಿ ಒಟ್ಟಾಗಿದ್ದೇವೆ. ನಾವು ಸಿಎಎ, ಎನ್ಆರ್ಸಿ ಮತ್ತು ಎನ್ಪಿಆರ್ಅನ್ನು ಬೆಂಬಲಿಸುವುದಿಲ್ಲ ಎಂದರು.
ಹಿಂಸಾಚಾರ ನಿಂತ ಬಳಿಕವೇ ಸಿಎಎ ಕುರಿತಾದ ಅರ್ಜಿಗಳ ವಿಚಾರಣೆ: ಸಿಜೆಐ
ಗುಜರಾತ್ ವಿಧಾನಸಭೆಯಲ್ಲಿ ಸಿಎಎ ಬೆಂಬಲಿಸುವ ನಿರ್ಣಯ ಅಂಗೀಕಾರವಾದ ದಿನವೇ ನಮ್ಮ ಸಂಘಟನೆಗಳು ಈ ಕರಾಳ ಕಾಯ್ದೆಯ ಪ್ರತಿಗಳನ್ನು ಸುಟ್ಟುಹಾಕುವ ಮೂಲಕ ಅಹ್ಮದಾಬಾದ್ನ 12 ಸ್ಥಳಗಳಲ್ಲಿ ಹೋಳಿಯಾಡಲಿವೆ ಎಂದು ತಿಳಿಸಿದರು.
ಸಿಎಎ ಸಂವಿಧಾನ ವಿರೋಧಿ: ನೊಬೆಲ್ ಪುರಸ್ಕೃತ ಅಮಾರ್ಥ್ಯ ಸೇನ್
ನಿರುದ್ಯೋಗ, ಶಿಕ್ಷಣ ಮತ್ತು ಆರೋಗ್ಯ ಕ್ಷೇತ್ರಗಳ ಖಾಸಗೀಕರಣ, ಹಣದುಬ್ಬರ ಮತ್ತು ಸಾರ್ವಜನಿಕ ವಲಯದ ಘಟಕಗಳನ್ನು ಮಾರಾಟ ಮಾಡುತ್ತಿರುವಂತಹ ವಾಸ್ತವ ಸಮಸ್ಯೆಗಳಿಂದ ಜನರ ಗಮನವನ್ನು ಬೇರೆಡೆಗೆ ಸೆಳೆಯಲು ಕೇಂದ್ರ ಸರ್ಕಾರವು ಸಿಎಎ, ಎನ್ಪಿಆರ್ ಮತ್ತು ಎನ್ಆರ್ಸಿಯಂತಹ ಯೋಜನೆಗಳನ್ನು ಜಾರಿ ಮಾಡುತ್ತಿದೆ ಎಂದು ಆರೋಪಿಸಿದರು.