ಹಾರ್ದಿಕ್ ಪಟೇಲ್ಗೆ ಕಪಾಳಮೋಕ್ಷ ಮಾಡಲು ಹಿಂದಿದ್ದ ಕಾರಣ ಬಿಚ್ಚಿಟ್ಟ ವ್ಯಕ್ತಿ
ಅಹಮದಾಬಾದ್, ಏ.19: ಕಾಂಗ್ರೆಸ್ ಮುಖಂಡ ಹಾರ್ದಿಕ್ ಪಟೇಲ್ಗೆ ಬಹಿರಂಗ ಸಭೆಯಲ್ಲಿ ಕಪಾಳ ಮೋಕ್ಷ ಮಾಡಲು ಇದ್ದ ಕಾರಣವನ್ನು ವ್ಯಕ್ತಿ ಬಿಚ್ಚಿಟ್ಟಿದ್ದಾರೆ.
ಯಾವುದೋ ಜಾತಿ, ರಾಜಕೀಯ ದ್ವೇಷದಿಂದ ನಾನು ಹಾರ್ದಿಕ್ಗೆ ಹೊಡೆದಿಲ್ಲ, ಪಾಟಿದಾರ್ ಸಮುದಾಯಕ್ಕೆ ಮೀಸಲಾತಿಗಾಗಿ ದೊಡ್ಡ ಪ್ರತಿಭಟನೆ ನಡೆಸಿದ್ದರು.
ಬಹಿರಂಗ ಸಭೆಯಲ್ಲಿ ಕಾಂಗ್ರೆಸ್ ಮುಖಂಡ ಹಾರ್ದಿಕ್ ಪಟೇಲ್ಗೆ ಕಪಾಳಮೋಕ್ಷ
ಆ ಸಂದರ್ಭದಲ್ಲಿ ನನ್ನ ಪತ್ನಿ ಗರ್ಭಿಣಿಯಾಗಿದ್ದರು. ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆ ಸಂದರ್ಭದಲ್ಲಿ ಪತ್ನಿ ಹಾಗೂ ನನಗೆ ಸಾಕಷ್ಟು ತೊಂದರೆಯಾಗಿತ್ತು. ಒಂದು ದಿನ ಹಾರ್ದಿಕ್ ಪಟೇಲ್ಗೆ ಹೊಡೆದು ಕೋಪವನ್ನು ತೀರಿಸಿಕೊಳ್ಳಬೇಕು ಎಂದುಕೊಂಡಿದ್ದೆ ಅಂತೂ ಅವರಿಗೆ ತಕ್ಕ ಪಾಠ ಕಲಿಸಿದ್ದೇನೆ ಎಂದು ವ್ಯಕ್ತಿ ತಿಳಿಸಿದ್ದಾರೆ.
ಹಾರ್ದಿಕ್ಗೆ ಹೊಡೆದ ವ್ಯಕ್ತಿಯ ವಿರುದ್ಧ ಹಾರ್ದಿಕ್ ಸುರೇಂದ್ರನಗರದಲ್ಲಿ ದೂರು ದಾಖಲಿಸಿದ್ದಾರೆ.
ಗುಜರಾತ್ನ ಸುರೇಂದ್ರನಗರದಲ್ಲಿ ಕಾಂಗ್ರೆಸ್ ಬಹಿರಂಗ ಸಮಾವೇಶ ನಡೆಯುತ್ತಿರುವ ಸಂದರ್ಭದಲ್ಲಿ ಏಕಾಏಕಿ ವ್ಯಕ್ತಿಯೊಬ್ಬರು ಬಂದು ಹಾರ್ದಿಕ್ ಪಟೇಲ್ಗೆ ಕಪಾಳಮೋಕ್ಷ ಮಾಡಿದ್ದರು. ಬಳಿಕ ಕಾಂಗ್ರೆಸ್ ಕಾರ್ಯಕರ್ತರು, ಸಾರ್ವಜನಿಕರು ಎಲ್ಲರೂ ವ್ಯಕ್ತಿಯನ್ನು ಥಳಿಸಿದ್ದ ಕಾರಣ ಇದೀಗ ಆಸ್ಪತ್ರೆಯಲ್ಲಿ ಆತ ಚಿಕಿತ್ಸೆ ಪಡೆಯುತ್ತಿದ್ದಾರೆ.