ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಪಟೇಲರ ಪ್ರತಿಮೆ ಉದ್ಘಾಟನೆಗೆ ಮೊಮ್ಮಗನೇ ಹೋಗಿಲ್ಲ, ಕಾರಣ ಏನು?

|
Google Oneindia Kannada News

ಅಹ್ಮದಾಬಾದ್, ಅಕ್ಟೋಬರ್ 31: ಜಗತ್ತಿನ ಅತಿ ಎತ್ತರದ ಪಟೇಲರ ಪ್ರತಿಮೆ ಇಂದು ಉದ್ಘಾಟನೆಯಾಗಿದೆ. ಆದರೆ ಈ ಪ್ರತಿಮೆ ಉದ್ಘಾಟನೆ ಸರ್ದಾರ ಪಟೇಲರ ಸ್ವಂತ ಮೊಮ್ಮಗನೇ ಹಾಜರಾಗಿಲ್ಲ.

ಹೌದು, ಸಾವಿರಾರು ಜನ ಸರ್ದಾರ ಪಟೇಲರ ಪ್ರತಿಮೆ ಉದ್ಘಾಟನೆಯನ್ನು ನೇರವಾಗಿ, ಲಕ್ಷಾಂತರ ಜನ ಟಿವಿ, ಮೊಬೈಲ್‌ಗಳ ಮೂಲಕ ನೋಡಿ ಕಣ್ತುಂಬಿಕೊಂಡಿದ್ದಾರೆ ಆದರೆ ಸರ್ದಾರ ಪಟೇಲರ ನೇರ ಮೊಮ್ಮಗ ಮತ್ತು ಅವರ ಕುಟುಂಬ ಭಾಗವಹಿಸಿಲ್ಲ.

ಪಟೇಲರ ಪ್ರತಿಮೆಯನ್ನು ವಿರೋಧಿಸುತ್ತಿರುವವರು ಯಾರು? ಅವರ ವಾದ ಏನು?ಪಟೇಲರ ಪ್ರತಿಮೆಯನ್ನು ವಿರೋಧಿಸುತ್ತಿರುವವರು ಯಾರು? ಅವರ ವಾದ ಏನು?

ಸರ್ದಾರ ಪಟೇಲರ ಇಬ್ಬರು ಮೊಮ್ಮಕ್ಕಳಲ್ಲಿ ಈಗ ಬದುಕಿರುವುದು ಒಬ್ಬರು ಮಾತ್ರವೇ. ಅವರ ಹೆಸರು ಗೌತಮ್ ಪಟೇಲ್‌. ಸರ್ದಾರರ ಮೊಮ್ಮಗ ಉದ್ಘಾಟನೆ ಕಾರ್ಯಕ್ರಮದಲ್ಲಿ ಹಾಜರಿರಬೇಕೆಂದು ಗುಜರಾತ್ ಮುಖ್ಯಮಂತ್ರಿಗಳ ಕಚೇರಿಯಿಂದ ಕೊನೆಯ ಕ್ಷಣದ ಭಾರಿ ಪ್ರಯತ್ನಗಳು ಮಾಡಲಾಯಿತಾದರೂ ಅವರನ್ನು ಕಾರ್ಯಕ್ರಮಕ್ಕೆ ಕರೆತರಲಾಗಿಲ್ಲ.

ಅಮೆರಿಕಕ್ಕೆ ತೆರಳಿದ ಮೊಮ್ಮಗ

ಅಮೆರಿಕಕ್ಕೆ ತೆರಳಿದ ಮೊಮ್ಮಗ

ಗೌತಮ್ ಪಟೇಲ್ ಅವರು ಒಂದು ತಿಂಗಳ ಹಿಂದೆಯೇ ಅಮೆರಿಕಕ್ಕೆ ತಮ್ಮ ಮಡದಿಯೊಂದಿಗೆ ತೆರಳಿಬಿಟ್ಟಿದ್ದರು. ಅವರ ಮಕ್ಕಳು ಹಾಗೂ ಮೊಮ್ಮಕ್ಕಳು ಅಲ್ಲಿಯೇ ವಾಸವಿದ್ದಾರೆ. ಅವರು ಕೊನೆಕ್ಷಣದಲ್ಲಿ ಬರಲಾಗದ ಕಾರಣದಿಂದ ಅವರು ಕಾರ್ಯಕ್ರಮಕ್ಕೆ ಗೈರಾಗಿದ್ದಾರೆ.

ನಾಯಿಗಳ ಮದುವೆಗೆ 20 ಲಕ್ಷ ಖರ್ಚು ಮಾಡಿದ್ದ ನವಾಬ ಹಾಗೂ ಸರ್ದಾರ್ ಸಾಹಸ ನಾಯಿಗಳ ಮದುವೆಗೆ 20 ಲಕ್ಷ ಖರ್ಚು ಮಾಡಿದ್ದ ನವಾಬ ಹಾಗೂ ಸರ್ದಾರ್ ಸಾಹಸ

ಮೊಮ್ಮಗ ಬಿಟ್ಟು ಉಳಿದವರು ಹಾಜರು

ಮೊಮ್ಮಗ ಬಿಟ್ಟು ಉಳಿದವರು ಹಾಜರು

ಆದರೆ ಸರ್ದಾರ ಪಟೇಲರ ಸಹೋದರರ ಮಕ್ಕಳು, ಮೊಮ್ಮಕ್ಕಳು ಕಾರ್ಯಕ್ರಮಕ್ಕೆ ಹಾಜರಾಗಿದ್ದರು. ಸರಿ ಸುಮಾರು 30 ಜನ ಸರ್ದಾರ ಪಟೇಲರ ವಂಶಸ್ಥರು ಕಾರ್ಯಕ್ರಮದಲ್ಲಿ ಹಾಜರಿದ್ದರು. ಆದರೆ ಸರ್ದಾರರ ನೇರ ಮೊಮ್ಮಗ ಕಾರ್ಯಕ್ರಮಕ್ಕೆ ಬರಲಾಗದಿದ್ದುದು ಎದ್ದು ಕಾಣುತ್ತಿತ್ತು.

ಜಗತ್ತಿನ ಅತಿ ಎತ್ತರದ ಸರ್ದಾರ್ ಪಟೇಲ್ ಪ್ರತಿಮೆಯಲ್ಲಿ ಏನೇನಿದೆ? ಮಾಹಿತಿ ಇಲ್ಲಿದೆ... ಜಗತ್ತಿನ ಅತಿ ಎತ್ತರದ ಸರ್ದಾರ್ ಪಟೇಲ್ ಪ್ರತಿಮೆಯಲ್ಲಿ ಏನೇನಿದೆ? ಮಾಹಿತಿ ಇಲ್ಲಿದೆ...

ಸಾರ್ವಜನಿಕ ಕಾರ್ಯಕ್ರಮದಿಂದ ದೂರ

ಸಾರ್ವಜನಿಕ ಕಾರ್ಯಕ್ರಮದಿಂದ ದೂರ

ಗೌತಮ್‌ ಪಟೇಲ್‌ ಅವರು ಸಾರ್ವಜನಿಕ ಕಾರ್ಯಕ್ರಮಗಳಿಂದ ದೂರ ಉಳಿಯುವ ಮನಸ್ಥಿತಿಯವರಾಗಿದ್ದಾರೆ ಎಂದು ಸರ್ದಾರ್ ಪಟೇಲರ ಇತರ ವಂಶಸ್ಥರು ಮಾಧ್ಯಮಗಳಿಗೆ ತಿಳಿಸಿದ್ದಾರೆ.

ಸರ್ದಾರ್ ಪಟೇಲ್ ಸ್ಮರಣೆಯ ಏಕತಾ ಪ್ರತಿಮೆ ನಿರ್ಮಾಣ ಟೈಮ್ ಲೈನ್ಸರ್ದಾರ್ ಪಟೇಲ್ ಸ್ಮರಣೆಯ ಏಕತಾ ಪ್ರತಿಮೆ ನಿರ್ಮಾಣ ಟೈಮ್ ಲೈನ್

ಭಾರತ ರತ್ನ ಪಡೆದಿದ್ದ ಗೌತಮ್‌ ಪಟೇಲ್‌

ಭಾರತ ರತ್ನ ಪಡೆದಿದ್ದ ಗೌತಮ್‌ ಪಟೇಲ್‌

ಸರ್ದಾರ ಪಟೇಲರ ಮೊಮ್ಮಗ ಗೌತಮ್‌ ಅವರು 1991 ರಲ್ಲಿ ಸರ್ದಾರ ಪಟೇಲರಿಗೆ ನೀಡಲಾದ ಭಾರತ ರತ್ನವನ್ನು ಅವರೇ ತೆಗೆದುಕೊಂಡಿದ್ದರು. ಅದೇ ಅವರು ಭಾಗಿಯಾದ ಕೊನೆಯ ಸಾರ್ವಜನಿಕ ಹಾಗೂ ಸರ್ಕಾರಿ ಪ್ರಯೋಜಿತ ಕಾರ್ಯಕ್ರಮ ಎಂದು ಅವರ ಸಂಬಂಧಿಗಳು ಹೇಳಿದ್ದಾರೆ.

English summary
Sardar Patel's grand son Gowtham Patel did not attend the inauguration function of statue of liberty. Gujarat CMO tried hard to bring him but he left to USA a month ago.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X