2017ರ ಪ್ರಕರಣದಲ್ಲಿ ಜಿಗ್ನೇಶ್ ಮೆವಾನಿ ಸೇರಿದಂತೆ 9 ಮಂದಿಗೆ ಜೈಲು ಶಿಕ್ಷೆ
ಗುಜರಾತ್ ಮೇ 6: ಗುಜರಾತ್ನ ಮೆಹ್ಸಾನಾದಲ್ಲಿನ ಸ್ಥಳೀಯ ಮ್ಯಾಜಿಸ್ಟ್ರೇಟ್ ನ್ಯಾಯಾಲಯ ಐದು ವರ್ಷಗಳ ಹಿಂದಿನ ಪ್ರಕರಣದಲ್ಲಿ ಕಾರ್ಯಕರ್ತ ಮತ್ತು ಸ್ವತಂತ್ರ ಶಾಸಕ ಜಿಗ್ನೇಶ್ ಮೆವಾನಿ ಮತ್ತು ಇತರ ಒಂಬತ್ತು ಜನರನ್ನು ದೋಷಿ ಎಂದು ಗುರುವಾರ ತೀರ್ಪು ನೀಡಿದೆ.
Jai Samvidhan, Jai Hind. pic.twitter.com/56l63QV9sw
— Jignesh Mevani (@jigneshmevani80) May 5, 2022
ಜುಲೈ 2017 ರಲ್ಲಿ ಪೊಲೀಸ್ ಅನುಮತಿಯಿಲ್ಲದೆ ಮೆಹ್ಸಾನಾದಿಂದ ಬನಸ್ಕಾಂತ ಜಿಲ್ಲೆಯ ಧನೇರಾಗೆ 'ಆಜಾದಿ ಮೆರವಣಿಗೆ' ತೆರಳದಿಕ್ಕಾಗಿ ನ್ಯಾಯಾಲಯ ಅವರಿಗೆ ಮೂರು ತಿಂಗಳ ಜೈಲು ಶಿಕ್ಷೆಯನ್ನು ವಿಧಿಸಿದೆ. ಮೆವಾನಿ ಜೊತೆಗೆ, ಎನ್ಸಿಪಿ ನಾಯಕಿ ಮತ್ತು ಪಾಟಿದಾರ್ ಆಂದೋಲನದ ಮಾಜಿ ಸದಸ್ಯೆ ರೇಷ್ಮಾ ಪಟಾಲ್ ಕೂಡ ಇದ್ದಾರೆ. ಅವರನ್ನು ಭಾರತೀಯ ದಂಡ ಸಂಹಿತೆಯ ಸೆಕ್ಷನ್ 143 ರ ಅಡಿಯಲ್ಲಿ ಅಪರಾಧಿ ಎನ್ನಲಾಗಿದೆ. ಶಿಕ್ಷೆಯ ಜೊತೆಗೆ ಎಲ್ಲಾ 10 ಅಪರಾಧಿಗಳಿಗೆ ತಲಾ 1,000 ದಂಡವನ್ನೂ ನ್ಯಾಯಾಲಯ ವಿಧಿಸಿದೆ.
ಗುಜರಾತ್ ಶಾಸಕ ಜಿಗ್ನೇಶ್ ಮೇವಾನಿ ಬಂಧನಕ್ಕೆ ಏನು ಕಾರಣ?
"ನಾವು ತೀರ್ಪಿನ ವಿರುದ್ಧ ಸೆಷನ್ಸ್ ನ್ಯಾಯಾಲಯದಲ್ಲಿ ಮೇಲ್ಮನವಿ ಸಲ್ಲಿಸುತ್ತೇವೆ" ಎಂದು ನ್ಯಾಯಾಲಯ ತನ್ನ ತೀರ್ಪು ನೀಡಿದ ನಂತರ ಮೆಹ್ಸಾನಾದಲ್ಲಿ ಮಾಧ್ಯಮ ಪ್ರತಿನಿಧಿಗಳಿಗೆ ಮೆವಾನಿ ಹೇಳಿದರು.
ಆದೇಶಕ್ಕೆ ತಡೆಯಾಜ್ಞೆ ನೀಡುವಂತೆ ಮೆವಾನಿ ಅವರ ಮನವಿಯನ್ನು ನ್ಯಾಯಾಲಯ ಅಂಗೀಕರಿಸಿತು ಮತ್ತು ಅವರು ಉಚ್ಚ ನ್ಯಾಯಾಲಯದಲ್ಲಿ ಮೇಲ್ಮನವಿ ಸಲ್ಲಿಸುವವರೆಗೆ ಎಲ್ಲಾ ಅಪರಾಧಿಗಳಿಗೆ ಜಾಮೀನು ನೀಡಿತು. ಮೂಲತಃ ಎಫ್ಐಆರ್ನಲ್ಲಿ 12 ಆರೋಪಿಗಳನ್ನು ಹೆಸರಿಸಲಾಗಿತ್ತು. ಆದರೆ ವಿಚಾರಣೆ ವೇಳೆ ಓರ್ವ ವ್ಯಕ್ತಿ ಸಾವನ್ನಪ್ಪಿದ್ದು, ಮತ್ತೊಬ್ಬ ತಲೆಮರೆಸಿಕೊಂಡಿದ್ದಾನೆ.
ಘಟನೆಯ ಸಮಯದಲ್ಲಿ ಶ್ರೀಮತಿ ಪಟೇಲ್ ಯಾವುದೇ ರಾಜಕೀಯ ಸಂಘಟನೆಯ ಭಾಗವಾಗಿರಲಿಲ್ಲ. ಅವರು ಪಾಟಿದಾರ್ ಅನಾಮತ್ ಆಂದೋಲನ ಸಮಿತಿಯ (ಪಿಎಎಎಸ್) ಸದಸ್ಯರಾಗಿದ್ದರು. ಇದು ಉದ್ಯೋಗ ಮತ್ತು ಶಿಕ್ಷಣದಲ್ಲಿ ಕೋಟಾಗಳಿಗೆ ಒತ್ತಾಯಿಸಿ ರಾಜ್ಯಾದ್ಯಂತ ಆಂದೋಲನವನ್ನು ಆಯೋಜಿಸಿತ್ತು.