ಕೊರೊನಾ ಮಹಾಮಾರಿಗೆ ಹೆದರಿ ಮಹಿಳಾ ಐಎಎಸ್ ಅಧಿಕಾರಿ ರಾಜೀನಾಮೆ!
ಚಂಡೀಘರ್, ಮೇ.05: ನೊವೆಲ್ ಕೊರೊನಾ ವೈರಸ್ ಸೋಂಕಿನ ಹಾವಳಿಗೆ ಮತ್ತು ಭಾರತ ಲಾಕ್ ಡೌನ್ ಎಫೆಕ್ಟ್ ನಿಂದ ಸಾವಿರ ಸಾವಿರ ಜನರು ಉದ್ಯೋಗ ಕಳೆದುಕೊಳ್ಳುತ್ತಿದ್ದಾರೆ. ಆದರೆ ಹರಿಯಾಣದಲ್ಲಿ ಇದೇ ಕೊವಿಡ್-19ಗೆ ಹೆದರಿ ಮಹಿಳಾ ಐಎಎಸ್ ಅಧಿಕಾರಿಯೊಬ್ಬರು ತಮ್ಮ ಕೆಲಸಕ್ಕೆ ರಾಜೀನಾಮೆ ಸಲ್ಲಿಸಿದ್ದಾರೆ.
2014ನೇ ಬ್ಯಾಚ್ ನ ಐಎಎಸ್ ಅಧಿಕಾರಿ ರಾಣಿ ನಗರ್ ತಮ್ಮ ಹುದ್ದೆಗೆ ರಾಜೀನಾಮೆ ನೀಡಿದ್ದು ಇದೀಗ ಸಾಕಷ್ಟು ಸುದ್ದಿ ಆಗಿದೆ. ಸರ್ಕಾರಿ ಕರ್ತವ್ಯದಲ್ಲಿ ವೈಯಕ್ತಿಕ ಸುರಕ್ಷತೆವಿಲ್ಲ ಎಂಬ ಆತಂಕದಲ್ಲಿ ತಮ್ಮ ಹುದ್ದೆಗೆ ರಾಜೀನಾಮೆ ಸಲ್ಲಿಸಿರುವುದಾಗಿ ತಿಳಿದು ಬಂದಿದೆ.
ಕೊರೊನಾ ಸೋಂಕಿತನೊಂದಿಗೆ ನಂಟು; ಪಾಲಿಕೆ ಆಯುಕ್ತರಿಗೆ ಗೃಹ ದಿಗ್ಬಂಧನ!
ಮೇ.04ರಿಂದಲೇ ಜಾರಿಗೆ ಬರುವಂತೆ ಭಾರತೀಯ ಆಡಳಿತಾತ್ಮಕ ಸೇವೆ(ಐಎಎಸ್)ಯ ಹುದ್ದೆಗೆ ರಾಜೀನಾಮೆ ಸಲ್ಲಿಸುತ್ತಿದ್ದೇನೆ ಎಂದು ಮಹಿಳಾ ಐಎಸ್ಎ ಅಧಿಕಾರಿ ರಾಣಿ ನಗರ್ ತಮ್ಮ ರಾಜೀನಾಮೆ ಪತ್ರದಲ್ಲಿ ಉಲ್ಲೇಖಿಸಿದ್ದಾರೆ.
ಸರ್ಕಾರದ ಮುಖ್ಯ ಕಾರ್ಯದರ್ಶಿಗೆ ರಾಜೀನಾಮೆ ಪತ್ರ:
ಹರಿಯಾಣದಲ್ಲಿ
ಸಾಮಾಜಿಕ
ನ್ಯಾಯ
ಮತ್ತು
ಸಬಲೀಕರಣ
ಇಲಾಖೆಯ
ಹೆಚ್ಚುವರಿ
ನಿರ್ದೇಶಕರಾಗಿ
ರಾಣಿ
ನಗರ್
ಕರ್ತವ್ಯ
ನಿರ್ವಹಿಸುತ್ತಿದ್ದರು.
ಕಳೆದ
ಮೇ.04ರಂದೇ
ಐಎಎಸ್
ಅಧಿಕಾರಿ
ರಾಣಿ
ನಗರ್
ತಮ್ಮ
ರಾಜೀನಾಮೆ
ಪತ್ರವನ್ನು
ಹರಿಯಾಣ
ಸರ್ಕಾರದ
ಮುಖ್ಯ
ಕಾರ್ಯದರ್ಶಿಯವರಿಗೆ
ಸಲ್ಲಿಸಿದ್ದಾರೆ
ಎಂದು
ತಿಳಿದು
ಬಂದಿದೆ.
ಹರಿಯಾಣದಲ್ಲಿ
ಕೊರೊನಾ
ವೈರಸ್
ಸೋಂಕಿತರ
ಸಂಖ್ಯೆ
ದಿನೇ
ದಿನೆ
ಏರಿಕೆಯಾಗುತ್ತಿದೆ.
ಮಂಗಳವಾರದ
ಅಂಕಿ-ಅಂಶಗಳ
ಪ್ರಕಾರ
ರಾಜ್ಯದಲ್ಲಿ
31
ಹೊಸ
ಸೋಂಕಿತ
ಪ್ರಕರಣಗಳು
ಪತ್ತೆಯಾಗಿದ್ದು,
ಸೋಂಕಿತರ
ಸಂಖ್ಯೆ
548ಕ್ಕೆ
ಏರಿಕೆಯಾಗಿದೆ.
ಇದುವರೆಗೂ
ಹರಿಯಾಣದಲ್ಲಿ
ಕೊರೊನಾಗೆ
6
ಮಂದಿಯಷ್ಟೇ
ಬಲಿಯಾಗಿದ್ದು,
256
ಸೋಂಕಿತರು
ಗುಣಮುಖರಾಗಿದ್ದಾರೆ.