ಗಾಂಧಿ ನಾಡು ಗುಜರಾತ್ನಲ್ಲೇ ಮಹಾತ್ಮಾ ಗಾಂಧಿ ಶಿರಚ್ಛೇಧನ!
ಅಹ್ಮದಾಬಾದ್, ಜನವರಿ 04: ಮಹಾತ್ಮಾ ಗಾಂಧಿ ಅವರು ಹುಟ್ಟಿದ ಗುಜರಾತ್ನಲ್ಲಿಯೇ ಅವರ ಪ್ರತಿಮೆಯನ್ನು ಧ್ವಂಸ ಮಾಡಿ ವಿಕೃತಿ ಮೆರೆಯಲಾಗಿದೆ.
ಗುಜರಾತ್ನ ಆಮ್ರೇಲಿ ಜಿಲ್ಲೆಯ ಹರಿಕೃಷ್ಣ ಕೆರೆ-ಉದ್ಯಾನದ ಬಳಿ ನಿರ್ಮಿತವಾಗಿದ್ದ ಸುಂದರ ಮಹಾತ್ಮಾ ಗಾಂಧಿ ಪ್ರತಿಮೆಯನ್ನು ಧ್ವಂಸ ಮಾಡಿರುವ ಕಿಡಿಗೇಡಿಗಳು, ಗಾಂಧಿ ಅವರ ಪುತ್ಥಳಿಯ ಕತ್ತು ಮುರಿದು ಎಸೆದಿದ್ದಾರೆ. ಶುಕ್ರವಾರ ರಾತ್ರಿ ಈ ಘಟನೆ ನಡೆದಿದೆ.
ವಜ್ರದ ವ್ಯಾಪಾರಿ ಸಾವಜೀಭಾಯ್ ಡೋಲಾಕಿಯಾ ಅವರು ತಮ್ಮ ಡೋಲಾಕಿಯಾ ಎನ್ಜಿಓ ವತಿಯಿಂದ ಈ ಪ್ರತಿಮೆಯನ್ನು ನಿರ್ಮಿಸಿದ್ದರು. ಇದನ್ನು ಪ್ರಧಾನಿ ಮೋದಿ ಅವರೇ ಕಳೆದ ವರ್ಷ ಉದ್ಘಾಟಿಸಿದ್ದರು. ಈಗ ಅದನ್ನು ಕಿಡಿಗೇಡಿಗಳು ಧ್ವಂಸ ಮಾಡಿದ್ದಾರೆ.
ಕಿಡಿಗೇಡಿಗಳನ್ನು ಬಂಧಿಸಲು ಕ್ರಮ ಕೈಗೊಳ್ಳುತ್ತೇವೆ, ಇಲ್ಲಿ ಕೆರೆ ಕಟ್ಟಿರುವುದನ್ನು ವಿರೋಧಿಸಿ ಈ ಕೃತ್ಯ ಎಸಗಿರುವ ಸಂಭವ ಇದೆ. ಪ್ರಕರಣ ದಾಖಲಿಸಿಕೊಂಡಿದ್ದು, ತನಿಖೆ ನಡೆಯುತ್ತಿದೆ ಎಂದು ಲಾತಿ ಪೊಲೀಸ್ ಠಾಣೆ ಎಸ್ಐ ಹೇಳಿದ್ದಾರೆ.
ಗಾಂಧಿ ಮತ್ತು ಅಂಬೇಡ್ಕರ್ ಅವರ ಪ್ರತಿಮೆಗಳನ್ನು ಧ್ವಂಸಗೊಳಿಸುವ ಯತ್ನ ಹಿಂದಿನಿಂದಲೂ ನಡೆಯುತ್ತಲೇ ಬಂದಿದೆ.