ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಇಂದು ಉಗ್ರ ರೂಪ ಪಡೆಯಲಿರುವ 'ವಾಯು' ಚಂಡಮಾರುತ, ಗುಜರಾತಿನಲ್ಲಿ ಕಟ್ಟೆಚ್ಚರ

|
Google Oneindia Kannada News

ಅಹ್ಮದಾಬಾದ್, ಜೂನ್ 13: ಗುಜರಾತ್ ಗೆ ಅಪ್ಪಳಿಸಿರುವ ವಾಯು ಚಂಡಮಾರುತದ ಅಬ್ಬರ ಹೆಚ್ಚಾಗಿದ್ದು, ಇಂದು ಅದು ಉಗ್ರ ರೂಪ ಪಡೆಯುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಸೂಚನೆ ನೀಡಿರುವ ಹಿನ್ನೆಲೆಯಲ್ಲಿ, ಗುಜರಾತಿನಲ್ಲಿ ಕಟ್ಟೆಚ್ಚರ ವಹಿಸಲಾಗಿದೆ.

ಈಗಾಗಲೇ ಮುನ್ನೆಚ್ಚರಿಕೆಯ ದೃಷ್ಟಿಯಿಂದ 3 ಲಕ್ಷಕ್ಕೂ ಹೆಚ್ಚು ಜನರನ್ನು ಸುರಕ್ಷಿತ ಸ್ಥಳಕ್ಕೆ ಸ್ಥಲಾಂತರಿಸಲಾಗಿದೆ. ಗಾಳಿ ಗಂಟೆಗೆ 150 ಕಿಮೀ ಗೂ ಹೆಚ್ಚು ವೇಗವಾಗಿ ಚಲಿಸುತ್ತಿದ್ದು, ಚಂಡಮಾರುತ ಉಗ್ರ ಸ್ವರೂಪ ಪಡೆದಿದೆ ಎನ್ನಲಾಗಿದೆ. ಈಗಾಗಲೇ 6 ಜನರು ಚಂಡಮಾರುತದ ದಾಳಿಯಿಂದ ಮೃತರಾಗಿದ್ದು, ಹಲವರು ಗಾಯಗೊಂಡಿದ್ದಾರೆ. ಗುಜರಾತ್ ಮತ್ತು ದಿಯು ಮುಖಾಂತರ ಚಂಡಮಾರುತ ಚಲಿಸಲಿದೆ.

ನಾಳೆ ಗುಜರಾತ್‌ಗೆ 'ವಾಯು' ಚಂಡ ಮಾರುತ ಲಗ್ಗೆ: ಶಾಲಾ, ಕಾಲೇಜು ಬಂದ್ನಾಳೆ ಗುಜರಾತ್‌ಗೆ 'ವಾಯು' ಚಂಡ ಮಾರುತ ಲಗ್ಗೆ: ಶಾಲಾ, ಕಾಲೇಜು ಬಂದ್

Cyclone Vayu: More than 3 lakh people evacuated in Gujarat

ಸೈಕ್ಲೋನ್ ಉಂಟಾದ ಹಿನ್ನೆಲೆಯಲ್ಲಿ ಕೇಂದ್ರ ಮತ್ತು ಗುಜರಾತ್ ರಾಜ್ಯ ಸರ್ಕಾರಗಳು ಅಗತ್ಯ ಮುನ್ನೆಚ್ಚರಿಕಾ ಕ್ರಮ ಕೈಗೊಂಡಿದ್ದು, ಈ ಕುರಿತು ಗೃಹ ಸಚಿವ ಅಮಿತ್ ಶಾ ಟ್ವೀಟ್ ಮಾಡಿದ್ದಾರೆ.

ಮುಂದುವರಿದ 'ವಾಯು' ಚಂಡಮಾರುತದ ಅಬ್ಬರ: ರಾಜ್ಯದಲ್ಲೂ ಮಳೆ?ಮುಂದುವರಿದ 'ವಾಯು' ಚಂಡಮಾರುತದ ಅಬ್ಬರ: ರಾಜ್ಯದಲ್ಲೂ ಮಳೆ?

"ಸೈಕ್ಲೋಕ್ ಕಾರಣ ಈಗಾಗಲೇ ಮೂರು ಲ್ಷಕ್ಕೂ ಹೆಚ್ಚು ಜನರನ್ನು ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಿಸಲಾಗಿದ್ದು, ಭಾರತೀಯ ಕರಾವಳಿ ರಕಗ್ಶಃಣಾ ಪಡೆ, ನೌಕಾನೆಲೆ, ಭೂ ಮತ್ತು ವಾಯುಸೇನೆಯ ಸಿಬ್ಬಂದಿ ರಕ್ಷಣಾ ಕಾರ್ಯ ನಡೆಸುತ್ತಿದ್ದಾರೆ. ವಿಮಾನ ಮತ್ತು ಹೆಲಿಕಾಪ್ಟರ್ ಮುಲಗ ಅಗತ್ಯ ನೆರವು ನೀಡಲಾಗುತ್ತಿದೆ. ಜನರ ಸುರಕ್ಷತೆಗೆ ನಾನು ದೇವರಲ್ಲಿ ಪ್ರಾರ್ಥಿಸುತ್ತೇನೆ" ಎಂದು ಗೃಹಸಚಿವ ಅಮಿತ್ ಶಾ ಟ್ವೀಟ್ ಮಾಡಿದ್ದಾರೆ.

ವಾಯು ಚಂಡಮಾರುತದ ಪ್ರಭಾವದಿಂದ ಕರ್ನಾಟಕ ಮತ್ತು ಕೇರಳದ ಕರಾವಳಿ ಭಾಗದಲ್ಲೂ ಮಳೆಯಾಗುವ ಸಾಧ್ಯತೆ ಇದೆ ಎಂದು ಸ್ಕೈಮೆಟ್ ವರದಿ ತಿಳಿಸಿದೆ.

English summary
After Cyclone Vayu landfalls in Gujarat, the government evacuated at least 3.1lakh person from low-lying areas in Gujarat and Diu. Coastal areas of Karnataka and Kerala may also get rain because of this cyclone effect today, Skymet weather forecasted.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X