ಜನತಾ ಕರ್ಫ್ಯೂ ದಿನ ರಸ್ತೆಗೆ ಬಂದ 40 ಮಂದಿ ವಿರುದ್ಧ ಎಫ್ಐಆರ್
ಅಹಮದಾಬಾದ್, ಮಾರ್ಚ್ 23: ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಕರೆ ನೀಡಿದ್ದ ಜನತಾ ಕರ್ಫ್ಯೂ ಯಶಸ್ವಿಯಾಗಿ ಮುಗಿದಿದೆ. ಆದರೆ, ಆ ದಿನ ಸಂಜೆ ಮೋದಿ ಅವರ ಸೂಚನೆ ಮತ್ತು ಕಾನೂನು ಉಲ್ಲಂಘಿಸಿದ 40 ಜನರ ವಿರುದ್ಧ ಎಫ್ಐಆರ್ ದಾಖಲಾಗಿರುವ ಘಟನೆ ಅಹಮದಾಬಾದ್ ಖಾದಿಯಾ ಪ್ರದೇಶದಲ್ಲಿ ನಡೆದಿದೆ.
ಮಾರ್ಚ್ 22 ರಂದು ಬೆಳಿಗ್ಗೆ 7 ಗಂಟೆಯಿಂದ ರಾತ್ರಿ 9 ಗಂಟೆಯವರೆಗೂ ಜನತಾ ಕರ್ಫ್ಯೂ ಜಾರಿಯಲ್ಲಿತ್ತ. ಅಂದು ಸಂಜೆ 5 ಗಂಟೆಗೆ, ಕೊರೊನಾ ವಿರುದ್ಧ ಹೋರಾಡುತ್ತಿರುವ ವೈದ್ಯರಿಗೆ ಮತ್ತು ಅದಕ್ಕೆ ಸಹಕರಿಸುತ್ತಿರುವ ಎಲ್ಲ ಸಿಬ್ಬಂದಿ ವರ್ಗಕ್ಕೂ ಧನ್ಯವಾದ ಹೇಳವ ಸಲುವಾಗಿ 5 ನಿಮಿಷಗಳ ಕಾಲ ನಿಮ್ಮ ಮನೆಯ ಬಾಗಿಲು, ಕಿಟಕಿ ಅಥವಾ ಬಾಲ್ಕನಿ, ಮಹಡಿ ಬಳಿ ಬಂದು ಚಪ್ಪಾಳೆ ಹೊಡೆಯಬೇಕು ಅಥವಾ ಗಂಟೆ ಬಾರಿಸಬೇಕು ಎಂದು ಮೋದಿ ವಿನಂತಿಸಿಕೊಂಡಿದ್ದರು.
ಜನತಾ ಕರ್ಫ್ಯೂ ಮುಗೀತು, ಚಪ್ಪಾಳೆ ಹೊಡೆದದ್ದೂ ಆಯಿತು: ಮುಂದಾ?
ಆದರೆ, ದೇಶದ ಹಲವು ಕಡೆ ಜನತಾ ಕರ್ಫ್ಯೂ ಮುಗಿಯುವ ಮುನ್ನವೆ ಸಂಜೆ 5 ಗಂಟೆಗೆ ಬೀದಿಗಿಳಿದು ಮೆರವಣಿಗೆ ಸಾಗಿ ಕೊರೊನಾ ಹಬ್ಬ ಆಚರಿಸಿದ್ದಾರೆ. ಈ ಮೂಲಕ ಕೊರೊನಾ ವಿರುದ್ಧ ಹೋರಾಡಲು ಕರೆ ನೀಡಿದ್ದ ಮೋದಿ ಅವರ ಸೂಚನೆ ಉಲ್ಲಂಘನೆ ಮಾಡಲಾಗಿದೆ.
ಖುದ್ದು ಮೋದಿ ಅವರೇ ಯಾರು ರಾತ್ರಿ 9 ಗಂಟೆಯವರೆಗೂ ಮನೆಯಿಂದ ಹೊರಗೆ ಬರಬೇಡಿ ಎಂದು ತಿಳಿಸಿದ್ದರು. ಆದರೂ, ಅನೇಕ ಮಂದಿ ಸಂಜೆ 5 ಗಂಟೆಗೆ ಸಮೂಹದಲ್ಲಿ ಬಂದು ರಸ್ತೆಗಳಲ್ಲಿ ಮೆರವಣಿಗೆ ಸಾಗಿದ್ದಾರೆ. ಹೀಗೆ, ರಸ್ತೆಗಿಳಿದು ಜನತಾ ಕರ್ಫ್ಯೂ ಉಲ್ಲಂಘನೆ ಮಾಡಿದ 40 ಮಂದಿ ವಿರುದ್ಧ ದೂರು ದಾಖಲಿಸಲಾಗಿದೆ.
FIR has been filed against 40 people from Khadia area who had gathered outside their house on 22 March as Section 144 of CrPC is imposed in Ahmedabad: Ashish Bhatia, Commissioner of Police, Ahmedabad
— ANI (@ANI) March 23, 2020
ಭಾರತದಲ್ಲಿ ಲಾಕ್ ಡೌನ್ ನಿಯಮ ಉಲ್ಲಂಘಿಸಿದರೆ ಜೈಲು ಊಟ ಫಿಕ್ಸ್!
ಅಂದ್ಹಾಗೆ, ಜನತಾ ಕರ್ಫ್ಯೂ ನಡೆದ ಆ ದಿನ ಅಹಮದಾಬಾದ್ನಲ್ಲಿ ಸೆಕ್ಷನ್ 144 ಜಾರಿಯಲ್ಲಿತ್ತು. ಹಾಗಾಗಿ, ಸೆಕ್ಷನ್ 144 ಉಲ್ಲಂಘನೆ ಮಾಡಲಾಗಿದೆ ಎಂಬ ಆರೋಪದಲ್ಲಿ ಈ ಕೇಸ್ ದಾಖಲು ಮಾಡಲಾಗಿದೆ ಎಂದು ಅಹಮದಾಬಾದ್ ನಗರ ಪೊಲೀಸ್ ಆಯುಕ್ತ ಆಶಿಶ್ ಭಾಟಿಯಾ ತಿಳಿಸಿದ್ದಾರೆ.