ವಿಡಿಯೋ: ಬಿಜೆಪಿ-ಕಾಂಗ್ರೆಸ್ ವಿದ್ಯಾರ್ಥಿ ಘಟಕಗಳ ಬೀದಿ ಕಾಳಗ, 10 ಮಂದಿಗೆ ಗಾಯ
ಅಹ್ಮದಾಬಾದ್, ಜನವರಿ 07: ಬಿಜೆಪಿ ಮತ್ತು ಕಾಂಗ್ರೆಸ್ನ ವಿದ್ಯಾರ್ಥಿ ಘಟಕಗಳಾದ ಎಬಿವಿಪಿ ಮತ್ತು ಎನ್ಎಸ್ಯುಐ ನಡುವೆ ಬೀದಿ ಕಾಳಗ ನಡೆದಿದ್ದು 10 ಮಂದಿ ಗಾಯಗೊಂಡಿದ್ದಾರೆ.
ಜೆಎನ್ಯು ವಿದ್ಯಾರ್ಥಿಗಳ ಮೇಲಿನ ಹಿಂಸಾಚಾರ ಖಂಡಿಸಿ ಅಹ್ಮದಾಬಾದ್ ಸಮೀಪದ ಎಬಿವಿಪಿ ಕಚೇರಿ ಬಳಿ ಎನ್ಎಸ್ಯುಐ ಸದಸ್ಯರು ಪ್ರತಿಭಟನೆ ನಡೆಸುತ್ತಿದ್ದರು, ಈ ವೇಳೆ ಎಬಿವಿಪಿ ಮತ್ತು ಎನ್ಎಸ್ಯುಐ ನಡುವೆ ಗುಂಪು ಸಂಘರ್ಷ ಉಂಟಾಗಿದ್ದು ಈ ಘಟನೆಯಲ್ಲಿ 10 ಮಂದಿ ಗಾಯಗೊಂಡಿದ್ದಾರೆ.
ಜೆಎನ್ಯು ಆವರಣದಲ್ಲಿ ಗಲಭೆ; ವರದಿ ಕೇಳಿದ ಅಮಿತ್ ಶಾ
ಘರ್ಷಣೆಯಲ್ಲಿ ಗುಜರಾತ್ ಎನ್ಎಸ್ಯುಐ ನ ಪ್ರಧಾನ ಕಾರ್ಯದರ್ಶಿ ನಿಖಿಲ್ ಸವಾನಿ ತೀವ್ರವಾಗಿ ಗಾಯಗೊಂಡಿದ್ದಾರೆ. ಅವರನ್ನು ವಿ.ಎಸ್ ಜನರಲ್ ಆಸ್ಪತ್ರೆಗೆ ದಾಖಲಿಸಲಾಗಿದೆ. ನಿಖಿಲ್ ಸವಾನಿ ಅವರಿಗೆ ಗುಂಪೊಂದು ಹೊಡೆಯುತ್ತಿರುವ ವಿಡಿಯೋ ಬಿಡುಗಡೆ ಆಗಿದೆ. ಇದು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.
ಎರಡೂ ವಿದ್ಯಾರ್ಥಿ ಸಂಘಟನೆಗಳ ಸದಸ್ಯರು ಕಲ್ಲು ಮತ್ತು ದೊಣ್ಣೆಗಳಿಂದ ಹೊಡೆದಾಡಿಕೊಂಡಿದ್ದಾರೆ ಎನ್ನಲಾಗಿದೆ. ಈ ಘರ್ಷಣೆಯಲ್ಲಿ ಸಾರ್ವಜನಿಕ ಆಸ್ತಿಗೂ ಹಾನಿ ಆಗಿದೆ.
ಘಟನೆ ನಡೆದ ಕೂಡಲೆ ಪೊಲೀಸರು ಮಧ್ಯ ಪ್ರವೇಶಿಸಿದ್ದು, ಪರಿಸ್ಥಿತಿಯನ್ನು ತಿಳಿಗೊಳಿಸಿದ್ದಾರೆ. ಘಟನೆ ಬಗ್ಗೆ ಎಫ್ಐಆರ್ ಸಹ ದಾಖಲಿಸಿಕೊಂಡಿದ್ದಾರೆ.
The state sponsor violence is going continue. Here is the clear proof that when NSUI Gujarat protest peacefully RSS goons include @DrRutvij President Gujarat @BJYM and President of ABVP Ahmedabad Naresh Desai attack on protesters.#BanABVP #AkhilBhartiyaViolenceParishad pic.twitter.com/88f2aVALJ9
— NSUI (@nsui) January 7, 2020
ಜೆಎನ್ಯು ವಿದ್ಯಾರ್ಥಿ ಸಂಘಟನೆ ಅಧ್ಯಕ್ಷೆ ಮೇಲೆ ಮಾರಣಾಂತಿಕ ಹಲ್ಲೆ
ಘಟನೆ ಬಗ್ಗೆ ಮಾತನಾಡಿರುವ ಎನ್ಎಸ್ಯುಐ ಕಾರ್ಯದರ್ಶಿ ಭವಿಕ್ ಸೋಲಂಕಿ, 'ನಮ್ಮ ಪ್ರತಿಭಟನೆ ಶಾಂತವಾಗಿತ್ತು, ಆದರೆ ಎಬಿವಿಪಿ ಸದಸ್ಯರು ಅಚಾನಕ್ಕಾಗಿ ಬಂದು ದೊಣ್ಣೆಗಳಿಂದ ನಮ್ಮ ಮೇಲೆ ಹಲ್ಲೆ ಪ್ರಾರಂಭಿಸಿದರು' ಎಂದಿದ್ದಾರೆ.
ಬಿಜೆಪಿಯೇ ಹಿಂದೆ ನಿಂತು ಜೆಎನ್ ಯುನಲ್ಲಿ ಹಿಂಸಾಚಾರ ಮಾಡಿಸಿತಾ?
ಎಬಿವಿಪಿ ಸಹ ಘಟನೆ ಬಗ್ಗೆ ಹೇಳಿಕೆ ನೀಡಿದ್ದು, 'ಎನ್ಎಸ್ಯುಐ ಸದಸ್ಯರು ಧ್ವಜಗಳನ್ನು ಹಿಡಿದು ಕಚೇರಿ ಬಳಿ ಬಂದರು, ನಂತರ ಧ್ವಜಗಳನ್ನು ತೆಗೆದು ಕೋಲುಗಳಿಂದ ನಮ್ಮ ಮೇಲೆ ಹಲ್ಲೆ ಮಾಡಲು ಆರಂಭಿಸಿದರು' ಎಂದಿದ್ದಾರೆ.