ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಗುಜರಾತ್ ನಲ್ಲಿ ಬಸ್ ಅಪಘಾತ; ಇಪತ್ತೊಂದು ಮಂದಿ ಸಾವು

|
Google Oneindia Kannada News

ಅಹ್ಮದಾಬಾದ್, ಸೆಪ್ಟೆಂಬರ್ 30: ಖಾಸಗಿ ಬಸ್ ಉರುಳಿ ಸೋಮವಾರ 21 ಮಂದಿ ಮೃತಪಟ್ಟು, 50ಕ್ಕೂ ಹೆಚ್ಚು ಮಂದಿ ಗಾಯಗೊಂಡ ಘಟನೆ ಗುಜರಾತ್ ನ ಬನಸ್ಕಾಂತದಲ್ಲಿ ಸಂಭವಿಸಿದೆ ಎಂದು ಪಿಟಿಐ ವರದಿ ಮಾಡಿದೆ. ಭಾರೀ ಮಳೆಯಾಗಿ, ಬೆಟ್ಟಪ್ರದೇಶದಲ್ಲಿ ಜಾರಿಕೆ ಇದ್ದ ರಸ್ತೆಯಲ್ಲಿ ಬಸ್ ಚಾಲಕ ನಿಯಂತ್ರಣ ಕಳೆದುಕೊಂಡು ಈ ಘಟನೆ ಸಂಭವಿಸಿದೆ.

ಅಹ್ಮದಾಬಾದ್ ನಿಂದ ನೂರಾ ಅರವತ್ತು ಕಿಲೋಮೀಟರ್ ದೂರದಲ್ಲಿ ಇರುವ ಅಂಬಾಜಿ- ದಾಂತ ಹೆದ್ದಾರಿಯ ತ್ರಿಶೂಲಿಯಾ ಘಾಟ್ ನಲ್ಲಿ ಈ ಘಟನೆ ಸಂಭವಿಸಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿ ಅಜಿತ್ ರಾಜಿಯಾನ್ ಮಾಹಿತಿ ನೀಡಿದ್ದಾರೆ.

Bus Accident In Gujarat; At Least 21 People Died

ಬನಸ್ಕಾಂತದಿಂದ ಬಂದಿರುವ ಈ ವಿಧ್ವಂಸಕ ಸುದ್ದಿ ಬಂದಿದೆ. ಈ ಅಪಘಾತದಲ್ಲಿ ಜೀವ ಕಳೆದುಕೊಂಡಿರುವವರ ಬಗ್ಗೆ ವಿಪರೀತ ನೋವಿದೆ. ಈ ಸಂದರ್ಭದಲ್ಲಿ ಮೃತರ ಕುಟುಂಬದ ಬಗ್ಗೆ ಸಂತಾಪ ವ್ಯಕ್ತಪಡಿಸುತ್ತಿದ್ದೇನೆ. ಸ್ಥಳೀಯ ಆಡಳಿತದಿಂದ ಸಾಧ್ಯ ಇರುವ ಎಲ್ಲ ನೆರವನ್ನು ಗಾಯಾಳುಗಳಿಗೆ ನೀಡಲಾಗುತ್ತಿದೆ. ಅವರು ಬೇಗ ಚೇತರಿಸಿಕೊಳ್ಳಲಿ ಎಂದು ಪ್ರಧಾನಿ ಮೋದಿ ಟ್ವೀಟ್ ಮಾಡಿದ್ದಾರೆ.

ಇನ್ನು ಈ ಘಟನೆ ಬಗ್ಗೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಕೂಡ ಸಂತಾಪವನ್ನು ಸೂಚಿಸಿದ್ದಾರೆ.

English summary
Tragic road accident in Banaskantha, Gujarat on Monday. At least 21 people died and more than 50 people injured.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X