ಗುಜರಾತ್ನ ನೂತನ ಮುಖ್ಯಮಂತ್ರಿಯಾಗಿ ಭೂಪೇಂದ್ರ ಪಟೇಲ್ ಪ್ರಮಾಣವಚನ
ಅಹಮದಾಬಾದ್, ಸೆಪ್ಟೆಂಬರ್ 13: ಗುಜರಾತ್ನ ನೂತನ ಮುಖ್ಯಮಂತ್ರಿಯಾಗಿ ಭೂಪೇಂದ್ರ ಪಟೇಲ್ ಪ್ರಮಾಣವಚನ ಸ್ವೀಕರಿಸಿದ್ದಾರೆ.
ಭೂಪೇಂದ್ರ ಪಟೇಲ್ ಅವರು ಗುಜರಾತ್ನ 17ನೇ ಮುಖ್ಯಮಂತ್ರಿಯಾಗಿದ್ದಾರೆ. ಇಂದು ರಾಜಭವನದಲ್ಲಿ ನಡೆದ ಕಾರ್ಯಕ್ರಮದಲ್ಲಿ ಪ್ರಮಾಣವಚನ ಸ್ವೀಕಾರ ಮಾಡಿದ್ದಾರೆ.
ಗುಜರಾತಿನ ನೂತನ ಮುಖ್ಯಮಂತ್ರಿಯಾಗಿ ಭೂಪೇಂದ್ರ ಪಟೇಲ್ ಆಯ್ಕೆ ಮಾಡಲಾಗಿತ್ತು.ಭಾನುವಾರ ನಡೆದ ಬಿಜೆಪಿ ಶಾಸಕಾಂಗ ಪಕ್ಷದ ಸಭೆಯಲ್ಲಿ ಭೂಪೇಂದ್ರ ಪಟೇಲ್ ಅವರ ಹೆಸರನ್ನು ಮುಖ್ಯಮಂತ್ರಿ ಹುದ್ದೆಗೆ ಅಂತಿಮಗೊಳಿಸಲಾಗಿತ್ತು.
ಕೇಂದ್ರ ಸಂಸದೀಯ ವ್ಯವಹಾರಗಳ ಸಚಿವ ಪ್ರಹ್ಲಾದ್ ಜೋಷಿ, ಕೃಷಿ ಸಚಿವ ನರೇಂದ್ರ ಸಿಂಗ್ ತೋಮರ್ ಪಕ್ಷದ ವೀಕ್ಷಕರಾಗಿ ಸಭೆಯಲ್ಲಿ ಪಾಲ್ಗೊಂಡಿದ್ದರು. ವಿಜಯ್ ರೂಪಾನಿ ನಿನ್ನೆ ಮುಖ್ಯಮಂತ್ರಿ ಹುದ್ದೆಗೆ ರಾಜೀನಾಮೆ ನೀಡಿದ್ದರು.
ಪಟೇಲ್ ಘಾಟ್ ಲೋಡಿಯಾ ಕ್ಷೇತ್ರದ ಶಾಸಕರಾಗಿದ್ದಾರೆ. ಅವರಿಗಿಂತ ಮೊದಲು ಈ ಕ್ಷೇತ್ರವನ್ನು ಮಾಜಿ ಮುಖ್ಯಮಂತ್ರಿ ಆನಂದಿ ಬೆನ್ ಪಟೇಲ್ ಪ್ರತಿನಿಧಿಸುತ್ತಿದ್ದರು. ಪಟೇಲ್ ಸರ್ಕಾರ ರಚನೆ ಸಂಬಂಧ ರಾಜ್ಯಪಾಲ ಆಚಾರ್ಯ ದೇವವ್ರತ್ ಅವರನ್ನು ಭೇಟಿಯಾಗಿ ಮಾತುಕತೆ ನಡೆಸಿದ್ದರು.
ಪಟೇಲ್ ಅವರು ಸಮಾಜದ ತಳಮಟ್ಟದಿಂದಲೇ ಕೆಲಸ ಮಾಡಿದ್ದಾರೆ. ಸಹಕಾರಿ ಕ್ಷೇತ್ರದ ಮೇಲೆ ಜ್ಞಾನವಿದ್ದು, ಪಕ್ಷದ ಕಾರ್ಯಕರ್ತರೊಂದಿಗೆ ಕೆಲಸ ಮಾಡಿದ್ದಾರೆ. ಅವರ ಈ ಆಡಳಿತಾತ್ಮಕ ಸಾಮರ್ಥ್ಯಗಳೇ ಅವರನ್ನು ಮುಖ್ಯಮಂತ್ರಿಯಾಗಿ ನೇಮಿಸಲು ಪ್ರಮುಖ ಅಂಶಗಳಾಗಿವೆ ಎಂದು ಬಿಜೆಪಿ ಅಧ್ಯಕ್ಷ ಸಿ. ಆರ್. ಪಟೇಲ್ ಹೇಳಿದ್ದಾರೆ.
57 ವರ್ಷದ ಭೂಪೇಂದ್ರ ಪಟೇಲ್ ಅವರು ಗುಜರಾತ್ನ ಮಾಜಿ ಸಿಎಂ ಹಾಗೂ ಉತ್ತರ ಪ್ರದೇಶದ ರಾಜ್ಯಪಾಲೆ ಆನಂದಿಬೆನ್ ಪಟೇಲ್ ಅವರ ಅತ್ಯಾಪ್ತರರಾಗಿದ್ದು, ಅಹಮದಾಬಾದ್ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ, ಅಮದ್ವಾಡ ಮುನ್ಸಿಪಲ್ ಕಾರ್ಪೋರೇಶನ್ ಸ್ಥಾಯಿ ಸಮಿತಿ ಅಧ್ಯಕ್ಷರಾಗಿಯೂ ಕೂಡ ಆಗಿ ಸೇವೆ ಸಲ್ಲಿಸಿದ್ದಾರೆ.
ಭೂಪೇಂದ್ರ ಪಟೇಲ್ ಅವರ ಹೆಸರನ್ನು ವಿಜಯ್ ರೂಪಾನಿಯವರೇ ಸೂಚಿಸಿದ್ದಾರೆ ಎನ್ನಲಾಗಿದೆ. ಗುಜರಾತ್ನ ಘಾಟ್ಲೋಡಿಯಾ ವಿಧಾನಸಭಾ ಕ್ಷೇತ್ರದ ಶಾಸಕರಾಗಿರುವ ಭೂಪೇಂದ್ರ ಪಟೇಲ್ ಹಿಂದಿನ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಶಶಿಕಾಂತ್ ಪಟೇಲ್ ವಿರುದ್ಧ 1,17,000 ಮತಗಳ ಅಂತರದಿಂದ ಭರ್ಜರಿ ಗೆಲುವು ಸಾಧಿಸಿದ್ದರು. ಈ ಕ್ಷೇತ್ರದಲ್ಲಿ ಭೂಪೇಂದ್ರ ಪಟೇಲ್ಗೂ ಮೊದಲು ಆನಂದಿಬೆನ್ ಪಟೇಲ್ ಅಭ್ಯರ್ಥಿಯಾಗಿದ್ದರು.
-ಭೂಪೇಂದ್ರ
ಪಟೇಲ್
ಗುಜರಾತ್ನ
ಮುಖ್ಯಮಂತ್ರಿ
ಆನಂದಿ
ಬೆನ್
ಪಟೇಲ್
ಅವರ
ಆಪ್ತರು
-ಕಳೆದ
ಬಾರಿ
ಗುಜರಾತ್
ವಿಧಾನಸಭಾ
ಚುನಾವಣೆಯಲ್ಲಿ
ಕಾಂಗ್ರೆಸ್ನ
ಶಶಿಕಾಂತ್
ಪಟೇಲ್
ವಿರುದ್ಧ
ಸ್ಪರ್ಧಿಸಿದ್ದ
ಭೂಪೇಂದ್ರ
ಪಟೇಲ್
1
ಲಕ್ಷಕ್ಕೂ
ಅಧಿಕ
ಮತಗಳಿಂದ
ಜಯಗಳಿಸಿದ್ದರು.
-ಘಾಟ್ಲೋಡಿಯಾ
ಕ್ಷೇತ್ರದಿಂದ
2017ರಲ್ಲಿ
ಮೊದಲ
ಬಾರಿ
ಶಾಸಕರಾಗಿ
ಭೂಪೇಂದ್ರ
ಪಟೇಲ್
ಆಯ್ಕೆಯಾಗಿದ್ದಾರೆ.
ಈಕ್ಷೇತ್ರವನ್ನು
ಆನಂದಿ
ಬೆನ್
ಪಟೇಲ್
ಪ್ರತಿನಿಧಿಸಿದ್ದರು.
-ಭೂಪೇಂದ್ರ
ಪಟೇಲ್
ಅವರು
ಈ
ಹಿಂದೆ
ಅಹಮದಾಬಾದ್ನ
ನಗರಾಭಿವೃದ್ಧಿ
ಪ್ರಾಧಿಕಾರದ
ಅಧ್ಯಕ್ಷರಾಗಿದ್ದರು.
-2017ರ
ವಿಧಾನಸಭೆ
ಚುನಾವಣೆ
ಸಮಯದಲ್ಲಿ
5
ಕೋಟಿಗೂ
ಅಧಿಕ
ಆಸ್ತಿ
ಹೊಂದರುವುದಾಗಿ
ಪಟೇಲ್
ಘೋಷಿಸಿದ್ದರು.
-ಬಿಜೆಪಿ
ಮೂಲಗಳ
ಪ್ರಕಾರ
ಭೂಪೇಂದ್ರ
ಪಟೇಲ್
ಅವರು
ಪಕ್ಷದ
ಅಚ್ಚರಿಯ
ನಿರ್ಧಾರವಾಗಿದ್ದು
ಅವರನ್ನು
ಪ್ರಮುಖ
ಸ್ಪರ್ಧಿಗಳ
ಪಟ್ಟಿಯಲ್ಲಿ
ಸೇರಿಸಿರಲಿಲ್ಲ.
-ಅವರು
ಪಟೇಲ್
ಅಥವಾ
ಪಾಟಿದಾರ್
ಸಮುದಾಯಕ್ಕೆ
ಸೇರಿದವರಾಗಿದ್ದು,
ಮುಂದಿನ
ವರ್ಷ
ನಡೆಯಲಿರುವ
ವಿಧಾನಸಭಾ
ಚುನಾವಣೆಗೆ
ಮುನ್ನ
ಬಿಜೆಪಿ
ಸಮಾಧಾನಪಡಿಸಲು
ಉತ್ಸುಕವಾಗಿದೆ
ಎಂದು
ವರದಿಯಾಗಿದೆ.ಇನ್ನು
ರಾಜೀನಾಮೆ
ನಂತರ
ಹೇಳಿಕೆ
ನೀಡಿರುವ
ವಿಜಯ್
ರೂಪಾನಿ,
ನಮ್ಮ
ಪಕ್ಷದಲ್ಲಿ
ಕಾಲಕ್ಕೆ
ತಕ್ಕಂತೆ
ಮುಖ್ಯಮಂತ್ರಿ
ಬದಲಾವಣೆ
ಮಾಡುವ
ಸಂಸ್ಕೃತಿ
ಇದೆ.
ಹೀಗಾಗಿ
ರಾಜೀನಾಮೆ
ನೀಡಿದ್ದೇನೆ
.
ಮುಂಬರುವ
ದಿನಗಳಲ್ಲಿ
ಪಕ್ಷ
ಸಂಘಟನೆಯಲ್ಲಿ
ಪಾಲ್ಗೊಳ್ಳುತ್ತೇನೆ
ಎಂದಿದ್ದಾರೆ.
ತನ್ನ ಬಲಗೈ ಬಂಟನಂತಿದ್ದ ಬೊಮ್ಮಾಯಿಗೆ ಈಗ ಬಿಎಸ್ವೈ ಸಾಥ್ ನೀಡುವರೇ?ತನ್ನ ಬಲಗೈ ಬಂಟನಂತಿದ್ದ ಬೊಮ್ಮಾಯಿಗೆ ಈಗ ಬಿಎಸ್ವೈ ಸಾಥ್ ನೀಡುವರೇ?
ಐದು ವರ್ಷ ಮುಖ್ಯಮಂತ್ರಿ ಆಗಿದ್ದ ವಿಜಯ್ ರೂಪಾನಿ ರಾಜೀನಾಮೆ ನೀಡಿದ್ದಾರೆ. ಮುಂದಿನ ವರ್ಷವೇ ಗುಜರಾತ್ ವಿಧಾನಸಭಾ ಚುನಾವಣೆ ನಡೆಯಲಿದೆ. ಈ ಹಿನ್ನೆಲೆಯಲ್ಲಿ ವಿಜಯ್ ರೂಪಾನಿ ನಡೆ ಆಶ್ಚರ್ಯ ಮೂಡಿಸಿದೆ. ಬಿ.ಎಲ್.ಸಂತೋಷ್ ಗುಜರಾತ್ನ ರಾಜಭವನದಲ್ಲಿರುವ ಬಗ್ಗೆ ಮಾಹಿತಿ ಲಭ್ಯವಾಗಿದೆ.
ವಿಜಯ್ ರೂಪಾನಿ ಅವರು ರಾಜೀನಾಮೆ ಪತ್ರವನ್ನು ರಾಜ್ಯಪಾಲರಿಗೆ ಸಲ್ಲಿಸಿದ್ದಾರೆ. ರಾಜೀನಾಮೆ ಬಳಿಕ ಪ್ರತಿಕ್ರಿಯೆ ನೀಡಿದ್ದು, ಈವರೆಗೆ ಅವಕಾಶ ನೀಡಿದ ಪ್ರಧಾನಿ ನರೇಂದ್ರ ಮೋದಿಯವರಿಗೆ ಧನ್ಯವಾದ ಅರ್ಪಿಸುವೆ. ಮುಂದೆ ಪಕ್ಷ ಯಾವುದೇ ಜವಾಬ್ದಾರಿ ನೀಡಿದರೂ ಅದನ್ನು ನಿರ್ವಹಿಸುವುದಾಗಿ ಹೇಳಿದ್ದಾರೆ.
2016ರ ಆಗಸ್ಟ್ 7 ರಂದು ಗುಜರಾತ್ ಮುಖ್ಯಮಂತ್ರಿಯಾಗಿ ವಿಜಯ್ ರೂಪಾನಿ ಪ್ರಮಾಣವಚನ ಸ್ವೀಕರಿಸಿದ್ದರು. ಐದು ವರ್ಷಗಳ ಕಾಲ ಗುಜರಾತ್ ಮುಖ್ಯಮಂತ್ರಿಯಾಗಿ ಕಾರ್ಯ ನಿರ್ವಹಿಸಿದ್ದರು, ಇದೀಗ ಅವರು ಸಿಎಂ ಸ್ಥಾನಕ್ಕೆ ದಿಢೀರ್ ರಾಜೀನಾಮೆ ನೀಡಿದ್ದು ತೀವ್ರ ಚರ್ಚೆಗೆ ಗ್ರಾಸವಾಗಿದೆ.