Breaking News: ಗುಜರಾತ್ ಮುಖ್ಯಮಂತ್ರಿಯಾಗಿ ಭೂಪೇಂದ್ರ ಪಟೇಲ್ ಆಯ್ಕೆ
ಅಹ್ಮದಾಬಾದ್, ಸೆಪ್ಟೆಂಬರ್ 12: ರಾಜ್ಯ ವಿಧಾನಸಭಾ ಚುನಾವಣೆಗೆ ಇನ್ನೇನು 15 ತಿಂಗಳ ಬಾಕಿ ಇರುವಂತೆ ಗುಜರಾತಿನಲ್ಲಿ ಭಾರತೀಯ ಜನತಾ ಪಕ್ಷವು ನೂತನ ಮುಖ್ಯಮಂತ್ರಿಗೆ ಪಟ್ಟ ಕಟ್ಟಿದೆ. ರಾಜ್ಯದ ಮುಖ್ಯಮಂತ್ರಿ ಆಗಿ ಭೂಪೇಂದ್ರ ಪಟೇಲ್ ಅವರನ್ನು ಆಯ್ಕೆ ಮಾಡಲಾಗಿದೆ.
ಶನಿವಾರ ಗುಜರಾತ್ ಮುಖ್ಯಮಂತ್ರಿ ವಿಜಯ್ ರೂಪಾನಿ ರಾಜೀನಾಮೆ ಸಲ್ಲಿಸಿದ ಬೆನ್ನಲ್ಲೇ ನೂತನ ಮುಖ್ಯಮಂತ್ರಿ ಆಯ್ಕೆ ಪ್ರಕ್ರಿಯೆಯನ್ನು ಶುರು ಮಾಡಲಾಗಿತ್ತು. ಭಾನುವಾರ ಗಾಂಧಿನಗರದಲ್ಲಿ ಇರುವ ಭಾರತೀಯ ಜನತಾ ಪಕ್ಷದ ಶಾಸಕಾಂಗ ಸಭೆಯಲ್ಲಿ ನಡೆದ ಸುದೀರ್ಘ ಚರ್ಚೆ ಬಳಿಕ ಭೂಪೇಂದ್ರ ಪಟೇಲ್ ಹೆಸರನ್ನು ಅಧಿಕೃತವಾಗಿ ಘೋಷಿಸಲಾಗಿದೆ.
ಗುಜರಾತ್ ವಿಧಾನಸಭಾ ಚುನಾವಣೆಯನ್ನು ಗಮನದಲ್ಲಿ ಇಟ್ಟುಕೊಂಡು ಪಟೇದಾರ್ ಸಮುದಾಯವನ್ನು ಒಲಿಸಿಕೊಳ್ಳುವ ಉದ್ದೇಶವನ್ನು ಇಟ್ಟುಕೊಂಡು ಬಿಜೆಪಿ ಹೈಕಮಾಂಡ್ ಈ ಲೆಕ್ಕಾಚಾರಪ ಹಾಕಿದೆ ಎಂದ ಮಾತುಗಳು ರಾಜಕೀಯ ವಲಯದಲ್ಲಿ ಕೇಳಿ ಬರುತ್ತಿವೆ. ಪಟೇದಾರ್ ನಾಯಕನಿಗೆ ಮುಖ್ಯಮಂತ್ರಿ ಸ್ಥಾನವನ್ನು ನೀಡುವ ಮೂಲಕ ಮುಂಬರುವ ಚುನಾವಣೆಯಲ್ಲಿ ರಾಜ್ಯದಲ್ಲಿ ತನ್ನ ಅಧಿಕಾರವನ್ನು ಗಟ್ಟಿ ಮಾಡಿಕೊಳ್ಳುವುದಕ್ಕೆ ಬಿಜೆಪಿ ತಂತ್ರ ಹೆಣೆದಿದೆ ಎಂದು ಹೇಳಲಾಗುತ್ತಿದೆ.
ಗುಜರಾತ್
ರಾಜಕೀಯ
ಬೆಳವಣಿಗೆ:
ಗುಜರಾತ್
ಮಾಜಿ
ಮುಖ್ಯಮಂತ್ರಿ
ಆನಂದಿ
ಬೆನ್
ಆಪ್ತ
ವಲಯದಲ್ಲಿ
ಭೂಪೇಂದ್ರ
ಪಟೇಲ್
ಗುರುತಿಸಿಕೊಂಡಿದ್ದರು.
ಘಾಟ್ಲೋಡಿಯಾ
ಕ್ಷೇತ್ರದ
ಶಾಸಕರಾದ
ಅವರು,
ಈ
ಹಿಂದೆ
ಆನಂದಿಬೆನ್
ಪಟೇಲ್
ಅವರ
ಸರ್ಕಾರದಲ್ಲಿ
ಅಹ್ಮದಾಬಾದ್
ಮುನ್ಸಿಪಲ್
ಕಾರ್ಪೊರೇಶನ್
ಮತ್ತು
ಅಹ್ಮದಾಬಾದ್
ನಗರಾಭಿವೃದ್ಧಿ
ಪ್ರಾಧಿಕಾರದ
ಭಾಗವಾಗಿದ್ದರು.
ಕಳೆದ
ಬಾರಿ
2016ರಲ್ಲಿ
ಚುನಾವಣೆಯ
ಹೊಸ್ತಿಲಿನಲ್ಲೇ
ಮಾಜಿ
ಮುಖ್ಯಮಂತ್ರಿ
ಆನಂದಿ
ಬೆಲ್
ಅವರನ್ನು
ಸಿಎಂ
ಸ್ಥಾನದಿಂದ
ಕೆಳಗಿಳಿಸಿ
ಆ
ಸ್ಥಾನಕ್ಕೆ
ವಿಜಯ್
ರೂಪಾನಿ
ಆಯ್ಕೆ
ಮಾಡಲಾಗಿತ್ತು.