ನಿತ್ಯಾನಂದ ವಿಡಿಯೋ: ನಟಿ ರಂಜಿತಾ ಕ್ಷಮಾಪಣೆಗೆ ಆದೇಶ
ಈ ಸಂಬಂಧ, Broadcast Content Complaints Council (BCCC) ಅಧ್ಯಕ್ಷ ನಿವೃತ್ತ ನ್ಯಾಯಮೂರ್ತಿ ಎಪಿ ಷಾ ಅವರು Star Vijay ಚಾನೆಲ್ ವಿರುದ್ಧ ಸೋಮವಾರ ಈ ಮಹತ್ವದ ಆದೇಶ ನೀಡಿದ್ದು, ನಟಿ ರಂಜಿತಾ ಅವರಲ್ಲಿ ಕ್ಷಮೆ ಯಾಚಿಸುವಂತೆ ಸೂಚಿಸಿದ್ದಾರೆ. ಅಂದಹಾಗೆ BCCC ಸಮಿತಿಯು ಟಿವಿ ಚಾನೆಲ್ಲುಗಳ ನಿಯಂತ್ರಣ ಸಂಸ್ಥೆಯಾಗಿದೆ.
ಸೆಪ್ಟೆಂಬರ್ 9ರಿಂದ ಪ್ರಾರಂಭ ಮಾಡಿ 7 ದಿನಗಳ ಪ್ರತಿ 2 ಗಂಟೆಗೊಮ್ಮೆ scrollನಲ್ಲಿ ಪ್ರಸಾರ ಮಾಡಬೇಕು ಎಂದು BCCC ಅಧ್ಯಕ್ಷ ಎಪಿ ಷಾ ಅವರು ಆದೇಶಿಸಿದ್ದಾರೆ. 2012ರ ಮಾರ್ಚ್ 21ರಂದು 'ಸ್ಟಾರ್ ವಿಜಯ್' ಚಾನೆಲ್ Nadanthadhu Enna Kutramum Pinnaniyum ಎಂಬ ಕಾರ್ಯಕ್ರಮ ಪ್ರಸಾರವಾಗಿತ್ತು. ಅದರಲ್ಲಿ ಈ ಆಕ್ಷೇಪಾರ್ಹ ವಿಡಿಯೋ ಪ್ರಸಾರವಾಗಿತ್ತು.
ಅರ್ಜಿದಾರರಾದ ರಂಜಿತಾ ಅವರ ಖಾಸಗಿ ತನಕ್ಕೆ ಧಕ್ಕೆ ತಂದಿದೆ. ಆಕೆಯ ಗೌರವಕ್ಕೆ ಚ್ಯುತಿಬರುವಂತೆ ಈ ವಿಡಿಯೋ ಪ್ರಸಾರ ಮಾಡಲಾಗಿದೆ. ಆದ್ದರಿಂದ ರಂಜಿತಾ ಮೆನನ್ ಗೆ ಚಾನೆಲ್ ಕ್ಷಮಾಪಣೆ ಕೋರಬೇಕು ಎಂದು ತೀರ್ಪಿನಲ್ಲಿ ಹೇಳಲಾಗಿದೆ.
ಪ್ರಕರಣದ ಸಂಬಂಧ ನಟಿ ರಂಜಿತಾ ಅವರು ಕರ್ನಾಟಕ ಹೈಕೋರ್ಟಿನಲ್ಲಿ ರಿಟ್ ಅರ್ಜಿ ಸಲ್ಲಿಸಿದ್ದರು. ಆದರೆ ಹೈಕೋರ್ಟ್ ಸಿ.ಡಿ. ಸಮೇತ ಅರ್ಜಿಯನ್ನು BCCCಗೆ ವರ್ಗಾಯಿಸಿತ್ತು.