ಪರಮೇಶ್ವರ್,ಡಿಕೆಶಿಗೆ ಕ್ಯಾಬಿನೆಟ್ ಸ್ಥಾನ ಖಚಿತ!
ಬೆಂಗಳೂರು, ಆ.25: ಜೆಡಿಎಸ್ ಭದ್ರಕೋಟೆಯಾಗಿದ್ದ ಬೆಂಗಳೂರು ಗ್ರಾಮಾಂತರ ಹಾಗೂ ಮಂಡ್ಯ ಲೋಕಸಭೆ ಕ್ಷೇತ್ರಗಳಲ್ಲಿ ಕಾಂಗ್ರೆಸ್ ವಿಜಯ ಪತಾಕೆ ಹಾರಿಸಿದ ಬೆನ್ನಲ್ಲೇ ಸಿದ್ದರಾಮಯ್ಯ ಅವರ ಸಚಿವ ಸಂಪುಟ ವಿಸ್ತರಣೆ ಬಗ್ಗೆ ಸುದ್ದಿ ಕೇಳಿಬಂದಿದೆ.
ರಾಜ್ಯ ಸಚಿವ ಸಂಪುಟ ವಿಸ್ತರಣೆ ಬಗ್ಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಕೂಡಾ ಸುಳಿವು ನೀಡಿದಾರೆ. ಡಾ.ಜಿ. ಪರಮೇಶ್ವರ್ ಹಾಗೂ ಡಿ.ಕೆ. ಶಿವಕುಮಾರ್ ಸೇರ್ಪಡೆಗೆ ವೇದಿಕೆ ಸಜ್ಜಾಗುತ್ತಿದೆ. ಬಹುಶಃ ನೂತನ ಸಂಸದರಾದ ರಮ್ಯಾ ಹಾಗೂ ಡಿಕೆ ಸುರೇಶ್ ಅವರನ್ನು ದೆಹಲಿಗೆ ಕರೆದೊಯ್ಯಲಿರುವ ಪರಮೇಶ್ವರ್ ಅವರು ಸಂಪುಟ ವಿಸ್ತರಣೆ ಬಗ್ಗೆ ಹೈಕಮಾಂಡ್ ನಾಯಕರಲ್ಲಿ ಚರ್ಚೆ ನಡೆಸಲಿದ್ದಾರೆ.
ಡಾ.
ಜಿ.
ಪರಮೇಶ್ವರ್
ಅವರಿಗೆ
ಉಪ
ಮುಖ್ಯಮಂತ್ರಿ
ಹುದ್ದೆ
ಹಾಗೂ
ಡಿ.ಕೆ.
ಶಿವಕುಮಾರ್
ಸಚಿವ
ಸಂಪುಟಕ್ಕೆ
ಸೇರಿಸಿಕೊಳ್ಳುವುದಕ್ಕೆ
ಕಾಂಗ್ರೆಸ್
ಹೈಕಮಾಂಡ್
ಗ್ರೀನ್
ಸಿಗ್ನಲ್
ತೋರಿಸಿದೆ
ಎಂಬ
ಸುದ್ದಿ
ಇದೆ.
ಆದರೆ,
'ನಾನು
ಉಪಮುಖ್ಯಮಂತ್ರಿ
ಸ್ಥಾನ
ಕೊಡಿ'
ಎಂದು
ಹೈಕಮಾಂಡ್
ನಾಯಕರನ್ನು
ಕೇಳಲು
ಹೋಗುತ್ತಿಲ್ಲ
ಎಂದು
ಪರಮೇಶ್ವರ್
ಸ್ಪಷಪಡಿಸಿದ್ದಾರೆ.
ಲೋಕಸಭೆ ಕ್ಷೇತ್ರಗಳ ಮರು ಚುನಾವಣೆಯಲ್ಲಿ ಬಿಜೆಪಿ-ಜೆಡಿಎಸ್ ಮೈತ್ರಿಯ ಹೊರತಾಗಿಯೂ ಕಾಂಗ್ರೆಸ್ ಜಯಭೇರಿ ಬಾರಿಸಿರುವುದರಿಂದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಶ್ರೇಯ ಬಂದಿದೆ. ಆದರೆ, ಇವರಿಗಿಂತ ಅತಿ ಹೆಚ್ಚಿನ ಪಾಲು ಕೆಪಿಸಿಸಿ ಅಧ್ಯಕ್ಷ ಡಾ. ಜಿ. ಪರಮೇಶ್ವರ ಹಾಗೂ ಮಾಜಿ ಸಚಿವ ಡಿ.ಕೆ. ಶಿವಕುಮಾರ್ ಅವರದ್ದೇ ಆಗಿದೆ.
ಎಲ್ಲವೂ ಅಂದುಕೊಂಡಂತೆ ಸಾಗಿದರೆ ಇನ್ನೊಂದು ವಾರದಲ್ಲಿ ಪರಮೇಶ್ವರ್ ಉಪಮುಖ್ಯಮಂತ್ರಿಯಾಗಿ ಅಕಾರ ಸ್ವೀಕರಿಸುವ ಸಾಧ್ಯತೆ ದಟ್ಟವಾಗಿದೆ ಎಂದು ಹೇಳಲಾಗುತ್ತಿದೆ.
ನಿಗಮ-ಮಂಡಳಿಗೂ ಮುಕ್ತಿ : ರಾಜ್ಯ ಕಾಂಗ್ರೆಸ್ ಇದೇ ಖುಷಿಯಲ್ಲಿ ಆದಷ್ಟು ಬೇಗ ಸಂಪುಟದಲ್ಲಿ ಖಾಲಿ ಇರುವ ನಾಲ್ಕು ಸ್ಥಾನ ಮತ್ತು ನಿಗಮ-ಮಂಡಳಿ ನೇಮಕಾತಿಯನ್ನು ಅತೀ ಶೀಘ್ರದಲ್ಲೇ ಮಾಡಿ ಮುಗಿಸುವ ನಿರ್ಧಾರಕ್ಕೆ ಬಂದಿದೆ. ಈ ಸಂಬಂಧ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೊಂದಿಗೆ ಚರ್ಚೆ ಮಾಡಿದ್ದು, ಅವರು ಕೂಡ ಬೇಗ ಈ ಕೆಲಸ ಮಾಡಿ ಮುಗಿಸಲು ಒಪ್ಪಿದ್ದಾರೆ ಎಂದು ಕೆಪಿಸಿಸಿ ಅಧ್ಯಕ್ಷ ಡಾ.ಜಿ.ಪರಮೇಶ್ವರ್ ತಿಳಿಸಿದ್ದಾರೆ.
ಸೋನಿಯಾಗಾಂಧಿ ಅವರು ಸಿದ್ದರಾಮಯ್ಯ ಹಾಗೂ ಡಾ. ಜಿ. ಪರಮೇಶ್ವರ ಅವರೊಂದಿಗೆ ಆ.27ರಂದು ಚರ್ಚೆ ನಡೆಸಲಿದ್ದಾರೆ. ಹೀಗಾಗಿ, ಆ.26ರಂದು ಈ ಇಬ್ಬರು ನಾಯಕರು ದೆಹಲಿಗೆ ಪ್ರಯಾಣ ಬೆಳಸಲಿದ್ದಾರೆ.
ರಾಜ್ಯದ ಉಸ್ತುವಾರಿ ಹೊಣೆ ಹೊತ್ತಿರುವ ದಿಗ್ವಿಜಯ್ ಸಿಂಗ್ ಅವರೊಂದಿಗೆ ಸಚಿವ ಸಂಪುಟದ ಸ್ಥಾನಗಳ ಭರ್ತಿ, ಉಪಮುಖ್ಯಮಂತ್ರಿ ನೇಮಕ, ನಿಗಮ-ಮಂಡಳಿ ನೇಮಕಾತಿಯಲ್ಲಿ ಯಾರಿಗೆ, ಯಾವ ವಿಭಾಗಕ್ಕೆ ಎಷ್ಟು ಕೋಟಾ ಕೊಡಬೇಕು ಎಂಬುದು ತೀರ್ಮಾನವಾಗಲಿದೆ ಎಂಬ ಅಂಶವನ್ನು ಪರಮೇಶ್ವರ್ ತಿಳಿಸಿದ್ದಾರೆ.