ಕೆಂಗೇರಿ : ನಿರ್ಮಾಣ ಹಂತದ ಕಟ್ಟಡ ಕುಸಿತ, 3 ಸಾವು
ಬೆಂಗಳೂರು, ಆ.5 : ಕೆಂಗೇರಿಯ ಬಂಡೇಮಠ ಸಮೀಪ ನಿರ್ಮಾಣ ಹಂತದ ಕಟ್ಟಡ ಕುಸಿದು ಬಿದ್ದಿದೆ. ಕಟ್ಟಡದ ಅವಶೇಷಗಳ ಅಡಿ ಹಲವಾರು ಕಾರ್ಮಿಕರು ಸಿಲುಕಿದ್ದಾರೆ ಎಂದು ಶಂಕಿಸಲಾಗಿದೆ. ಸ್ಥಳಕ್ಕೆ ಅಗ್ನಿಶಾಮಕದಳದ ಸಿಬ್ಬಂದಿ ಆಗಮಿಸಿದ್ದು, ಮೂವರ ಶವಗಳನ್ನು ಹೊರತೆಗೆಯಲಾಗಿದೆ.
ಸೋಮವಾರ
ಬೆಳಗ್ಗೆ
11.10ರ
ಸುಮಾರಿಗೆ
ಕೆಂಗೇರಿ
ಬಳಿಯ
ಬಂಡೇಮಠ
ಸಮೀಪದ
ಕುಗಟ್ಟ
ಬಳಿ
ನಿರ್ಮಾಣ
ಹಂತದಲ್ಲಿದ್ದ
ಮೂರು
ಅಂತಸ್ತಿನ
ಕಲ್ಯಾಣ
ಮಂಟಪದ
ಕಟ್ಟಡ
ಕುಸಿದು
ಬಿದ್ದಿದೆ.
ಕಟ್ಟಡ
ನಿರ್ಮಾಣದಲ್ಲಿ
50ಕ್ಕೂ
ಹೆಚ್ಚು
ಕಾರ್ಮಿಕರು
ಕೆಲಸ
ಮಾಡುತ್ತಿದ್ದರು
ಎಂದು
ತಿಳಿದು
ಬಂದಿದೆ.
ಇದುವರೆಗೂ
ಮೂವರ
ಶವಗಳನ್ನು
ಹೊರತೆಗೆಯಲಾಗಿದ್ದು,
12
ಮಂದಿ
ಘಟನೆಯಿಂದಾಗಿ
ಗಾಯಗೊಂಡಿದ್ದಾರೆ.
ಗಾಯಾಳುಗಳಿಗೆ ರಾಜರಾಜೇಶ್ವರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಸಾವನ್ನಪ್ಪಿದವರನ್ನು ಶಿವಣ್ಣ, ಸುಮಿತ್ ಮತ್ತು ಪಿಂಕೋ ಎಂದು ಗುರುತಿಸಲಾಗಿದೆ. 8 ಅಗ್ನಿ ಶಾಮಕ ದಳದ ವಾಹನಗಳು ಸ್ಥಳಕ್ಕೆ ಆಗಮಿಸಿ ರಕ್ಷಣಾ ಕಾರ್ಯಾಚರಣೆಯಲ್ಲಿ ತೊಡಗಿವೆ.
ಕೆಂಗೇರಿ ಪೊಲೀಸರು ಮತ್ತು ನಗರ ಪೊಲೀಸ್ ಕಮೀಷನ್ ರಾಘವೇಂದ್ರ ಔರಾದ್ಕರ್ ಸ್ಥಳಕ್ಕೆ ಭೇಟಿ ನೀಡಿದ್ದಾರೆ. ಉತ್ತರ ಭಾರತ ಮತ್ತು ಉತ್ತರ ಕರ್ನಾಟಕ ಭಾಗದ ಕಾರ್ಮಿಕರು ಕೆಲಸ ನಿರ್ವಹಿಸುದ್ದರು ಎಂದು ಪೊಲೀಸರು ಹೇಳಿದ್ದಾರೆ.
ಗೃಹ ಸಚಿವರ ಭೇಟಿ : ಘಟನಾ ಸ್ಥಳಕ್ಕೆ ಗೃಹ ಸಚಿವ ಕೆ.ಜೆ.ಜಾರ್ಜ ಮತ್ತು ಬೆಂಗಳೂರು ಜಿಲ್ಲಾ ಉಸ್ತುವಾರಿ, ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಘಟನೆಗೆ ಕಟ್ಟಡ ಮಾಲೀಕರ ನಿರ್ಲಕ್ಷ್ಯವೇ ಕಾರಣವಾಗಿದ್ದು, ಅವರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳುವುದಾಗಿ ಕೆ.ಜೆ.ಜಾರ್ಜ್ ಭರವಸೆ ನೀಡಿದ್ದಾರೆ. ಕಟ್ಟಡದ ಮಾಲೀಕರು ಯಾರು ಎಂಬುದು ಇನ್ನೂ ತಿಳಿದು ಬಂದಿಲ್ಲ.