ಕಡಲಿನಲ್ಲಿ ಕೊಚ್ಚಿಹೋದ ಬಸವನಗುಡಿಯ ವಿಪ್ರೊ ಟೆಕ್ಕಿ
ಎರಡು
ವರ್ಷದ
ಹಿಂದೆ
ಲಂಡನ್ಗೆ
ಬಸವನಗುಡಿಯ
ಹಳೆ
ವೆಟರ್ನರಿ
ಆಸ್ಪತ್ರೆ
ಸಮೀಪ
ವಾಸವಿರುವ
ನರಸಿಂಹಯ್ಯ
ಹಾಗೂ
ಸಂಧ್ಯಾ
ದಂಪತಿಯ
ಹಿರಿಯ
ಮಗ
ಜೈಪ್ರಕಾಶ್,
ಬೆಂಗಳೂರಿನಲ್ಲೇ
ಸ್ನಾತಕೋತ್ತರ
ಪದವಿ
ಪಡೆದು
ಎಚ್ಎಎಲ್
ನಲ್ಲಿ
ನೌಕರಿ
ಸೇರಿದ್ದರು.
ಸಾಫ್ಟ್
ವೇರ್
ಕಡೆಗೆ
ಆಕರ್ಷಿತರಾಗಿದ್ದ
ಜೈಶಂಕರ್ಗೆ
2007
ರಲ್ಲಿ
ಸಿಸ್ಟಂ
ಮ್ಯಾನೇಜರ್
ಆಗಿ
ವಿಪ್ರೋದಲ್ಲಿ
ಉದ್ಯೋಗ
ದೊರೆಯಿತು.
ಇದೇ
ಸಂದರ್ಭದಲ್ಲಿ
ಅವರಿಗೆ
ಅನುಪಮಾ
ಜತೆ
ಮದುವೆಯಾಗಿತ್ತು.
ಉದ್ಯೋಗದಲ್ಲಿ
ಬಡ್ತಿ
ದೊರೆತು
ಎರಡು
ವರ್ಷದ
ಹಿಂದೆ
ಲಂಡನ್ಗೆ
ತೆರಳಿದ್ದರು.
ಜು.
6ರಂದು
ಏನಾಯಿತೆಂದರೆ
41
ವರ್ಷದ
ಜೈಪ್ರಕಾಶ್
ಲಂಡನಿನ
ವಿಪ್ರೊ
ಕಂಪನಿಯಲ್ಲಿ
ಪ್ರಾಜೆಕ್ಟ್
ಮ್ಯಾನೇಜರ್
ಆಗಿದ್ದರು.
ಜು.
6ರಂದು
ಪತ್ನಿ
ಅನುಪಮಾ
ಮತ್ತು
ನಾಲ್ಕು
ವರ್ಷದ
ಪುತ್ರಿ
ಸೃಷ್ಟಿ
ಜತೆ
ಸ್ವೀಡನ್ಗೆ
ತೆರಳಿದ್ದರು.
ಇಲ್ಲಿಯ
Grisslinge
ನಿರ್ಜನ
ಕಡಲಕಿನಾರೆಯಲ್ಲಿ
ಆಟ
ಆಡುತ್ತಿದ್ದ
ಸಂದರ್ಭದಲ್ಲಿ
ಆಕಸ್ಮಿಕವಾಗಿ
ದೈತ್ಯ
ಅಲೆಯೊಂದು
ಅಪ್ಪಳಿಸಿದೆ.
ಕ್ಷಣಾರ್ಧದಲ್ಲಿ ಜೈಪ್ರಕಾಶ್, ಅಲೆಯ ಹೊಡೆತಕ್ಕೆ ಸಿಲುಕಿ ಸಮುದ್ರ ಪಾಲಾಗಿದ್ದಾರೆ. ಅನುಪಮಾ ಸಹಾಯಕ್ಕಾಗಿ ಬೊಬ್ಬೆ ಹಾಕಿದರೂ, ಸುತ್ತಮುತ್ತ ಯಾರೂ ಇರಲಿಲ್ಲ. ಶಾಕ್ನಿಂದ ಅನುಪಮಾ ಪಜ್ಞೆ ತಪ್ಪಿದರು. ಈ ಎಲ್ಲ ಘಟನೆಗಳಿಗೆ ಮೂಕ ಸಾಕ್ಷಿಯಾಗಿದ್ದ ಸೃಷ್ಟಿ ಅಮ್ಮನ ಪಕ್ಕದಲ್ಲೇ ಅಳುತ್ತಾ ಕುಳಿತಿದ್ದಳು.
ಸ್ಟಾಕ್
ಹೋಮ್
ಆಸ್ಪತ್ರೆಗೆ
ದಾಖಲು
ಕೆಲ
ಹೊತ್ತಿನ
ಬಳಿಕ
ತಾಯಿ
ಮತ್ತು
ಮಗುವನ್ನು
ಗಮನಿಸಿದ
ಸ್ಥಳೀಯರು,
ಕೂಡಲೆ
ಪೊಲೀಸರಿಗೆ
ವಿಷಯ
ಮುಟ್ಟಿಸಿದ್ದಾರೆ.
ಅನುಪಮಾ
ಅವರನ್ನು
ಸ್ಟಾಕ್
ಹೋಮ್
ಆಸ್ಪತ್ರೆಗೆ
ದಾಖಲು
ಮಾಡಿದರೂ,
ಅವರಿಗೆ
ಪ್ರಜ್ಞೆ
ಬಂದಿರಲಿಲ್ಲ.
ಸೃಷ್ಟಿಗೆ
ಭಾಷೆ
ತಿಳಿಯದ
ಕಾರಣ
ಮತ್ತು
ಜೈಪ್ರಕಾಶ್
ಅವರ
ಮೃತದೇಹ
ಸಹ
ಪತ್ತೆಯಾಗದ
ಕಾರಣ
ಜೈಪ್ರಕಾಶ್
ಕೊಚ್ಚಿಹೋದ
ವಿಷಯ
ಯಾರಿಗೂ
ಗೊತ್ತಾಗಿರಲಿಲ್ಲ.
ಈ ಸಂದರ್ಭದಲ್ಲಿ ಸೃಷ್ಟಿಯನ್ನು ಸ್ಥಳೀಯ ಡೇಕೇರ್ ಸೆಂಟರ್ನಲ್ಲಿ ಇರಿಸಲಾಗಿತ್ತು. ಇತ್ತ, ಜೈಪ್ರಕಾಶ್ ಕಚೇರಿಗೆ ಗೈರುಹಾಜರಾಗಿದ್ದರಿಂದ ಅಲ್ಲಿನ ವಿಪ್ರೊ ಸಂಸ್ಥೆ ಸಹೋದ್ಯೋಗಿಗಳು ಬೆಂಗಳೂರಿನಲ್ಲಿರುವ ಜೈಪ್ರಕಾಶ್ ಸಹೋದರರೊಬ್ಬರಿಗೆ ದೂರವಾಣಿ ಮೂಲಕ ಮಾಹಿತಿ ನೀಡಿದ್ದರು.
ಆರು
ದಿನಗಳ
ನಂತರ
ಸಮುದ್ರ
ಪಾಲಾಗಿದ್ದ
ಜೈಪ್ರಕಾಶ್
ಶವ
ಆರು
ದಿನಗಳ
ನಂತರ
ದಡಕ್ಕೆ
ತೇಲಿಬಂದಿದೆ.
ಇದನ್ನು
ಕಂಡ
ಪೊಲೀಸರು,
ಅಪರಿಚಿತ
ಭಾರತೀಯನ
ಶವ
ಸಿಕ್ಕಿದೆ
ಎಂದು
ದೂರು
ದಾಖಲಿಸಿಕೊಂಡು
ತನಿಖೆ
ಆರಂಭಿಸಿದ್ದಾರೆ.
ಜತೆಗೆ
ಸುತ್ತಲಿನ
ದೇಶದ
ಸಾಫ್ಟ್ವೇರ್
ಕಂಪನಿಗಳಿಗೂ
ಇ-ಮೇಲ್
ಮೂಲಕ
ಮಾಹಿತಿ
ರವಾನಿಸಿದ್ದಾರೆ.
ಇದನ್ನು
ಗಮನಿಸಿದ
ಲಂಡನಿನ
ವಿಪ್ರೊ
ಅಧಿಕಾರಿಗಳು
ಜೈಪ್ರಕಾಶ್
ಅವರನ್ನು
ಗುರುತು
ಹಿಡಿದು
ಸ್ವೀಡನ್
ಆಡಳಿತಕ್ಕೆ
ಮಾಹಿತಿ
ನೀಡಿದ್ದಲ್ಲದೇ,
ಬೆಂಗಳೂರಿಗೆ
ಮಾಹಿತಿ
ನೀಡಿದ್ದಾರೆ.
ತಕ್ಷಣ ಜೈಪ್ರಕಾಶ್ ಅವರ ತಮ್ಮ ರವಿಕಿರಣ್ ಸ್ವೀಡನ್ಗೆ ತೆರಳಿ, ಸೋದರನ ಶವವನ್ನು ಗುರುತು ಹಿಡಿದರು. ಜತೆಗೆ, ಅಲ್ಲಿಯ ಆಸ್ಪತ್ರೆಯಲ್ಲಿ ದಾಖಲಾಗಿದ್ದ ಅನುಪಮಾ ಅವರನ್ನೂ ಪೊಲೀಸರ ಸಹಾಯದಿಂದ ಪತ್ತೆ ಮಾಡಿದ್ದಾರೆ. ಆ ವೇಳೆಗೆ ಅನುಪಮಾಗೂ ಪ್ರಜ್ಞೆ ಮರುಕಳಿಸಿ ದುರಂತದ ಬಗ್ಗೆ ವಿವರ ನೀಡಿದ್ದಾರೆ. ಬಳಿಕ ಡೇಕೇರ್ನಲ್ಲಿದ್ದ ಸೃಷ್ಟಿಯನ್ನು ಪೊಲೀಸರು ಪೋಷಕರ ವಶಕ್ಕೆ ಒಪ್ಪಿಸಿದರು. ಎಲ್ಲರೂ ಒಟ್ಟಾಗಿ ಜೈಶಂಕರ್ ಅವರ ಶವವನ್ನು ಲಂಡನ್ಗೆ ತಂದರು.
ಜು.
17ರಂದು
ಅಂತ್ಯಕ್ರಿಯೆ
ಲಂಡನ್
ನಿಯಮದ
ಪ್ರಕಾರ
ಶವ
ಸಂಸ್ಕಾರಕ್ಕೂ
ದಿನ
ನಿಗದಿ
ಮಾಡಲಾಗುತ್ತದೆ.
ಆದರೆ.
ಅವರು
ನೀಡಿದ
ದಿನಾಂಕ
ಮಂಗಳವಾರ
ಬಂದ
ಕಾರಣ
ಕುಟುಂಬ
ಅಂತ್ಯಸಂಸ್ಕಾರ
ಮಾಡುವುದಕ್ಕೆ
ಒಪ್ಪದೇ
ಮರುದಿನ
ಅಂದರೆ
ಜು.
17
ರಂದು
ಅಂತ್ಯಕ್ರಿಯೆ
ವಿಧಾನ
ಪೂರೈಸಿದೆ.
ವಿಪರ್ಯಾಸವೆಂದರೆ
ಶವ
ಸಂಸ್ಕಾರಕ್ಕೆ
ಜಾಗವನ್ನೂ
ಸಹ
ಖರೀದಿಸಬೇಕಾದ
ಅನಿವಾರ್ಯತೆ
ಎದುರಾಗಿತ್ತು.
ಅದರಂತೆ ರವಿಕಿರಣ್ ಅವರು ಎಲ್ಲ ನಿಯಮಗಳನ್ನು ಪಾಲಿಸಿ ಶವ ಸಂಸ್ಕಾರ ನೆರವೇರಿಸಿ, ಶುಕ್ರವಾರ ಬೆಳಗಿನ ಜಾವ ಬೆಂಗಳೂರಿನಲ್ಲಿರುವ ಪೋಷಕರಿಗೆ ಕರೆ ಮಾಡಿ ಜೈಪ್ರಕಾಶ್ ಮೃತಪಟ್ಟಿರುವ ಕುರಿತು ತಿಳಿಸಿದ್ದಾರೆ. ಈ ಸುದ್ದಿ ತಿಳಿದ ಪೋಷಕರು, ಕುಟುಂಬ ಸದಸ್ಯರು ಹಾಗೂ ಸ್ನೇಹಿತರು ದಿಗ್ಭ್ರಾಂತರಾಗಿದ್ದಾರೆ. ಜೈಪ್ರಕಾಶ್ ಅವರ ಬಸವನಗುಡಿಯ ಮನೆಯಲ್ಲಿ ಶೋಕ ಮಡುಗಟ್ಟಿದೆ.