ತ್ವರಿತ ಅಲರ್ಟ್ ಗಳಿಗಾಗಿ
For Daily Alerts
ಮತ್ತೊಂದು ಬಿಸಿಯೂಟ ದುರಂತ: 102 ಮಕ್ಕಳು ಅಸ್ವಸ್ಥ
ಅತ್ತ ಬಿಹಾರದಲ್ಲಿ ಪೋಷಕರು ಬಿಸಿಯೂಟ ದುರಂತದಲ್ಲಿ ಮಡಿದ ತಮ್ಮ ಮಕ್ಕಳನ್ನು ಶಾಲೆಯ ಆವರಣದಲ್ಲೇ ಮಣ್ಣು ಮಾಡುವ ಮೂಲಕ ತಮ್ಮ ಆಕ್ರೋಶ/ಹತಾಶೆಯನ್ನು ಹೊರಹಾಕಿದ್ದಾರೆ.
ಇದೇ ವೇಳೆ ಮಕ್ಕಳ ಸಾವಿನ ಬಗ್ಗೆ ಆತಂಕ ವ್ಯಕ್ತಪಡಿಸಿರುವ ಮುಖ್ಯಮಂತ್ರಿ ನಿತೀಶ್ ಕುಮಾರ್ 'ರಾಜ್ಯದಲ್ಲಿ ಎಲ್ಲ ಸರಕಾರಿ ಶಾಲೆಗಳಲ್ಲಿ ಮಕ್ಕಳಿಗೆ ಬಿಸಿಯೂಟ ಕೊಡುವುದಕ್ಕೆ ಮುನ್ನ ಆಯಾ ಶಾಲೆಯ ಮುಖ್ಯ ಶಿಕ್ಷಕರು ಮತ್ತು ಅಡುಗೆ ಮನಾಡಿದವರು ಮೊದಲು ತಾವೇ ರುಚಿ ನೋಡಬೇಕು ಎಂದು ಫರ್ಮಾನು ಹೊರಡಿಸಿದ್ದಾರೆ.
ಮತ್ತೆ ನೈವೇಲಿ ಘಟನೆಗೆ ಬಂದರೆ 9 ರಿಂದ 16 ವರ್ಷದ ಶಾಲಾ ಬಾಲಕಿಯರು ಇಂದು ಮಧ್ಯಾಹ್ನ ಬಿಸಿಯೂಟ ಸೇವಿಸಿದ ತಕ್ಷಣ ಅಸ್ವಸ್ಥಗೊಂಡಿದ್ದಾರೆ. ಅಸ್ವಸ್ಥ ಬಾಲಕಿಯರನ್ನು ಆಸ್ಪತ್ರೆಗೆ ಸೇರಿಸಲಾಗಿದೆ.
ಕೆಟ್ಟ ಮೊಟ್ಟೆ ಹೊಟ್ಟೆ ಸೇರಿದ್ದರಿಂದ ಮಕ್ಕಳು ಅಸ್ವಸ್ಥಗೊಂಡಿದ್ದಾರೆ. ತಕ್ಷಣ ಚಿಕಿತ್ಸೆ ನೀಡಲಾಗಿದ್ದು ಎಲ್ಲರೂ ಅಪಾಯದಿಂದ ಪಾರಾಗಿದ್ದಾರೆ ಎಂದು ವೈದ್ಯರು ತಿಳಿಸಿದ್ದಾರೆ.
Comments
English summary
102 girls of a government school in Neyvelli in Tamil Nadu are in hospital after their midday meal left them sick today (July 18). Since the Bihar midday meal tragedy, horror stories have been coming.