ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮಳೆಗಾಲ ಸಾರಿಗೆ ಬಸ್‌ಗಳ ಪ್ರಯಾಣ ದರ ಇಳಿಕೆ

By Prasad
|
Google Oneindia Kannada News

Monsoon : KSRTC reduces bus fare
ಮಂಗಳೂರು, ಜು. 5 : ದಕ್ಷಿಣ ಕನ್ನಡ ಜಿಲ್ಲೆಯಾದ್ಯಂತ ಉತ್ತಮ ಮಳೆಯಾಗುತ್ತಿರುವುದರಿಂದ ಸಾರ್ವಜನಿಕ ಪ್ರಯಾಣಿಕರ ಅನುಕೂಲಕ್ಕಾಗಿ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದ ಐರಾವತ ಸಾರಿಗೆಗಳ ಪ್ರಯಾಣ ದರದಲ್ಲಿ ಶೇ. 15% ರಷ್ಟು ಇಳಿಕೆ ಮಾಡಲಾಗಿದೆ.

ಮಲ್ಟಿ ಆಕ್ಸಿಲ್ ಮಾದರಿಯ ಸಾರಿಗೆ

ಮಂಗಳೂರು - ಬೆಂಗಳೂರು ದರ ರು.660.
ಉಡುಪಿ - ಬೆಂಗಳೂರು ದರ ರು. 675.
ಕುಂದಾಪುರ - ಬೆಂಗಳೂರು ದರ ರು.725.
ಮಂಗಳೂರು - ಹೈದರಾಬಾದ್ ದರ ರು.1302.
ಮಂಗಳೂರು - ಎರ್ನಾಕುಲಂ ದರ ರು.715.
ಮಂಗಳೂರು - ಮುಂಬೈ ದರ ರು.1100 ಆಗಿರುತ್ತದೆ.

ಎಸಿ ಸ್ಲೀಪರ್ ಮಾದರಿ ಸಾರಿಗೆ

ಮಂಗಳೂರು - ಬೆಂಗಳೂರು ದರ ರು.670.
ಉಡುಪಿ - ಬೆಂಗಳೂರು ದರ ರು.685.
ಕುಂದಾಪುರ - ಬೆಂಗಳೂರು ದರ ರು.735 ಆಗಿರುತ್ತದೆ.

ವೋಲ್ವೋ ಐರಾವತ ಮಾದರಿಯ ಸಾರಿಗೆ

ಮಂಗಳೂರು - ಬೆಂಗಳೂರು ದರ ರು.605.
ಉಡುಪಿ - ಬೆಂಗಳೂರು ದರ ರು.660.
ಕುಂದಾಪುರ - ಬೆಂಗಳೂರು ದರ ರು.715 ಆಗಿರುತ್ತದೆಯೆಂದು ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದ ವಿಭಾಗೀಯ ನಿಯಂತ್ರಣಾಧಿಕಾರಿ, ಮಂಗಳೂರು ತಿಳಿಸಿರುತ್ತಾರೆ.

ಈ ನಡುವೆ, ಬೆಂಗಳೂರಿನಲ್ಲಿ ಸ್ಥಳೀಯ ಬಸ್ಸು ಪ್ರಯಾಣದ ಮೊದಲ ಸ್ಟೇಜ್ ದರವನ್ನು ಮಾತ್ರ 1 ರು.ನಷ್ಟು ಇಳಿಸಲಾಗಿದೆ. ಕೇವಲ 1 ಸ್ಟೇಜ್ ದರ ಮಾತ್ರ ಇಳಿಸಿದ್ದಕ್ಕೆ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಇದು ಆಸೆ ತೋರಿಸಿ ಮೋಸ ಮಾಡಿದ ಹಾಗೆ ಎಂದು ಅಭಿಪ್ರಾಯ ವ್ಯಕ್ತಪಡಿಸುತ್ತಿದ್ದಾರೆ.

English summary
Karnataka State Road Transport Corporation (KSRTC) Mangalore division has reduced bus fare in Dakshina Kannada region due to good monsoon. Irawat Bus fares will be reduced by 15%. Will KSRTC do the same in other divisions also?
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X