ಬಿಎಸ್ವೈ ಬಿಜೆಪಿಗೆ ವಾಪಸ್: ಪೇಜಾವರಶ್ರೀ ಪೌರೋಹಿತ್ಯ
ಬೆಳಗಾವಿ, ಜುಲೈ4: ಕೆಜೆಪಿ ನಾಯಕ ಬಿಎಸ್ ಯಡಿಯೂರಪ್ಪ ಅವರನ್ನು ಬಿಜೆಪಿಗೆ ವಾಪಸ್ ಕರೆತರುವ ಜರೂರತ್ತು ಬಹಳಷ್ಟಿದೆ. ಈ ಸಂಬಂಧ ಬಿಜೆಪಿ ಮತ್ತು ಕೆಜೆಪಿ ನಾಯಕರ ಮನವೊಲಿಕೆಗೆ ತಾವು ಪ್ರಯತ್ನಿಸುವುದಾಗಿ ಉಡುಪಿಯ ಪೇಜಾವರ ಮಠದ ವಿಶ್ವೇಶತೀರ್ಥ ಸ್ವಾಮೀಜಿ ಅವರು ಹೇಳಿದ್ದಾರೆ.
ಬುಧವಾರ
ಸದಾಶಿವನಗರದ
ಸಂಪಿಗೆ
ರಸ್ತೆಯಲ್ಲಿರುವ
ಸಂಸದ
ಸುರೇಶ್
ಅಂಗಡಿ
ಅವರ
ನಿವಾಸಕ್ಕೆ
ಭೇಟಿ
ನೀಡಿದ್ದ
ಪೇಜಾವರ
ಶ್ರೀಗಳು
ಬಿಜೆಪಿ
ಮತ್ತು
ಕೆಜೆಪಿ
ಒಂದಾದರೆ
ಒಳ್ಳೆಯದು.
ಇದರಿಂದ
ಯಡಿಯೂರಪ್ಪ
ಸೇರಿದಂತೆ
ಎಲ್ಲ
ನಾಯಕರಿಗೂ
ಹಾಗೂ
ಪಕ್ಷಕ್ಕೂ
ಒಳ್ಳೆಯದಾಗಲಿದೆ
ಎಂದು
ಆಶಿಸಿದರು.
ನಾಯಕರ ಮನವೊಲಿಕೆಗೆ ತಾವು ಸಿದ್ಧ
ಯಡಿಯೂರಪ್ಪ ಅವರನ್ನು ಪಕ್ಷಕ್ಕೆ ಮರಳಿ ಕರೆತರುವ ನಿಟ್ಟಿನಲ್ಲಿ ಪಕ್ಷದ ಹೈಕಮಾಂಡ್ ತೆಗೆದುಕೊಳ್ಳುವ ತೀರ್ಮಾನಕ್ಕೆ ಎಲ್ಲರೂ ಬದ್ಧರಾಗಿರಬೇಕು. ಇದೇ ವೇಳೆ ತಾವೂ ಪಕ್ಷದ ನಾಯಕರ ಮನವೊಲಿಕೆಗೆ ಯತ್ನಿಸುವುದಾಗಿಯೂ ಅವರು ಹೇಳಿದರು.
ಪಕ್ಷ, ರಾಜ್ಯ ಹಾಗೂ ರಾಷ್ಟ್ರಕ್ಕೆ ಒಳ್ಳೆಯದಾಗುತ್ತದೆ
ಪಕ್ಷ, ರಾಜ್ಯ ಹಾಗೂ ರಾಷ್ಟ್ರಕ್ಕೆ ಒಳ್ಳೆಯದಾಗುವುದಾದರೆ ಯಡಿಯೂರಪ್ಪ ಪಕ್ಷಕ್ಕೆ ಮರಳಿ ಕರೆತರಲು ನೇತೃತ್ವ ವಹಿಸಲೂ ತಾವು ಸಿದ್ಧ ಎಂದು ಪೇಜಾವರ ಶ್ರೀಗಳು ಸ್ಪಷ್ಟಪಡಿಸಿದರು.
ಮೋದಿ ಪ್ರಧಾನಿಯಾಗಲಿ:
ಗುಜರಾತಿನ ಹಾಲಿ ಮುಖ್ಯಮಂತ್ರಿ ನರೇಂದ್ರ ಮೋದಿ ಅವರು ಭವಿಷ್ಯದಲ್ಲಿ ಪ್ರಧಾನಿಯಾಗಲಿ ಎಂದು ಪೇಜಾವರ ಶ್ರೀಗಳು ಇದೇ ವೇಳೆ ಹಾರೈಸಿದರು.
ಆಗಸ್ಟ್ 2-3 ರಾಜ್ಯಕ್ಕೆ ಮೋದಿ ಭೇಟಿ:
ರಾಜ್ಯ ಮತ್ತು ರಾಷ್ಟ್ರ ಬಿಜೆಪಿಯಲ್ಲಿ ರಾಜಕೀಯ ಚಟುವಟಿಕೆಗಳು ತೀವ್ರಗೊಂಡಿವೆ. ಲೋಕಸಭೆ ಚುನಾವಣೆ ಪ್ರಚಾರ ಸಮಿತಿ ಅಧ್ಯಕ್ಷರಾಗಿ ನೇಮಕಗೊಂಡಿರುವ ಗುಜರಾತ್ ಮುಖ್ಯಮಂತ್ರಿ ನರೇಂದ್ರ ಮೋದಿ ಪಕ್ಷ ಸಂಘಟನೆಗಾಗಿ ಈ ತಿಂಗಳಿನಿಂದ ದೇಶಾದ್ಯಂತ ಯಾತ್ರೆ ಆರಂಭಿಸಲಿದ್ದಾರೆ. ನರೇಂದ್ರ ಮೋದಿ ಆಗಸ್ಟ್ ಮೊದಲ ವಾರ ರಾಜ್ಯಕ್ಕೆ ಆಗಮಿಸಲಿದ್ದಾರೆ.
ಯಡಿಯೂರಪ್ಪ ಮಾತುಕತೆ ಎರಡನೇ ಸುತ್ತಿಗೆ:
ಮೋದಿ
ಅವರು
ರಾಜ್ಯಕ್ಕೆ
ಆಗಮಿಸುವ
ಸಂದರ್ಭದಲ್ಲಿ
ಮಾಜಿ
ಮುಖ್ಯಮಂತ್ರಿ
ಯಡಿಯೂರಪ್ಪ
ಅವರನ್ನು
ಪಕ್ಷಕ್ಕೆ
ವಾಪಸ್
ಕರೆತರುವ
ಬಗ್ಗೆ
ಎರಡನೇ
ಸುತ್ತಿನ
ಪ್ರಯತ್ನ
ಆರಂಭವಾಗಲಿದೆ
ಎಂದು
ಮೂಲಗಳು
ತಿಳಿಸಿವೆ.
ಯಡಿಯೂರಪ್ಪ
ಅವರನ್ನು
ಮತ್ತೆ
ಪಕ್ಷಕ್ಕೆ
ಕರೆತರುವ
ಬಗ್ಗೆ
ರಾಜ್ಯ
ಬಿಜೆಪಿಯಲ್ಲಿ
ಪ್ರಯತ್ನ
ಆರಂಭವಾಗಿದೆ.
ಈ
ಮಧ್ಯೆ
ತಾವು
ಬಿಜೆಪಿಗೆ
ಬರುವ
ವಿಚಾರದಲ್ಲಿ
ನರೇಂದ್ರ
ಮೋದಿ
ಮಧ್ಯಸ್ತಿಕೆ
ವಹಿಸಬೇಕು
ಎಂದು
ಯಡಿಯೂರಪ್ಪ
ಅವರು
ಈಗಾಗಲೇ
ತಮ್ಮ
ಆಪ್ತ
ವಲಯದ
ಮೂಲಕ
ಬಿಜೆಗೆ
ಸಂದೇಶ
ಕಳುಹಿಸಿದ್ದಾರೆ.
ಆದರೆ,
ಮೋದಿ
ಮಾತ್ರ
ಇದುವರೆಗೂ
ಯಡಿಯೂರಪ್ಪ
ಅವರನ್ನು
ಮತ್ತೆ
ಪಕ್ಷಕ್ಕೆ
ಕರೆಸಿಕೊಳ್ಳುವ
ಬಗ್ಗೆ
ಯಾವುದೇ
ಅಭಿಪ್ರಾಯ
ವ್ಯಕ್ತಪಡಿಸಿಲ್ಲ.
ಹೀಗಾಗಿ
ಆಗಸ್ಟ್
ತಿಂಗಳಲ್ಲಿ
ರಾಜ್ಯಕ್ಕೆ
ಆಗಮಿಸಲಿರುವ
ನರೇಂದ್ರ
ಮೋದಿ
ಅವರ
ಎದುರು
ರಾಜ್ಯ
ಮುಖಂಡರು
ಯಡಿಯೂರಪ್ಪ
ಅವರನ್ನು
ಪಕ್ಷಕ್ಕೆ
ವಾಪಸ್
ಕರೆಸಿಕೊಳ್ಳುವ
ವಿಚಾರ
ಪ್ರಸ್ತಾಪಿಸುವ
ಅಂದಾಜಿದೆ.