ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬೆಂಗಳೂರು ರಸ್ತೆ ಸುಧಾರಣೆಗೆ ಸಚಿವ ರೆಡ್ಡಿ ಮಾಸ್ಟರ್ ಪ್ಲಾನ್

By Srinath
|
Google Oneindia Kannada News

Six major roads in Bangalore to be widened Ramalinga Reddy
ಬೆಂಗಳೂರು, ಜೂನ್ 26: ಬೆಂಗಳೂರು ಟ್ರಾಫಿಕ್ ನಿಂದ ಜನ ದಿನಾ ಪಾಡುಪಡುವುದು ಆ ದೇವರಿಗೇ ಪ್ರೀತಿ. ಅದು ಈ ಬಾರಿ ಬೆಂಗಳೂರು ಉಸ್ತುವಾರಿ ಹೊತ್ತ ಸಚಿವ ರಾಮಲಿಂಗಾ ರೆಡ್ಡಿ ಅವರ ಅರಿವಿಗೆ ಬಂದಿದ್ದು, ನಗರದ 6 ಕಡೆ ಪ್ರಮುಖ ರಸ್ತೆಗಳನ್ನು ವಿಸ್ತರಿಸಲು ತೀರ್ಮಾನಿಸಿದ್ದಾರೆ.

ವಿದ್ಯಾರ್ಥಿ ದೆಸೆಯಿಂದಲೂ ಬೆಂಗಳೂರಿನವರೇ ಆದ ಆನೇಕಲ್ ನ ರಾಮಲಿಂಗಾ ರೆಡ್ಡಿ ಅವರಿಗೆ ಬೆಂಗಳೂರು ಸಂಚಾರದಟ್ಟಣೆಯ ದುಃಸ್ಥಿತಿ ಚೆನ್ನಾಗಿ ಗೊತ್ತು. ಹಾಗಾಗಿ ಸಂಚಾರವನ್ನು ಸ್ವಲ್ಪ ಸುಧಾರಿಸಲು ಅವರು ಮನಸು ಮಾಡಿರುವುದು ಸ್ವಾಗತಾರ್ಹ.

ರಸ್ತೆ ಅಗಲೀಕರಣ ಎಂದಾಕ್ಷಣ ಮತ್ತೆ ರಸ್ತೆಯ ಇಕ್ಕೆಲಗಳಲ್ಲಿ ನಮ್ಮ ಬಿಲ್ಡಿಂಗುಗಳನ್ನು ಕೆಡವುತ್ತಾರಾ? ಎಂದು ಜನ ಆತಂಕ ಪಡುವ ಅಗತ್ಯವಿಲ್ಲ. ಏಕೆಂದರೆ ಈಗಿರುವ ಜಾಗದಲ್, ಅದೂ ಸರಕಾರಿ ಜಾಗದಲ್ಲೇ ರಸ್ತೆ ವಿಸ್ತರಿಸುತ್ತೇವೆ. ಜನರಿಗೆ ತೊಂದರೆ ಕೊಡುವುದಿಲ್ಲ ಎಂದು ಸಚಿವ ರೆಡ್ಡಿ ಅಭಯ ನೀಡಿದ್ದಾರೆ.

ಅಂದಹಾಗೆ ಈ ಕಾಮಗಾರಿ ಉಸ್ತುವಾರಿಯನ್ನು ಬಿಡಿಎಗೆ ವಹಿಸಲಾಗಿದೆ. ಇದೇ ಮಳೆಗಾಲದಲ್ಲಿ 3-4 ತಿಂಗಳಲ್ಲಿ ಕಾಮಗಾರಿ ಪೂರ್ಣಗೊಳ್ಳಲಿದೆ.

BBMP, BDA, Bangalore traffic police, BWSSB, BMRDA, Bangalore Urban district, BMTC ಮತ್ತು BMRCL ಇಲಾಖೆಯ ಹಿರಿಯ ಅಧಿಕಾರಿಗಳು ಭಾಗವಹಿಸಿದ್ದ ಸಭೆಯಲ್ಲಿ ಸಚಿವ ರಾಮಲಿಂಗಾರೆಡ್ಡಿ ಅವರು ಸರಕಾರದ ಈ ನಿರ್ಧಾರಗಳನ್ನು ಮಂಗಳವಾರ ಪ್ರಕಟಿಸಿದ್ದಾರೆ.

ಎಲ್ಲೆಲ್ಲಿ ರಸ್ತೆ ವಿಸ್ತರಣೆ? ವಿವರಗಳೇನು?
1) ನಾಗವಾರದ ಥಣಿಸಂದ್ರ ಮೇಲುರಸ್ತೆ ಸಮೀಪ ಸಿಲ್ಕ್‌ ಬೋರ್ಡ್‌ನಿಂದ ಜಯದೇವ ಹೃದ್ರೋಗ ಆಸ್ಪತ್ರೆಯ ತನಕ (29ನೇ ಮುಖ್ಯರಸ್ತೆ),
2) ಮೇಖ್ರಿ ವೃತ್ತದ ಬಳಿಯಿಂದ ವಿಂಡ್ಸರ್ ಮ್ಯಾನರ್ ಹೋಟೆಲಿನವರೆಗಿನ ರಮಣಶ್ರೀ ರಸ್ತೆ,
3) ಕೆಆರ್ ಪುರದ ಬೆನ್ನಿಗಾನಹಳ್ಳಿಯಿಂದ ಮಹದೇವಪುರ ಮೇಲುರಸ್ತೆ ತನಕ,
4) ಡೈರಿ ವೃತ್ತದಿಂದ ಸಾಗರ್ ಅಪೊಲೊ ಆಸ್ಪತ್ರೆವರೆಗಿನ ಬನ್ನೇರುಘಟ್ಟ ರಸ್ತೆ,
5) ಹಡ್ಸನ್ ಸರ್ಕಲ್‌ನಿಂದ ಮಿಷನ್ ರಸ್ತೆವರೆಗಿನ ದೇವಾಂಗ ಹಾಸ್ಟೆಲ್ ರಸ್ತೆ, ಹಾಗೂ
6) ಹೆಬ್ಬಾಳ ಮೇಲುರಸ್ತೆ ಸುತ್ತಲಿನ ರಸ್ತೆಗಳು

ಬೈಸಿಕಲ್ ಟ್ರ್ಯಾಕ್ ಯೋಜನೆ ವಿಫಲ. ಆದರೂ
'ಜಯನಗರದಲ್ಲಿ ಈಗಾಗಲೇ ಸೈಕಲ್ ಟ್ರ್ಯಾಕ್ (ಪ್ರತ್ಯೇಕ ಸೈಕಲ್ ಪಥ) ಇರುವುದು ಸೈಕಲ್ ಸವಾರರನ್ನು ಬಿಟ್ಟು ಉಳಿದೆಲ್ಲ ವಾಹನ ಸವಾರರಿಗೂ ತಿಳಿದಿರುವುದೇ. ಅದೊಂದು ವಿಫಲ ಯೋಜನೆಯಾಗಿದ್ದು, ಇತರೆ ವಾಹನಗಳಿಗೆ ಪಾರ್ಕಿಂಗ್ ಸ್ಪೇಸ್ ಆಗಿದೆ.

ಆದರೂ ಸರಕಾರ ಆ ಯೋಜನೆಯನ್ನು ಮುಂದುವರಿಸಲು ನಿರ್ಧರಿಸಿದ್ದು ಮಡಿವಾಳದಲ್ಲೂ 4.5 ಕೋಟಿ ರೂ. ವೆಚ್ಚದಲ್ಲಿ ಇದೇ ಮಾದರಿಯಲ್ಲಿ ಸೈಕಲ್ ಟ್ರ್ಯಾಕ್ ನಿರ್ಮಿಸಲು ಮುಂದಾಗಿದೆ. ಮುಂದೆ ಎಚ್‌ಎಸ್‌ಆರ್ ಲೇಔಟ್, ಇಂದಿರಾನಗರ, ಸದಾಶಿವನಗರದಲ್ಲೂ ಸೈಕಲ್ ಟ್ರ್ಯಾಕ್ ನಿರ್ಮಿಸಲು ಉದ್ದೇಶಿಸಿದೆ.

English summary
Six major roads in Bangalore to be widened says City in-charge minister Ramalinga Reddy. As part of Bangalore development and to beat traffic congestion, the government has decided to widen and improve these prime roads in the city. Widening will be taken up between -- Ramanamaharshi road from Mekhri Circle to Windsor Manor junction, Outer rind road between Silk board junction to Jayadeva hospital flyover, K R Puram between Benniganahalli to Mahadevapura flyover, Nagawara junction towards Hebbal, Bannerghatta road between Bangalore dairy to Sagar Apollo hospital and widening Hebbal flyover.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X