ರಾಜ್ಯದ ಜಲಾಶಯಗಳ ಇಂದಿನ ನೀರಿನ ಮಟ್ಟ
ರಾಜ್ಯದ ಪ್ರಮುಖ ಜಲಾಶಯಗಳಾದ ಕೆಆರ್ಎಸ್, ಲಿಂಗನಮಕ್ಕಿ, ಆಲಮಟ್ಟಿ, ತುಂಗಭದ್ರಾ, ಹಾರಂಗಿ, ಕಬಿನಿ ಮುಂತಾದವುಗಳು ನಿಧಾನವಾಗಿ ಭರ್ತಿಯಾಗುತ್ತಿವೆ. ವರುಣದೇವ ಜುಲೈತಿಂಗಳಿನಲ್ಲಿಯೂ ಹೀಗೆ ಮಳೆ ಸುರಿಸಿದರೆ, ರಾಜ್ಯ ನೀರಿನ ಕೊರತೆ ಎದುರಿಸಬೇಕಾಗಿಲ್ಲ.
ಲಿಂಗನಮಕ್ಕಿ ಜಲಾಶಯ ತುಂಬಿದರೆ ರಾಜ್ಯದ ವಿದ್ಯುತ್ ಕೊರತೆ ಸ್ವಲ್ಪ ಮಟ್ಟಿಗೆ ಬಗೆಹರಿಯಲಿದೆ. ಕೆಆರ್ಎಸ್, ಕಬಿನಿ, ಹಾರಂಗಿ ಭರ್ತಿಯಾದರೆ, ಬೆಂಗಳೂರು ಮತ್ತು ಮೈಸೂರು ನಗರಗಳಗಳಿಗೆ ನೀರಿನ ಕೊರತೆ ಉಂಟಾಗುವುದಿಲ್ಲ.
ಹೆಚ್ಚು ಮಳೆ : ಹವಾಮಾನ ಇಲಾಖೆಯ ಅಂಕಿ ಸಂಖ್ಯೆಗಳ ಪ್ರಕಾರ ರಾಜ್ಯದಲ್ಲಿ ಜೂನ್ ತಿಂಗಳಿನಲ್ಲಿ ವಾಡಿಕೆಗಿಂತ ಹೆಚ್ಚು ಮಳೆಯಾಗಿದೆ. ಜೂ.21ರವರೆಗೆ ರಾಜ್ಯದಲ್ಲಿ 125.1 ಮಿ.ಮೀ ಮಳೆ ಬೀಳಬೇಕಿತ್ತು. ಆದರೆ ಈ ಬಾರಿ,160.3 ಮಿ.ಮೀ ನಷ್ಟು ಮಳೆ ಬಿದ್ದಿದೆ.
ಆದ್ದರಿಂದ ರಾಜ್ಯದ ಜಲಾಶಯಗಳಿಗೆ ಹೆಚ್ಚಿನ ನೀರು ಹರಿದು ಬರುತ್ತಿದ್ದು, ಜಲಾಶಯಗಳು ಭರ್ತಿಯಾಗುತ್ತಿವೆ. ಕಬಿನಿ ಜಲಾಶಯ ಭರ್ತಿಯಾಗಲು ಕೇವಲ 7 ಅಡಿ ನೀರು ಬೇಕಾಗಿದೆ. ಸೋಮವಾರ ಸಂಜೆ ಜಲಾಶಯದ ನೀರಿನ ಮಟ್ಟ 2277 ಅಡಿ ಇತ್ತು. ಕಬಿನಿ ಜಲಾಶಯದಲ್ಲಿ 2284 ಅಡಿ ನೀರು ಸಂಗ್ರಹಿಸಬಹುದಾಗಿದೆ.
ಮೈಸೂರು ಮತ್ತು ಬೆಂಗಳೂರಿಗೆ ಕುಡಿಯುವ ನೀರು ಒದಗಿಸುವ ಕೆಆರ್ಎಎಸ್ ನಲ್ಲಿ 79.90 ಅಡಿ ನೀರು ಭರ್ತಿಯಾಗಿದೆ. ಕೆಆರ್ಎಸ್ ಭರ್ತಿಆಗಲು 124.80 ಅಡಿ ನೀರಿನ ಅವಶ್ಯಕತೆ ಇದೆ.
ರಾಜ್ಯಕ್ಕೆ ವಿದ್ಯುತ್ ನೀಡುವ ಲಿಂಗನಮಕ್ಕಿ ಜಲಾಶಯದಲ್ಲಿ 1760 ಅಡಿ ನೀರು ಸೋಮವಾರ ದಾಖಲಾಗಿತ್ತು. ಜಲಾಶಯದ ಒಟ್ಟು ಗಾತ್ರ 1819 ಅಡಿಗಳಾಗಿದೆ. ರಾಜ್ಯದ ಇತರ ಪ್ರಮುಖ ಜಲಾಶಯಗಳ ನೀರಿನ ಮಟ್ಟ ಸೋಮವಾರ ಸಂಜೆ ದಾಖಲಾದಂತೆ ಹೀಗಿದೆ.
ಜಲಾಶಯ
ಇಂದಿನ
ಮಟ್ಟ
ಗರಿಷ್ಟ
ಮಟ್ಟ
ಆಲಮಟ್ಟಿ
510.5
519.60
ಮೀ
ಭದ್ರಾ
125.30
186
ಅಡಿ
ತುಂಗಭದ್ರಾ
1590.27
1633
ಅಡಿ
ಹಾರಂಗಿ
2831.45
2,859
ಅಡಿ
ಕೆಆರ್ಎಸ್
79.90
124.80
ಅಡಿ