ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಧನಂಜಯ ಮಾತು ತಳ್ಳಿಹಾಕಿದ ಯಡಿಯೂರಪ್ಪ

By Srinath
|
Google Oneindia Kannada News

kjp-returning-to-bjp-yeddyurappa-denies-dhananjay-kumar
ಧರ್ಮಸ್ಥಳ, ಜೂನ್ 22: ಕೆಜೆಪಿ ಮತ್ತು ಬಿಜೆಪಿ ಒಂದಾಗುವುದರ ಬಗ್ಗೆ ಸಂಜಯ ಅಲ್ಲಲ್ಲ ಧನಂಜಯ ನೀಡಿದ್ದ ರನ್ನಿಂಗ್ ಕಾಮೆಂಟರಿ ಬಗ್ಗೆ ಬಿಜೆಪಿ ರಾಜ್ಯಾಧ್ಯಕ್ಷ ಪ್ರಹ್ಲಾದ್ ಜೋಷಿ ಹೇಳಿದಂತೆ ಆಗಿದೆ.

'ಮೂರು ದಿನಗಳ ಮುಂಚೆ ಮೋದಿ ಮಧ್ಯಸ್ಥಿಕೆ ವಹಿಸಿದರೆ ತಮ್ಮ ಕೆಜೆಪಿ ಪಕ್ಷವು ಬಿಜೆಪಿಗೆ ವಾಪಸಾಗುವುದಂತೆ? ವಿ ಧನಂಜಯ ಕುಮಾರ್ ಅವರು ಹಾಗೆ ಹೇಳಿದ್ದಾರೆ? ನೀವು ಏನು ಹೇಳುತ್ತೀರಿ' ಎಂದು ಯಡಿಯೂರಪ್ಪ ಅವರನ್ನು ಇಂದು ಧರ್ಮಸ್ಥಳದಲ್ಲಿ ಸುದ್ದಿಗಾರರು ಕೇಳಿದ್ದಕ್ಕೆ ಯಡಿಯೂರಪ್ಪ ಅವರು ನಿರುತ್ಸಾಹದ ಧ್ವನಿಯಲ್ಲಿ ಪ್ರತಿಕ್ರಿಯೆ ನೀಡಿದ್ದಾರೆ.

'ಅಂಥಾದ್ದೇನು ನಡೆದಿಲ್ಲ. ಕೆಜೆಪಿ ಮತ್ತು ಬಿಜೆಪಿ ಒಂದಾಗುವುದರ ಬಗ್ಗೆ ಯಾವುದೇ ಕಾಂಕ್ರಿಟ್ ಮಾತುಕತೆ ನಡೆದಿಲ್ಲ. ಸುಮ್ಮನೆ ಅಲ್ಲಲ್ಲಿ ಚರ್ಚೆಗೆ ಬರುತ್ತಿದೆ ಅಷ್ಟೇ. ಅದಕ್ಕಿಂತ ಹೆಚ್ಚಿಗೆ ಮುಂದುವರಿದಿಲ್ಲ' ಎಂದು ತಣ್ಣಗೆ ಪ್ರತಿಕ್ರಿಯಿಸಿದ್ದಾರೆ.

ನರೇಂದ್ರ ಮೋದಿ ಮಧ್ಯಸ್ಥಿಕೆ ವಹಿಸಿದರೆ ಮಾತ್ರ ಕೆಜೆಪಿ ನಾಯಕ ಯಡಿಯೂರಪ್ಪ ಅವರು ಬಿಜೆಪಿಗೆ ವಾಪಸಾಗುವುದಕ್ಕೆ ಸಿದ್ಧ ಎಂದು ಕೆಜೆಪಿ ವಕ್ತಾರ ವಿ ಧನಂಜಯ ಕುಮಾರ್ ತಿಳಿಸಿದ್ದರು.

English summary
KJP returning to BJP - Karnataka ex CM BS Yeddyurappa denies V Dhananjay Kumar in Dharmasthala today (June 22). Three days back V Dhananjay Kumar had said that Karnataka ex CM BS Yeddyurappa would return to BJP if Narendra Modi mediate.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X