ದೇವೇಗೌಡರು 'ರಾಜ್'ಕೀಯಕ್ಕೆ ಯತ್ನಿಸಿದ್ದರಂತೆ!
ಆದರೆ ರಾಜಕೀಯದ ಬಗ್ಗೆ ಅದಾಗಲೇ ಚಿಕ್ಕಮನಸು ಮಾಡಿದ್ದ ವರನಟ, ದೊಡ್ಡಗೌಡರ ಒತ್ತಾಯಕ್ಕೆ ಮಣಿಯಲಿಲ್ಲ ಎಂಬುದು ಈಗ ಇತಿಹಾಸ. ಕನ್ನಡ ಚಿತ್ರರಂಗದ ಹಿರಿಯ ನಟಿಯರಾದ ಡಾ. ಲೀಲಾವತಿ, ಬಿವಿ ರಾಧಾ ಸೇರಿದಂತೆ 13 ಹಿರಿಯ ಕಲಾವಿದರಿಗೆ ಡಿಎಸ್-ಮ್ಯಾಕ್ಸ್ ಕಲಾಶ್ರೀ ಪ್ರಶಸ್ತಿಗಳನ್ನು ಪ್ರದಾನ ಮಾಡಿದ ದೇವೇಗೌಡರು ಈ ವಿಷಯ ಹೊರಹಾಕಿದರು.
ನಟರಾಗಿ ಡಾ. ರಾಜ್ ಕುಮಾರ್ ಅವರು ತುಂಬಾ ಎತ್ತರಕ್ಕೆ ಬೆಳೆದವರು. ಅಂಥ ವ್ಯಕ್ತಿಯನ್ನು ರಾಜಕೀಯಕ್ಕೆ ಕರೆತರುವುದು ಸಮಂಯಸವಲ್ಲ' ಎಂದು ಆಗ ತಮಿಳಿನ ಖ್ಯಾತ ನಟರಾಗಿದ್ದ ಎಂಜಿ ರಾಮಚಂದ್ರನ್ ನನಗೆ ಕಿವಿಮಾತು ಹೇಳಿದರು. ಆದ್ದರಿಂದ ನಾನೂ ಆ ಪ್ರಯತ್ನವನ್ನು ಅಲ್ಲಿಗೇ ಬಿಟ್ಟೆ ಎಂದು ಗೌಡರು ಹೇಳಿದರು.
ಕಲಾವಿದರನ್ನು ಗೌರವಿಸುವುದು ಜತೆಗೆ ಸಂಕಷ್ಟದಲ್ಲಿರುವವರಿಗೆ ನೆರವು ನೀಡುವುದು ಸರಕಾರದ ಕರ್ತವ್ಯ. ಹಿಂದೆ ತಾವು ಮುಖ್ಯಮಂತ್ರಿಯಾಗಿದ್ದಾಗ ಪಂಡರೀಭಾಯಿ ಅನಾರೋಗ್ಯಕ್ಕೆ ತುತ್ತಾಗಿದ್ದ ವಿಷಯ ತಿಳಿದು ಸಹಾಯ ಮಾಡಿದ್ದನ್ನು ಗೌಡರು ಈ ಸಂದರ್ಭದಲ್ಲಿ ನೆನಪು ಮಾಡಿಕೊಂಡರು.
ಗಿರಿಜಾ
ಲೋಕೇಶರ
ಔದಾರ್ಯ:
ಹಿರಿಯ
ಕಲಾವಿದೆ
ಬಿವಿ
ರಾಧಾ
ಆರ್ಥಿಕ
ಸಂಕಷ್ಟದಲ್ಲಿದ್ದಾರೆ
ಎಂದು
ಗಿರಿಜಾ
ಲೋಕೇಶ್
ಅವರು
ಪ್ರಶಸ್ತಿಯ
ಭಾಗವಾಗಿ
ತಮಗೆ
ದೊರೆತ
10
ಸಾವಿರ
ರೂ
ನಗದನ್ನು
ರಾಧಾ
ಅವರಿಗೆ
ನೀಡುವ
ಮೂಲಕ
ಮಾನವೀಯತೆ
ತೋರಿದರು.