ಕ್ಯಾನ್ಸರ್ ಮಾರಿಗೆ ಗಾಯಕಿ ರಂಜನಿ ಹೆಬ್ಬಾರ್ ಬಲಿ
ಉಡುಪಿ, ಜೂ.10: ಕರ್ನಾಟಕ ಶಾಸ್ತ್ರೀಯ ಸಂಗೀತ ಕ್ಷೇತ್ರದಲ್ಲಿ ಜನಪ್ರಿಯತೆ ಗಳಿಸಿದ್ದ ಗಾಯಕಿ ರಂಜನಿ ಹೆಬ್ಬಾರ್ ಗುರುಪ್ರಸಾದ್ ಅವರು ಅಕಾಲಿಕ ಮರಣ ಹೊಂದಿದ್ದಾರೆ. ಚೆನ್ನೈನಲ್ಲಿ ನೆಲೆಸಿದ್ದ 31 ವರ್ಷ ವಯಸ್ಸಿನ ರಂಜನಿ ಅವರು ಭಾನುವಾರ ರಾತ್ರಿ ಉಡುಪಿ ಸಮೀಪದ ಮಣಿಪಾಲ್ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ.
ದಕ್ಷಿಣ ಕನ್ನಡ ಮೂಲದ ರಂಜನಿ ಹೆಬ್ಬಾರ್ ಅವರು ಕ್ಯಾನ್ಸರ್ ಮಾರಿಗೆ ಬಲಿಯಾಗಿದ್ದಾರೆ. ಸಸ್ಯಶಾಸ್ತ್ರ ಪ್ರೊಫೆಸರ್ ಅರವಿಂದ್ ಹೆಬ್ಬಾರ್ ಹಾಗೂ ವಸಂತಲಕ್ಷ್ಮಿ ಅವರ ಪುತ್ರಿ ರಂಜನಿ ಅವರಿಗೆ ಗರ್ಭಕೋಶದ ಕ್ಯಾನ್ಸರ್ ನಿಂದ ಬಳಲುತ್ತಿದ್ದರು.
ರಂಜನಿ
ಅವರ
ಹುಟ್ಟೂರು
ಇಂದ್ರಾಳಿಯಲ್ಲಿ
ಪಾರ್ಥೀವಶರೀರವನ್ನು
ಸಾರ್ವಜನಿಕ
ದರ್ಶನಕ್ಕೆ
ಇಡಲಾಗಿತ್ತು
ಎಂದು
ಕುಟುಂಬದ
ಮೂಲಗಳು
ತಿಳಿಸಿದೆ.
ಚಿಕ್ಕಂದಿನಿಂದಲೂ ಸಂಗೀತದಲ್ಲಿ ಆಸಕ್ತಿ ಹೊಂದಿದ್ದ ರಂಜನಿ ಅವರಿಗೆ ಆರಂಭದಲ್ಲಿ ಪೋಷಕರಿಂದಲೇ ಮಾರ್ಗದರ್ಶನ ಸಿಕ್ಕಿತ್ತು. ನಂತರ ಮಧೂರು ಬಾಲಸುಬ್ರಮಣ್ಯಂ, ಗಾಯಕಿ ಎಸ್ ಸೌಮ್ಯ ಹಾಗೂ ಶ್ರೀನಿವಾಸನ್ ಅವರ ಶಿಷ್ಯೆಯಾದರು.
ನಂತರ ವಿದ್ವಾನ್ ಚೆಂಗಲ್ ಪೇಟ್ ರಂಗನಾಥನ್ ಅವರ ಮಾರ್ಗದರ್ಶನ ಪಡೆದ ರಂಜನಿ ಅವರು ದಾಸರ ಪದಗಳನ್ನು ಹಾಡುವುದರಲ್ಲಿ ಜನಪ್ರಿಯತೆ ಗಳಿಸಿದ್ದರು.
ಪತಿ ಸಾಫ್ಟ್ ವೇರ್ ಇಂಜಿನಿಯರ್ ಗುರುಪ್ರಸಾದ್ ಅವರನ್ನು ಮದುವೆಯಾದ ಮೇಲೆ ಚೆನ್ನೈಗೆ ತೆರಳಿದ ರಂಜನಿ ತಮ್ಮ ಸಂಗೀತಾಭ್ಯಾಸ ಮುಂದುವರೆಸಿದ್ದರು.
ಮದ್ರಾಸ್ ವಿಶ್ವವಿದ್ಯಾಲಯದಿಂದ ಸಂಗೀತದಲ್ಲಿ ಸ್ನಾತಕೋತ್ತರ ಪದವಿ ಪಡೆದರು. ಆಕಾಶವಾಣಿಯ ಎ ಗ್ರೇಡ್ ಕಲಾವಿದರಾಗಿದ್ದರು. ಕಲ್ಕಿ ಪ್ರಶಸ್ತಿ, ಇಸೈ ಚುಡರ್ ಸೇರಿದಂತೆ ಹಲವು ಪ್ರಶಸ್ತಿಗಳನ್ನು ತಮ್ಮದಾಗಿಸಿಕೊಂಡಿದ್ದರು. ಎಂಎಸ್ ಸುಬ್ಬಲಕ್ಷ್ಮಿ ಅವರ ಹೆಸರಿನ ಶಿಷ್ಯವೇತನ ಪಡೆದಿದ್ದರು. ಪ್ರತಿಭಾವಂತ ಗಾಯಕಿ ರಂಜನಿ ಅಕಾಲಿಕ ಸಾವಿಗೆ ಸಂಗೀತ ಲೋಕ ಕಂಬನಿ ಮಿಡಿದಿದೆ.
I am deeply saddened by the death of carnatic vocalist Ranjani Hebbar after her brave fight with cancer, my sincere condolence to her family
— Dhanya Madhavan Nair (@DhanyaMadhavanN) June 10, 2013
So sad for Ranjani Hebbar. Let her music live.
— Archana Siva (@chewmysambar) June 10, 2013
RIP carnatic vocalist Ranjani Hebbar - Such a young talent :((((((
— Kamesh Bavaratnam(@kameshratnam) June 10, 2013
Just knew about the passing away of Ms. Ranjani Hebbar, a very promising Carnatic vocalist. Shocking! Really shocking!
— Sai Sundhar (@saisundharp) June 9, 2013