ಚಿತ್ರಗಳಲ್ಲಿ: ಹಲವೆಡೆ ಭರ್ಜರಿ ಮಳೆ ತಂಪಾಯ್ತು ಇಳೆ
ಬೆಂಗಳೂರು, ಜೂ.4: ಭಾರತದಲ್ಲಿ ಮುಂಗಾರು ಮಳೆ ಪ್ರವೇಶಿಸಲು ಹಿಂದು ಮುಂದು ನೋಡುತ್ತಿರುವ ಹೊತ್ತಿನಲ್ಲೇ ವಿಶ್ವದ ಹಲವೆಡೆ ಮಳೆ, ಪ್ರವಾಹದ ಸುದ್ದಿ ಬಂದಿದೆ. ಜೈಪುರ, ಕಾಶ್ಮೀರದಲ್ಲಿ ಮಳೆ ಅಬ್ಬರ ಆರಂಭವಾಗಿದೆಯಂತೆ. ಕರ್ನಾಟಕದಲ್ಲಿ ಮಳೆ ಆರಂಭವಾದರೂ ಚುರುಕುಗೊಂಡಿಲ್ಲ.
ಉಳಿದಂತೆ ಐಪಿಎಲ್ ಸ್ಪಾಟ್ ಫಿಕ್ಸಿಂಗ್ ನ ಪ್ರಮುಖ ಬುಕ್ಕಿ ಕಿಶೋರ್ ಲಾಲ್ ಚಂದ್ ಬದ್ಲಾನಿಯನ್ನು ಕೋರ್ಟಿಗೆ ಹಾಜರುಪಡಿಸಲಾಗಿದೆ. ಜಲಂಧರ್ ನಲ್ಲಿ ರೈಲು ಅಪಘಾತ, ಚಿರತೆಗಳ ನಲಿದಾಟ, ರಾಂಚಿಯಲ್ಲಿ ಕೇಂದ್ರ ಸಚಿವ ಜೈರಾಮ್ ರಮೇಶ್ ವಿಭಿನ್ನ ಲುಕ್, ಪ್ಯಾರೀಸ್ ನಲ್ಲಿ ಆವೆ ಮಣ್ಣಿನ ಅಂಕಣದ ರಾಜ ರಫೆಲ್ ನಡಾಲ್ ಹುಟ್ಟುಹಬ್ಬ ಸಂಭ್ರಮ, ಪ್ಯಾರೀಸ್ ನಲ್ಲಿರುವ ಬ್ರಾಡ್ ಪಿಟ್ ದಂಪತಿ ಚಿತ್ರ ಎಲ್ಲವೂ ಇಂದಿನ ಪ್ಯಾಕೇಜ್ ನಲ್ಲಿದೆ
ಪ್ರವಾಹಕ್ಕೆ ತತ್ತರಿಸಿದ ಜಮನ್ನರು
ಪಸ್ಸವ್: ಪಸ್ಸವ್ ನಗರ ಸಂಪೂರ್ಣ ಜಲಾವೃತಗೊಂಡಿದೆ. ಸುಮಾರು ಮೂರು ನದಿಗಳ ನೀರು ನೈಋತ್ಯ ಭಾಗದ ಜರ್ಮನಿಯನ್ನು ಮುಳುಗಿಸಿದೆ.
ಗ್ರಿಮ್ಮದಿಂದ ಬಂದ ಒದ್ದೆ ಚಿತ್ರ
ಗ್ರಿಮ್ಮ: ಇಲ್ಲಿನ ನಾಗರೀಕರಿಗೆ ನೆರವಿನ ಹಸ್ತ ಚಾಚಿರುವ ಸರ್ಕಾರಿ ಸಿಬ್ಬಂದಿ. ಮಳೆಯಿಂದ ಪ್ರವಾಹ ಉಂಟಾಗಿದ್ದು, ಜರ್ಮನಿ, ಆಸ್ಟ್ರೀಯಾ, ಜೆಕ್ ರಿಪಬ್ಲಿಕ್ ನಲ್ಲಿ ಮಳೆಯದ್ದೇ ಸುದ್ದಿ.
ಮಳೆ ಮಾರುತಗಳ ಹಾವಳಿ
ಶ್ರೀನಗರ: ಬಲವಾದ ಮಾರುತಗಳನ್ನು ಕಾಣುತ್ತಿರುವ ಶ್ರೀನಗರದ ವಾಜಿರ್ ಬಾಗ್ ನಲ್ಲಿ ಸೋಮವಾರ ಮರವೊಂದು ಉರುಳಿ ಕಾರನ್ನು ಜಖಂಗೊಳಿಸಿದೆ. ಮಹಿಳೆಯೊಬ್ಬರು ದಿಟ್ಟಿಸಿ ಇದನ್ನು ನೋಡುತ್ತಿದ್ದಾರೆ. PTI Photo by S Irfan
ತಾಪಮಾನ ತಗ್ಗುತ್ತಿಲ್ಲ
ಜೈಪುರ: ಮಹಿಳೆಯೊಬ್ಬರು ಮುಂಗಾರು ಪ್ರವೇಶಕ್ಕೂ ಮುನ್ನ ಬೀಳುತ್ತಿರುವ ಮಳೆಯಲ್ಲಿ ರಸ್ತೆ ದಾಟುತ್ತಿದ್ದಾರೆ. ಮಳೆ ಬಿದ್ದರೂ ತಾಪಮಾನ ತಗ್ಗುತ್ತಿಲ್ಲ
ಮಳೆಗೆ ಜನತೆ ತತ್ತರ
ಜರ್ಮನಿ: ಪ್ರಾಗ್ ನಿಂದ ಸುಮಾರು 40 ಕಿ.ಮೀ ದೂರದಲ್ಲಿರುವ ವಲ್ತಾವ ನದಿ ಪ್ರವಾಹಕ್ಕೆ ಮುಳುಗಿರುವ ಲೂಜೆಕ್ ಹಾಗೂ ವಲ್ತಾವ್ ಗ್ರಾಮ, ಮೆಲ್ನಿಕ್,
ಕೇರಳದಲ್ಲಿ ಮೊದಲ ಮಳೆ
ಕೇರಳದಲ್ಲಿ ಮಕ್ಕಳಿಗೆ ಮಳೆ ಜೊತೆ ಆಟ ಪಾಠ. ಮುಂಗಾರಿನ ಮೊದಲ ಸ್ಪರ್ಶ ಕಂಡ ಮಕ್ಕಳು ನಲಿದಾಡುತ್ತಾ ಶಾಲೆಯತ್ತ ದಾಪುಗಾಲಿಟ್ಟಿದ್ದಾರೆ. ಚಿತ್ರಕೃಪೆ : @anishvijays
ಕೆರೆಗಳು ತುಂಬುತ್ತಿದೆ ನೋಡಿ
ಬೆಂಗಳೂರಿನಲ್ಲಿ ಆರಂಭಗೊಂಡಿರುವ ಮಳೆಯಿಂದ ತುಂಬುತ್ತಿರುವ ಸರ್ಜಾಪುರ ಕೆರೆ. ಚಿತ್ರಕೃಪೆ India Water Portal
ಪ್ರಣಯ ಜೋಡಿ
ಕ್ಯಾನ್ಸರ್ ಪೀಡಿತಳಾದ ಮೇಲೆ ಎರಡು ಸ್ತನಗಳನ್ನು ತೆಗೆಸಿಕೊಂಡು ಮೊದಲ ಬಾರಿಗೆ ಸಾರ್ವಜನಿಕ ಸಮಾರಂಭಗಳಲ್ಲಿ ಕಾಣಿಸಿಕೊಳ್ಳುತ್ತಿರುವುದಕ್ಕೆ ಹೆಮ್ಮೆ ಎನಿಸುತ್ತದೆ. ಖುಷಿಕೊಟ್ಟಿದೆ ಎಂದು ಏಂಜಲೀನಾ ಜೋಲಿ ಹೇಳಿದ್ದಾಳೆ. ನಟ ಗೆಳೆಯ ಬ್ರಾಡ್ ಪೀಟ್ ಜೊತೆ ಪ್ಯಾರೀಸ್ ನಲ್ಲಿ ಜೋಲಿ ಇದ್ದಾರೆ.
ನಡಾಲ್ ಹುಟ್ಟುಹಬ್ಬ
ಪ್ಯಾರೀಸ್ : ಫ್ರೆಂಚ್ ಓಪನ್ ವಿಜೇತ ಸ್ಪೇನಿನ ರಫೆಲ್ ನಡಾಲ್ ಅವರು ಹುಟ್ಟುಹಬ್ಬದ ಕೇಕ್ ಜೊತೆ ಕಾಣಿಸಿತ್ತು ಹೀಗೆ
ಹೊಸ ಲುಕ್ ನಲ್ಲಿ ಸಚಿವ ರಮೇಶ್
ರಾಂಚಿ: ಕೇಂದ್ರ ಗ್ರಾಮೀಣಾಭಿವೃದ್ಧಿ ಸಚಿವ ಜೈರಾಮ್ ರಮೇಶ್ (ಮಧ್ಯ) ಅವರು ಸ್ಥಳೀಯ ಮುಖಂಡರೊಡನೆ ಬೆರೆತು ನಕ್ಸಲರ ಭೀತಿ ಹೊಗಲಾಡಿಸಲು ಯತ್ನಿಸುತ್ತಿದ್ದಾರೆ. ನಕ್ಸಲ್ ಪೀಡಿತ ಜಾರ್ಖಂಡ್ ನ ಬೆರೊ ಪ್ರದೇಶಕ್ಕೆ ಸಚಿವ ರಮೇಶ್ ಭೇಟಿ ನೀಡಿದ್ದಾರೆ
ಚಿರತೆಗಳ ನಲಿದಾಟ
ಜೋಧಪುರ: ಇಲ್ಲಿನ ಪ್ರಾಣಿ ಸಂಗ್ರಹಾಲಯದಲ್ಲಿ ಚಿರತೆಗಳ ನಲಿದಾಟ
ವಸುಂಧರಾ ಭಾಷಣ
ನಾಗಪುರ: ಇಲ್ಲಿನ ಜಾಯಲ್ ಸಮೀಪದಲ್ಲಿ ನಡೆದಿರುವ ಸೂರಜ್ ಸಂಕಲ್ಪ್ ಯಾತ್ರದಲ್ಲಿ ರಾಜಸ್ಥಾನ ಬಿಜೆಪಿ ಅಧ್ಯಕ್ಷೆ ವಸುಂಧರಾ ರಾಜೇ ಸಿಂಧಿಯಾ ಭಾಷಣ
ಟ್ರ್ಯಾಕ್ಟರ್-ಟ್ರೈನ್ ಡಿಕ್ಕಿ
ಜಲಂಧರ್: ಮಾನವ ರಹಿತ ಕ್ರಾಸಿಂಗ್ ನಲ್ಲಿ ಟ್ರ್ಯಾಕ್ಟರ್ ಗೆ ರೈಲು ಬಡಿದಿದ್ದು ಹೀಗೆ
ಬುಕ್ಕಿ ಕಿಶೋರ್
ಮುಂಬೈ: ಪುಣೆ ಮೂಲದ ಕಿಶೋರ್ ಲಾಲ್ ಚಂದ್ ಬದ್ಲಾನಿ ಮುಂಬೈ ಕೋರ್ಟಿಗೆ ಹಾಜರುಪಡಿಸಲಾಯಿತು. PTI Photo by Shashank Parade
ನಡಾಲ್ ಹುಟ್ಟು ಹಬ್ಬ
ಪ್ಯಾರೀಸ್ ;ಫ್ರೆಂಚ್ ಓಪನ್ ವಿಜೇತ ಸ್ಪೇನಿನ ರಫೆಲ್ ನಡಾಲ್ ಅವರು ಹುಟ್ಟುಹಬ್ಬದ ಕೇಕ್ ಜೊತೆ ಕಾಣಿಸಿತ್ತು ಹೀಗೆ
ಒಲಿಂಪಿಯನ್ ಪಿಸ್ಟೋರಿಯಸ್
ಪ್ರಿಟೋರಿಯಾ: ಗೆಳತಿಯನ್ನು ಕೊಂದ ಆರೋಪ ಹೊತ್ತಿರುವ 'ಬ್ಲೇಡ್ ರನ್ನರ್' ಒಲಿಂಪಿಕ್ ಚಿನ್ನದ ಪದಕ ವಿಜೇತ ಆಸ್ಕರ್ ಪಿಸ್ಟೋರಿಯಸ್ ಅವರು ಮ್ಯಾಜಿಸ್ಟ್ರೇಟ್ ಕೋರ್ಟ್ ನಲ್ಲಿ ಮಂಗಳವಾರ(ಜೂ.4) ಹಾಜರಾಗಿದ್ದು ಹೀಗೆ.