ಕರ್ನಾಟಕದಿಂದ ರಾಹುಲ್ ಗಾಂಧಿ ಲೋಕಸಭೆಗೆ ಸ್ಪರ್ಧೆ
ಹಾಗಾಗಿಯೇ, ಕಾಂಗ್ರೆಸ್ ಯುವರಾಜ, ಎಐಸಿಸಿ ಉಪಾಧ್ಯಕ್ಷ ರಾಹುಲ್ ಗಾಂಧಿ ಅವರನ್ನು ಕರ್ನಾಟಕದಿಂದ ಲೋಕಸಭೆಗೆ ಆರಿಸಿ ಕಳಿಸಿದರೆ ಹೇಗೆ ಎಂದೂ ಮಂದಿ ಆಲೋಚಿಸತೊಡಗಿದ್ದಾರೆ.
ಈಗಾಗಲೇ ಸಾಂಪ್ರದಾಯಿಕ ಅಮೇಠಿಯಲ್ಲಿ ಸ್ಪರ್ಧಿಸಿ, ಗೆದ್ದಿರುವ ರಾಹುಲ್, ಅವರನ್ನು ಕರ್ನಾಟಕದ ಯಾವುದಾದರೂ ಕ್ಷೇತ್ರದಿಂದ ಆರಿಸಿ ಕಳಿಸುವ ಅದಮ್ಯ ಉತ್ಸಾಹ ರಾಜ್ಯ ಕಾಂಗ್ರೆಸ್ಸಿಗರಲ್ಲಿ ಸ್ಥಾಪಿತಗೊಂಡಿದೆ.
ಇತಿಹಾಸ ಏನು ಹೇಳುತ್ತದೆ?: ರಾಜ್ಯ ಕಾಂಗ್ರೆಸ್ಸಿಗರ ಈ ಆಸೆಗೆ ಇತಿಹಾಸವೂ ನೀರೆರೆಯುತ್ತಿದೆ. ಏನಪ್ಪಾ ಅಂದರೆ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಅವರು ಈ ಹಿಂದೆ ಬಳ್ಳಾರಿಯಿಂದ ಸ್ಪರ್ಧಿಸಿ, ಬಳ್ಳಾರಿ ಸೋದರರ ಆಗಿನ ಅಮ್ಮ, ಬಿಜೆಪಿಯ ಸುಷ್ಮಾ ಸ್ವರಾಜ್ ವಿರುದ್ಧ ಜಯದ ಕೇಕೆ ಹಾಕಿದ್ದರು.
ಅದಕ್ಕೂ ಮುನ್ನ, ಇತಿಹಾಸ ಪ್ರಸಿದ್ಧ ಚಿಕ್ಕಮಗಳೂರು ಕ್ಷೇತ್ರದಲ್ಲಿ ನಡೆದ ಉಪ ಚುನಾವಣೆಯಲ್ಲಿ ಇಂದಿರಾ ಗಾಂಧಿಯವರನ್ನು ಗೆಲ್ಲಿಸಿ, ಅವರಿಗೆ ರಾಜಕೀಯ ಮರುಹುಟ್ಟು ನೀಡಿತ್ತು. ಈಗಲೂ ರಾಹುಲ್ ಮತ್ತು ಕಾಂಗ್ರೆಸ್ ಪಕ್ಷಕ್ಕೆ ಮರತುಹುಟ್ಟು ಅತ್ಯಗತ್ಯವಾಗಿದೆ. So why not from Karnataka? ಎಂದು ಇನ್ನೂ ರಾಹುಲ್ ಗಾಂಧಿಗೆ ಕೇಳಿಸದಷ್ಟು ಪಿಸುಮಾತಿನಲ್ಲಿ ರಾಜ್ಯ ಕಾಂಗ್ರೆಸ್ಸಿಗರು ತಮ್ಮ ತಮ್ಮಲ್ಲೇ ಮಾತನಾಡಿಕೊಳ್ಳುತ್ತಿದ್ದಾರೆ.
ಉತ್ತರ ಪ್ರದೇಶದ ಅಮೇಠಿ ಮತ್ತು ರಾಯ್ ಬರೇಲಿ ಕ್ಷೇತ್ರಗಳ ಜತೆಗೆ ದಕ್ಷಿಣದ ದಾಕ್ಷಿಣ್ಯಕ್ಕೆ ಒಳಗಾಗುವ ಕಾಂಗ್ರೆಸ್ ಪರಿಪಾಠ ಮುಂದುವರಿಯುವುದೇ !?