ವಂದೇ ಮಾತರಂಗೆ ವಂದಿಸುವುದಿಲ್ಲ: ಸಂಸದ ರಹ್ಮಾನ್
ರಾಷ್ಟ್ರಗೀತೆಯನ್ನು ನಾನು ಗೌರವಿಸುತ್ತೇನೆ. ಅದರೆ, ವಂದೇಮಾತರಂ ರಾಷ್ಟ್ರಗೀತೆಯಲ್ಲ. ಅದು ಮಾತೃಭೂಮಿ ವಂದಿಸುವ ಹಾಡು. ಮುಸ್ಲಿಮನಾಗಿ ನಾನು ಅಲ್ಲಾನಿಗೆ ಮಾತ್ರ ತಲೆ ಬಾಗುತ್ತೇನೆ. ಅಲ್ಲಾನಿಗೆ ಮಾತ್ರ ವಂದಿಸುತ್ತೇನೆ ಎಂದು ರಹ್ಮಾನ್ ಹೇಳಿದ್ದಾರೆ.
ನಾನು ಮಾತೃ ಭೂಮಿಗಾಗಲಿ, ಬೇರೆ ದೇವರಿಗಾಗಲಿ ತಲೆ ಬಾಗುವ ಅವಶ್ಯಕತೆ ಇಲ್ಲ. ಈ ಹಿಂದೆ ಕೂಡಾ ವಂದೇಮಾತರಂ ನುಡಿಸಿದಾಗ ಸಭೆಯಿಂದ ಹೊರಕ್ಕೆ ನಡೆದಿದ್ದೆ. ನಾನು ಕ್ಷಮೆ ಯಾಚಿಸುವ ಪ್ರಶ್ನೆಯೇ ಇಲ್ಲ ಎಂದು ಬರ್ಖ್ ಹೇಳಿದ್ದಾರೆ.
ಆದರೆ, ಬರ್ಖ್ ನಡೆಯನ್ನು ಅನೇಕ ಮುಸ್ಲಿಂ ಸಂಸದರು ಖಂಡಿಸಿದ್ದಾರೆ. ಲೋಕಸಭೆ ಸ್ಪೀಕರ್ ಮೀರಾಕುಮಾರ್ ಅವರು ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ್ದಾರೆ. ಬರ್ಖ್ ಅವರಿಂದ ವಿವರಣೆ ಕೇಳಲಾಗಿದೆ. ಈ ಬಗ್ಗೆ ಅವರು ಸ್ಪಷ್ಟವಾಗಿ ವಿವರಿಸಬೇಕು ಎಂದು ಹೇಳಿದ್ದಾರೆ.
ಉತ್ತರಪ್ರದೇಶದ ಸಂಭಾಳ್ ನಿಂದ ಆಯ್ಕೆಯಾಗಿರುವ ಬಹುಜನಸಮಾಜವಾದಿ ಪಕ್ಷದ ಸಂಸತ್ ಸದಸ್ಯ ಬರ್ಖ್ ಅವರ ನಡೆಯನ್ನು ತೀವ್ರವಾಗಿ ಖಂಡಿಸಿರುವ ವಿಪಕ್ಷ ಬಿಜೆಪಿ, 'ಇದೊಂದು ತಾಲಿಬಾನಿ ನಡೆಯಾಗಿದೆ ಎಂದಿದೆ. ಇಂಥ ವ್ಯಕ್ತಿಗಳು ಜನಪ್ರತಿನಿಧಿಯಾಗಲು ಸೂಕ್ತರಲ್ಲ. ಸರ್ವಧರ್ಮೀಯ ಶಾಂತಿಯ ತೋಟದಲ್ಲಿ ವಿಷ ಬೀಜ ಬಿತ್ತುವ ವ್ಯಕ್ತಿಗಳು ಇವರು' ಎಂದು ಟೀಕಿಸಿದೆ.
ಸಂಸತ್ತಿನಲ್ಲಿ ರಾಷ್ತ್ರಗೀತೆ ಜನಗಣ ಮನ ಹಾಗೂ ವಂದೇ ಮಾತರಂ ಹಾಡುವುದು ಹಿಂದಿನಿಂದ ನಡೆದುಕೊಂಡು ಬಂದ ಪದ್ಧತಿ. ಸ್ವಾತಂತ್ರ್ಯ ಬಂದ ಕಾಲದಿಂದಲೂ ಇದು ಜಾರಿಯಲ್ಲಿದೆ ಆದರೆ, ಬಿಎಸ್ ಪಿ ಸಂಸದನ ನಡೆ ಖಂಡನೀಯ, ಸಂವಿಧಾನಕ್ಕೆ ಅಪಮಾನ ಎಸಗಿದ್ದಾರೆ ಎಂದು ಬಿಜೆಪಿ ವಕ್ತಾರ ಮುಖ್ತಾರ್ ಅಬ್ಬಾಸ್ ನಖ್ವಿ ಹೇಳಿದ್ದಾರೆ.
ವಂದೇಮಾತರಂ ಗೆ ತಲೆಬಾಗದ ಸಂಸದ ಬರ್ಖ್ ಬಗ್ಗೆ ಸಾಮಾಜಿಕ ಜಾಲ ತಾಣ ಟ್ವಿಟ್ಟರ್ ನಲ್ಲೂ ಭಾರಿ ಚರ್ಚೆ ನಡೆದಿದೆ. ಅಲ್ಲಿ ನಡೆದಿರುವ ಚರ್ಚೆ ಕೆಲವು ಟ್ವೀಟ್ಸ್ ಇಲ್ಲಿದೆ..
@uzma_indianbuzz country is above all religion especially when it comes to a secular,democratic,free republic........... Vande Mataram
— ramendra kumar (@ramendraramu) May 10, 2013
Forget apologies from secular BSP MP on Vande Mataram fiasco rather he is feeling proud of insulting India. India is full of #Owaisi #Barq
— not nikhil wagle (@waglenikhiI) May 10, 2013
Vande Mataram: You have choice of not singing it but don't have choice of disrespecting it.
— Rajeshwar (@TheRaje14) May 10, 2013
Logically, Muslim Organization sh condemn BSP MP for communalizing Vande Mataram. The so called Secular Parties sh speak against it. BUT?
— Dr. Manish Kumar (@DrManishKumar1) May 10, 2013
Millions of Indian Muslims don't have a problem with Vande Mataram. Let the rest be. Bankim didn't write the beautiful song for small-minded
— Abhijit Majumder (@abhijitmajumder) May 9, 2013