ಕೋಟೆಗಳ ನಾಡಿನಲ್ಲಿ ಕಾಂಗ್ರೆಸ್ ರಾಜ್ಯಭಾರ
ಬಳ್ಳಾರಿಯ ಬಿಎಸ್ಆರ್ ಪಕ್ಷದ ಫ್ಯಾನ್ ಗಾಳಿ ಮೊಳಕಾಲ್ಮೂರು ತಾಲೂಕಿನವರೆಗೂ ಬೀಸಿದ್ದು, ಬಿಎಸ್ಆರ್ ಪಕ್ಷದ ಎಸ್.ತಿಪ್ಪೇಸ್ವಾಮಿ ಗೆಲುವು ಸಾಧಿಸಿದ್ದಾರೆ. ಹಿರಿಯೂರು ಕ್ಷೇತ್ರದ ಜೆಡಿಎಸ್ ಅಭ್ಯರ್ಥಿ ಎ.ಕೃಷ್ಣಪ್ಪ, ಡಿ.ಸುಧಾಕರ್ ಅವರ ವಿರುದ್ಧ 1205 ಮತಗಳ ಅಂತರದಿಂದ ಸೋಲು ಅನುಭವಿಸಿದ್ದಾರೆ.
ಹೊಸದುರ್ಗ ಕ್ಷೇತ್ರದಲ್ಲಿ ಗೂಳಿಯನ್ನು ಕಟ್ಟಿಹಾಕುವಲ್ಲಿ ಕಾಂಗ್ರಸ್ ಯಶಸ್ವಿಯಾಗಿದ್ದು, ಪಕ್ಷೇತರ ಅಭ್ಯರ್ಥಿ ಗೂಳಿಹಟ್ಟಿ ಶೇಖರ್ ಅವರಿಗೆ ಕಾಂಗ್ರೆಸ್ ನ ಬಿ.ಜಿ.ಗೋವಿಂದಪ್ಪ ಸೋಲಿನ ರುಚಿ ತೋರಿಸಿದ್ದಾರೆ.
ಹಿರಿಯೂರು ಕ್ಷೇತ್ರದಿಂದ ಕಳೆದ ಬಾರಿ ಪಕ್ಷೇತರರಾಗಿ ಆರಿಸಿಬಂದಿದ್ದ ಡಿ.ಸುಧಾಕರ್ ಅವರನ್ನು ಕಾಂಗ್ರೆಸ್ ಪಕ್ಷಕ್ಕೆ ಸೆಳೆದುಕೊಂಡು ಟಿಕೆಟ್ ನೀಡಿತ್ತು. ಪಕ್ಷದ ನಿರೀಕ್ಷೆ ಹುಸಿಗೊಳಿಸಿದೇ ಸುಧಾಕರ್ ಮತ್ತೊಮ್ಮೆ ಆರಿಸಿಬಂದಿದ್ದಾರೆ.
ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ರಚನೆ ಆಗುವುದರಿಂದ ಜಿಲ್ಲೆಗೆ ಒಂದು ಸಚಿವ ಸ್ಥಾನ ದೊರೆಯುವ ಸಾಧ್ಯತೆ ಇದೆ. ಎರಡು ಕ್ಷೇತ್ರಗಳಲ್ಲಿ ಕೆಜೆಪಿ ಎರಡನೇ ಸ್ಥಾನ ಪಡೆದಿದ್ದು ಜಿಲ್ಲೆಯಲ್ಲಿ ತನ್ನ ಪ್ರಭಾವವನ್ನು ತೋರಿಸಿದೆ.
ಚಿತ್ರದುರ್ಗ ಜಿಲ್ಲೆ ವಿಧಾನಸಭಾ ಕ್ಷೇತ್ರಗಳಲ್ಲಿ : ಗೆದ್ದವರು, ಸೋತವರ ವಿವರ ಹೀಗಿದೆ:
ಕ್ಷೇತ್ರ | ಗೆದ್ದವರು | ಪಕ್ಷ | ಪಡೆದ ಮತಗಳು | ಸೋತವರು | ಪಕ್ಷ | ಪಡೆದ ಮತಗಳು |
ಮೊಳಕಾಲ್ಮೂರು |
ಎಸ್.ತಿಪ್ಪೇಸ್ವಾಮಿ |
ಬಿಎಸ್ಆರ್
ಕಾಂಗ್ರೆಸ್ | 76,827 |
ಎನ್.ವೈ.ಗೋಪಾಲಕೃಷ್ಣ |
ಕಾಂಗ್ರೆಸ್ | 69,658 |
ಚಳ್ಳಕೆರೆ |
ಟಿ.ರಘುಮೂರ್ತಿ |
ಕಾಂಗ್ರೆಸ್ | 60,197 |
ಕೆ.ಟಿ.ಕುಮಾರಸ್ವಾಮಿ |
ಕೆಜೆಪಿ | 37,074 |
ಚಿತ್ರದುರ್ಗ |
ಜಿ.ಎಚ್.ತಿಪ್ಪಾರೆಡ್ಡ |
ಬಿಜೆಪಿ | 62,228 |
ಬಸವರಾಜನ್ |
ಜೆಡಿಎಸ್ | 35,510 |
ಹಿರಿಯೂರು |
ಡಿ.ಸುಧಾಕರ್ |
ಕಾಂಗ್ರೆಸ್ | 71,661 |
ಎ.ಕೃಷ್ಣಪ್ಪ |
ಜೆಡಿಎಸ್ | 70,661 |
ಹೊಸದುರ್ಗ |
ಬಿ.ಜಿ.ಗೋಂವಿದಪ್ಪ |
ಕಾಂಗ್ರೆಸ್ | 58, 010 |
ಗೂಳಿಹಟ್ಟಿ
ಶೇಖರ್ |
ಪಕ್ಷೇತರ | 37,993 |
ಹೊಳಲ್ಕೆರೆ | ಎಚ್.ಆಂಜನೇಯ | ಕಾಂಗ್ರೆಸ್ | 76,856 | ಎಂ.ಚಂದ್ರಪ್ಪ | ಕೆಜೆಪಿ | 63,992 |