ಗದಗ ಮುದುಡಿದ ಕಮಲ, ಜಿಲ್ಲೆ ಕೈವಶ
2008ರ ಚುನಾವಣೆಯಲ್ಲಿ ಗದಗ ಜಿಲ್ಲೆಯಲ್ಲಿ ಕಮಲ ಅರಳಿತ್ತು. ನಾಲ್ಕು ಸ್ಥಾನಗಳನ್ನು ಪಡೆದ ಬಿಜೆಪಿ ಕೈ ಪಾಳಯಕ್ಕೆ ಒಂದು ಸ್ಥಾನ ನೀಡದೆ ನಿರಾಸೆ ಉಂಟು ಮಾಡಿತ್ತು. ಸೇಡಿಗೆ ಸೇಡು ಎಂಬಂತೆ ಈ ಚುನಾವಣೆಯಲ್ಲಿ ಕಾಂಗ್ರೆಸ್ ಬಿಜೆಪಿಗೆ ತಕ್ಕಪಾಠ ಕಲಿಸಿದೆ.
ಗನ್ ಮ್ಯಾನ್ ನಿಂದ ಆಕಸ್ಮಿಕವಾಗಿ ಗುಂಡೇಟು ತಿಂದು ಆಸ್ಪತ್ರೆ ಸೇರಿದ್ದ ನರಗುಂದ ಕ್ಷೇತ್ರದ ಮಾಜಿ ಶಾಸಕ ಸಿ.ಸಿ.ಪಾಟೀಲ್ ಅವರಿಗೂ ಅನುಕಂಪದ ಮತಗಳು ಕೈ ಹಿಡಿಯದೆ ಸೋಲು ಅನುಭವಿಸುವಂತಾಗಿದೆ. ಶಿರಹಟ್ಟಿ, ಗದಗ, ರೋಣ ಕ್ಷೇತ್ರಗಳಲ್ಲೂ ಕಾಂಗ್ರೆಸ್ ಜಯಗಳಿಸಿದ್ದು, ಬಿಜೆಪಿ ಒಂದು ಸ್ಥಾನ ಪಡೆಯುವಲ್ಲಿಯೂ ವಿಫಲವಾಗಿದೆ.
ಗದಗ ಪಕ್ಕದಲ್ಲಿರುವ ಧಾರವಾಡ ಜಿಲ್ಲೆಯ ಜಗದೀಶ್ ಶೆಟ್ಟರ್ ಅವರ ಪ್ರಭಾವ ಗದಗದ ಮೇಲೆ ಯಾವುದೇ ಪರಿಣಾಮ ಬೀರಿಲ್ಲ. ಹಿರಿಯ ಕಾಂಗ್ರೆಸ್ ಮುಖಂಡ ಎಚ್.ಕೆ.ಪಾಟೀಲ್ ಅವರ ನೇತೃತ್ವದಲ್ಲಿ ಚುಣಾವಣೆ ಗೆಲ್ಲಲು ಕಾಂಗ್ರೆಸ್ ಅಭ್ಯರ್ಥಿಗಳು ಸರಿಯಾದ ಕಾರ್ಯತಂತ್ರ ರೂಪಿಸಿದ್ದರು. ಶ್ರಮಕ್ಕೆ ಪ್ರತಿಫಲ ಎಂಬಂತೆ ಜಿಲ್ಲೆ ಕೈವಶವಾಗಿದೆ.
ಗದಗ ಜಿಲ್ಲೆ ವಿಧಾನಸಭಾ ಕ್ಷೇತ್ರಗಳಲ್ಲಿ : ಗೆದ್ದವರು, ಸೋತವರ ವಿವರ ಹೀಗಿದೆ:
ಕ್ಷೇತ್ರ | ಗೆದ್ದವರು | ಪಕ್ಷ | ಪಡೆದ ಮತಗಳು | ಸೋತವರು | ಪಕ್ಷ | ಪಡೆದ ಮತಗಳು |
ಶಿರಹಟ್ಟಿ |
ರಾಮಕೃಷ್ಣ
ದೊಡ್ಡಮನಿ | ಕಾಂಗ್ರೆಸ್ |
44,738 |
ರಾಮಣ್ಣ
ಲಮಾಣಿ |
ಬಿಜೆಪಿ | 44,423 |
ಗದಗ | ಎಚ್.ಕೆ.ಪಾಟೀಲ್ | ಕಾಂಗ್ರೆಸ್ |
70,475 |
ಅನಿಲ
ಮೆಣಸಿನಕಾಯಿ | ಬಿಎಸ್ಆರ್ | 36,748 |
ರೋಣ | ಜಿ.ಎಸ್.ಪಾಟೀಲ್ | ಕಾಂಗ್ರೆಸ್ |
74,219 | ಕಳಕಪ್ಪ ಬಂಡಿ | ಬಿಜೆಪಿ | 56,054 |
ನರಗುಂದ |
ಬಿ.ಆರ್.ಯಾವಗಲ್ | ಕಾಂಗ್ರೆಸ್ |
59,470 |
ಸಿ.ಸಿ.ಪಾಟೀಲ್ | ಬಿಜೆಪಿ | 50,938 |