ನೀಚ ಧನಂಜಯನ ಬಗ್ಗೆ ಮಾತಾಡೋಲ್ಲ: ಈಶ್ವರಪ್ಪ
ಹೀಗೇ ಹೇಳುತ್ತಲೇ ಈಶ್ವರಪ್ಪನವರು 'ಧನಂಜಯ ಕುಮಾರ್ ಒಬ್ಬ ಹಿರಿಯ ರಾಜಕಾರಣಿ. ಅವರಿಗೆ ಮತ್ತೊಬ್ಬರ ಬಗ್ಗೆ ತಲೆಬುಡ ಇಲ್ಲದೆ ಬೊಗಳುವುದು ಬಿಟ್ಟರೆ ಇನ್ನೇನು ಗೊತ್ತಿಲ್ಲ' ಎಂದು ಛೇಡಿಸಿದ್ದಾರೆ.
ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪನವರು ಬಿಜೆಪಿಗೆ ಬಂದರೆ ಸ್ವಾಗತಿಸುವಿರೇ ಎಂದು ಪತ್ರಕರ್ತರು ಕೇಳಿದಾಗ ನಮ್ಮದು ರಾಷ್ಟ್ರೀಯ ಪಕ್ಷ. ನಾನು ಕಾರ್ಯಕರ್ತನಷ್ಟೆ. ಯಾರಿಂದಲೂ ಪಕ್ಷಕ್ಕೆ ನಷ್ಟವಿಲ್ಲ. ನಮ್ಮದು ವ್ಯಕ್ತಿಗತ ಪಕ್ಷವಲ್ಲ. ಎಲ್ಲರಿಗೂ ಇಲ್ಲಿ ಮನ್ನಣೆಯಿದೆ. ಏನೇ ನಿರ್ಧಾರ ಕೈಗೊಂಡರೂ ರಾಷ್ಟ್ರೀಯ ನಾಯಕರು ಕೈಗೊಳ್ಳುತ್ತಾರೆ ಎಂದು ಅವರು ಜಾರಿಕೊಂಡರು.
ಸಿಂಧನೂರು ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಕೊಲ್ಲಾ ಶೇಷಗಿರಿ ರಾವ್ ಅವರ ಪರ ಚುನಾವಣಾ ಪ್ರಚಾರಕ್ಕಾಗಿ ಇಲ್ಲಿನ ಜವಳಗೇರಾ ಗ್ರಾಮದವರೆಗೂ ರೋಡ್ ಷೋ ನಡೆಸಿದ ಸಂದರ್ಭದಲ್ಲಿ ಈಶ್ವರಪ್ಪ ಸುದ್ದಿಗಾರರೊಂದಿಗೆ ಮಾತನಾಡಿದರು.
ಕಾಂಗ್ರೆಸ್ ದೇಶವನ್ನು ಲೂಟಿ ಹೊಡೆಯುವ ಪಕ್ಷವಾಗಿದ್ದು ಇಂತಹ ಪಕ್ಷಗಳನ್ನು ಧಿಕ್ಕರಿಸುವ ಮೂಲಕ ಸುಭದ್ರ ಸರಕಾರ ನೀಡಿದ ಬಿಜೆಪಿಗೆ ಬೆಂಬಲಿಸಬೇಕೆಂದು ಕಾರ್ಯಕ್ರಮದಲ್ಲಿ ಅವರು ಮನವಿ ಮಾಡಿದರು.