ಪ್ರಿಯಕರನಿಗಾಗಿ ಹೆತ್ತ ಮಗು ಬಲಿ ಕೊಟ್ಟ ತಾಯಿ
ರಮೇಶ್ ಕಾಶಿನಾಥ್(8) ಎಂಬ ಬಾಲಕನನ್ನು ತಾಯಿಯ ಕಣ್ಮುಂದೆಯೇ ಆಕೆ ಪ್ರಿಯಕರ ಕಲ್ಲಿನಿಂದ ಜಜ್ಜಿ ಕೊಲೆ ಮಾಡಿದ್ದಾನೆ. ನಂತರ ತಾಯಿ ತನ್ನ ಮಗುವಿನ ಮೃತದೇಹವನ್ನು ರಾತ್ರೋರಾತ್ರಿ ಹೂತು ಹಾಕಿ ಪ್ರಕರಣ ಮುಚ್ಚಿ ಹಾಕಲು ಯತ್ನಿಸಿದ್ದಾಳೆ. ಈ ಘಟನೆ ಬಗ್ಗೆ ನಿನ್ನೆ ವಿವರ ತಿಳಿದ ರಾಜಾನುಕುಂಟೆ ಅದ್ದೆ ವಿಶ್ವನಾಥಪುರ ಗ್ರಾಮಸ್ಥರು ಬೆಚ್ಚು ಬಿದ್ದಿದ್ದಾರೆ.
ಪುತ್ರನನ್ನೇ ಹತ್ಯೆ ಮಾಡಿದ ಅಂಬಿಕಾ ಕಾಶಿನಾಥ್ಳನ್ನು ಪೊಲೀಸರು ಬಂಧಿಸಿದ್ದಾರೆ. ಆಕೆ ಪ್ರಿಯಕರ ಸರವಣ ನಾಪತ್ತೆಯಾಗಿದ್ದಾನೆ. ಅಂಬಿಕಾಳ ಪತಿ ಕಾಶಿನಾಥ್ 2 ವರ್ಷದ ಹಿಂದೆ ಮೃತಪಟ್ಟಿದ್ದರು. ಅವರ ಸಾವಿನ ನಂತರ ಅಂಬಿಕಾ ಹಾಗೂ ಸರವಣ ನಡುವೆ ಸ್ನೇಹ, ಪ್ರೇಮ ಹುಟ್ಟಿಕೊಂಡಿತ್ತು. ಸರವಣ ಬಹುತೇಕ ಅಂಬಿಕಾ ಮನೆಯಲ್ಲೇ ಇರುತ್ತಿದ್ದ. ಈ ಮಧ್ಯೆ ಅಪರಿಚಿತನ ಬಗ್ಗೆ ಪುತ್ರ ರಮೇಶ್ ಸಂಶಯ ಬಂದು ಪ್ರಶ್ನಿಸಿದ್ದಾನೆ. ಅಕ್ರಮ ಸಂಬಂಧದ ಬಗ್ಗೆ ತಾಯಿಯ ಬಳಿ ಪದೇ ಪದೇ ಪ್ರಶ್ನಿಸುತ್ತಿದ್ದ.
ಬಾಲಕ ರಮೇಶ್ ಮತ್ತೆ ಸರವಣನ ಮುಂದೆ ತಾಯಿ ಅಂಬಿಕಾ ಬಳಿ ಪ್ರಶ್ನೆ ಕೇಳಿದ. ಇದರಿಂದ ಕೆರಳಿದ ಸರವಣ ಬಾಲಕನನನ್ನು ಚೆನ್ನಾಗಿ ಥಳಿಸಿದ. ಇದರಿಂದ ಬಾಲಕ ರಮೇಶ್ ಪ್ರಜ್ಞೆ ಕಳೆದುಕೊಂಡ. ಬಳಿಕ ಇಬ್ಬರೂ ಸೇರಿ ಬಾಲಕನ್ನು ನೇಣಿಗೆ ಹಾಕಿ ಕೊಲೆ ಮಾಡಿದ್ದಾರೆ ಎನ್ನಲಾಗಿದೆ. ಆದರೆ, ಬಾಲಕನ ತಲೆ ಚೆಚ್ಚಿ ಹಾಕಲಾಗಿದೆ. ಶವ ಸಾಗಿಸುವಾಗ ಸಿಕ್ಕಿಬಿದ್ದಿದ್ದಾರೆ ಎನ್ನಲಾಗಿದೆ.
ಗುಲ್ಬರ್ಗಾದ ಚಂದನಕೆರೆ ಮೂಲದ ಅಂಬಿಕಾ ಅವರು ತನ್ನೂರಿನ ಕಾಶಿನಾಥ್ ಎಂಬಾತನನ್ನು ಮದೆಯಾಗಿದ್ದಳು. ಕಾಶಿನಾಥ್ ಮದ್ಯ ವ್ಯಸನಿಯಾಗಿದ್ದ ಕಾರಣ ಆತನನ್ನು ತೊರೆದು ಆನಂದ್ ಅಲಿಯಾಸ್ ಶರಣಪ್ಪ ಜೊತೆ ಸಾಂಗತ್ಯ ಬೆಳೆಸಿಕೊಂಡಿದ್ದಳು. ಗಂಡನನ್ನು ತೊರೆದು ಮಕ್ಕಳಾದ 8 ವರ್ಷದ ರಮೇಶ್ ಹಾಗೂ 6 ವರ್ಷದ ಲಕ್ಷ್ಮಿ ಇಬ್ಬರು ಮಕ್ಕಳೊಂದಿಗೆ ಬೆಂಗಳೂರು ಸೇರಿದ ಅಂಬಿಕಾ ತನ್ನ ಚಾಳಿ ಮುಂದುವರೆಸಿದ್ದಳು.
ಯಲಹಂಕ ಸಮೀಪದ ಕಟ್ಟಡವೊಂದರಲ್ಲಿ ತಾತ್ಕಾಲಿಕ ಶೆಡ್ ನಲ್ಲಿ ವಾಸವಿದ್ದ ಅಂಬಿಕಾ ಜೊತೆ ಆನಂದ್ ಪರಿಚಯ ಇನ್ನಷ್ಟು ಗಟ್ಟಿಯಾಯಿತು. ನಂತರ ಆನಂದ್ ಮೇಲೆ ಬಾಲಕ ರಮೇಶ್ ಗೆ ಅನುಮಾನ ಶುರುವಾಯಿತು ಕೊನೆಗೆ ಅನುಮಾನ ಆತನ ಪ್ರಾಣಕ್ಕೆ ಎರವಾಯಿತು.