ಇಂದು ಕಾಂಗ್ರೆಸ್ 2ನೇ ಪಟ್ಟಿ, ಮತ್ತೆ ಕಾದಿದೆ ಬಂಡಾಯ
ಗುರುವಾರ ಸಂಜೆ ಬೆಂಗಳೂರಿನ ಕೆಪಿಸಿಸಿ ಕಚೇರಿಯಲ್ಲಿ ಮಾತನಾಡಿದ ಕೆಪಿಸಿಸಿ ಅಧ್ಯಕ್ಷ ಡಾ.ಜಿ.ಪರಮೇಶ್ವರ್, ಅಭ್ಯರ್ಥಿಗಳ ಪಟ್ಟಿ ಅಂತಿಮಗೊಂಡಿದೆ. ಶುಕ್ರವಾರ ಕೇಂದ್ರ ಚುನಾವಣಾ ಸಮಿತಿ ಸಭೆ ನಡೆಯಲಿದ್ದು, ನಂತರ 37 ಅಭ್ಯರ್ಥಿಗಳ ಎರಡನೇ ಪಟ್ಟಿ ಬಿಡುಗಡೆ ಮಾಡಲಾಗುವುದು ಎಂದು ತಿಳಿಸಿದರು.
10ಕ್ಷೇತ್ರಗಳ
ಅಭ್ಯರ್ಥಿಗಳನ್ನು
ಉಳಿದ
ಪಕ್ಷಗಳ
ಪಟ್ಟಿ
ಬಿಡುಗಡೆ
ನಂತರ
ಘೋಷಿಸಲಾಗುವುದು
ಎಂದು
ಅವರು
ಹೇಳಿದರು.
ಅಭ್ಯರ್ಥಿಗಳ
ಹೆಸರುಗಳನ್ನು
ಸ್ಕ್ರೀನಿಂಗ್
ಕಮಿಟಿ
ಅಂತಿಮಗೊಳಿಸಿದೆ.
ಕಾಂಗ್ರೆಸ್
ಅಧ್ಯಕ್ಷೆ
ಸೋನಿಯಾ
ಗಾಂಧಿ
ಅವರ
ಅಂತಿಮ
ಒಪ್ಪಿಗೆ
ಮಾತ್ರ
ಬಾಕಿ
ಇದ್ದು,
ಶುಕ್ರವಾರ
ಸಂಜೆ
ಪಟ್ಟಿ
ಬಿಡುಗಡೆ
ಮಾಡುವುದಾಗಿ
ತಿಳಿಸಿದರು.
ಶಿಸ್ತು ಸಮಿತಿ : ಟಿಕೆಟ್ ಆಕಾಂಕ್ಷಿಗಳನ್ನು ನಿಯಂತ್ರಿಸಲು ವಿಫಲವಾಗಿರುವ ಕಾಂಗ್ರೆಸ್ ಈಗ ಪತ್ರಭಟನೆಗಳನ್ನು ಹತ್ತಿಕ್ಕಲು ಶಿಸ್ತು ಸಮಿತಿ ರಚಿಸಿದೆ. 48 ಸದಸ್ಯರ ಸಮಿತಿಯಲ್ಲಿ ರಾಜ್ಯ ಮತ್ತು ಕೇಂದ್ರ ನಾಯಕರು ಸಮಿತಿಯ ಸದಸ್ಯರಾಗಿದ್ದಾರೆ.
ಹೆಚ್ಚಿನ ಪೈಪೋಟಿ ಏರ್ಪಟ್ಟಿರುವ ಕ್ಷೇತ್ರಗಳಿಗೆ ಈ ಸದಸ್ಯರು ಭೇಟಿ ನೀಡಿ, ಟಿಕೆಟ್ ವಂಚಿತ ಅಭ್ಯರ್ಥಿಗಳ ಮನವೊಲಿಸಲಿದ್ದಾರೆ. ಸಮಿತಿಯ ಆದೇಶವನ್ನು ಪಾಲಿಸದೇ ಪ್ರತಿಭಟನೆ ನಡೆಸುವುದು, ಬಂಡಾಯ ಅಭ್ಯರ್ಥಿಯಾಗಿ ಚುನಾವಣೆಗೆ ಸ್ಪರ್ಧಿಸಿದರೆ, ಅವರನ್ನು ಪಕ್ಷದಿಂದ 6 ವರ್ಷಗಳ ಕಾಲ ಪಕ್ಷದಿಂದ ಅಮಾನತುಗೊಳಸಿಲು ತೀರ್ಮಾನ ಕೈಗೊಳ್ಳಲಾಗಿದೆ.
ಹಾರಾಡಲಿವೆ 4 ಹೆಲಿಕಾಪ್ಟರ್ : ಪಕ್ಷದ ಪ್ರಚಾರಕ್ಕಾಗಿ 4 ಹೆಲಿಕಾಪ್ಟರ್ ಗಳನ್ನು ಬಳಸಿಕೊಳ್ಳಲು ಪಕ್ಷ ಅಧಿಕೃತವಾಗಿ ತೀರ್ಮಾನ ಕೈಗೊಂಡಿದೆ. ಪರಮೇಶ್ವರ್, ಸಿದ್ದರಾಮಯ್ಯ, ಎಸ್.ಎಂ.ಕೃಷ್ಣ, ವೀರಪ್ಪ ಮೊಯ್ಲಿ, ಕೆ.ಎಚ್.ಮುನಿಯಪ್ಪ, ರೆಹಮಾನ್ ಖಾನ್ ಮುಂತಾದವರು 2 ಹೆಲಿಕಾಪ್ಟರ್ ಬಳಸಲಿದ್ದಾರೆ.
ಉಳಿದಂತೆ ಪಕ್ಷದ ನಾಯಕರಾದ ಶಾಮನೂರು ಶಿವಶಂಕರಪ್ಪ, ಅನಿಲ್ ಲಾಡ್, ಸತೀಶ್ ಜಾರಕಿಹೊಳಿ, ಸಂತೋಷ್ ಲಾಡ್ ಅವರು ತಮ್ಮ ಸ್ವಂತ ಹೆಲಿಕಾಪ್ಟರ್ ಮೂಲಕ ಪ್ರಚಾರ ಕಾರ್ಯ ನಡೆಸಲಿದ್ದಾರೆ. ಬೆಂಗಳೂರು ಮತ್ತು ಸುತ್ತಮುತ್ತಲಿನ ಜಿಲ್ಲೆಗಳಲ್ಲಿ ಪ್ರಚಾರ ನಡೆಸಲು 35 ಸೀಟ್ ನ 2 ವೋಲ್ವೊ ಬಸ್ ಮತ್ತು 1 ತೆರೆದ ವಾಹನ ಸಜ್ಜುಗೊಳಿಸಲಾಗಿದೆ.
ಯುವ ಪಡೆ ರೆಡಿ : ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ಅಧ್ಯಕ್ಷತೆಯಲ್ಲಿ ಯುವ ಪಡೆ ರಾಜ್ಯದಲ್ಲಿ ಪ್ರಚಾರ ನಡೆಸಲಿದೆ. ಕೇಂದ್ರ ಸಚಿವ ಸಚಿನ್ ಪೈಲೆಟ್, ಜ್ಯೋತಿರಾದಿತ್ಯ ಸಿಂಧಿಯಾ, ಜಿತೇಂದ್ರ ಸಿಂಗ್, ಮುನೀಶ್ ತಿವಾರಿ ಯುವ ಪಡೆಯ ಸದಸ್ಯರಾಗಿದ್ದಾರೆ.
ನೀವೇ ಆಗಿರಿ ಕರ್ನಾಟಕದ ಗುರು | ಮತ ಹಾಕ್ತೀನಂತ ಪ್ರಮಾಣ ಮಾಡಿ