ಬಿಎಸ್ವೈ, ಎಚ್ಡಿಕೆ, ಎಸ್ಸೆಂಕೆ, ಡಿಕೆಶಿ ವಿರುದ್ಧ ಆಂದೋಲನ
ನಾಲ್ಕಾರು ಭ್ರಷ್ಟ ರಾಜಕಾರಣಿಗಳನ್ನು ಪಟ್ಟಿ ಮಾಡಿರುವ ಎಸ್ಆರ್ ಹಿರೇಮಠ್ ಅವರು ಆ ನಾಯಕರ ವಿರುದ್ಧ 'ಮತ ಜಾಗೃತಿ' ನಡೆಸಲು ಮುಂದಾಗಿದ್ದಾರೆ. ರಾಜ್ಯದ ಸಂಪತ್ತನ್ನು ಲೂಟಿ ಹೊಡೆದ ಆರೋಪ ಎದುರಿಸುತ್ತಿರುವ ಮಾಜಿ ಮುಖ್ಯಮಂತ್ರಿಗಳಾದ ಎಸ್ಎಂ ಕೃಷ್ಣ, ಬಿಎಸ್ ಯಡಿಯೂರಪ್ಪ, ಎಚ್ಡಿ ಕುಮಾರಸ್ವಾಮಿ,
ಮಾಜಿ ಸಚಿವ ಡಿಕೆ ಶಿವಕುಮಾರ್, ಸಚಿವ ವಿ ಸೋಮಣ್ಣ, ಶಾಸಕ ಜಿ ಸೋಮಶೇಖರ ರೆಡ್ಡಿ ಅವರು ಸ್ಪರ್ಧೆಗಿಳಿಯುವ ಕ್ಷೇತ್ರಗಳಲ್ಲಿ ಅವರು ಮತ ಜಾಗೃತಿ ಮೂಡಿಸುವ ಹೊಣೆಹೊತ್ತಿದ್ದಾರೆ.
'ಈ ಭ್ರಷ್ಟ ರಾಜಕಾರಣಿಗಳನ್ನು ಸಾರ್ವಜನಿಕ ಜೀವನದಿಂದ ಹೊರಗಿಡಲು ಹಾಲಿ ಚುನಾವಣೆ ಮೂಲಕ ಸದವಕಾಶ ಒದಗಿಬಂದಿದೆ. ಹಾಗಾಗಿ ಮತದಾರರಲ್ಲಿ ಈ ಬಗ್ಗೆ ಜಾಗೃತಿ ಮೂಡಿಸಲಾಗುವುದು' ಎಂದು ಹಿರೇಮಠರು ಸುದ್ದಿಗೋಷ್ಠಿ ಮೂಲಕ ಮತದಾರರಲ್ಲಿ ಕಳಕಳಿಯ ಮನವಿ ಮಾಡಿಕೊಂಡಿದ್ದಾರೆ.
ಈ
ಸಂಬಂಧ
ಏಪ್ರಿಲ್
13ರಂದು
ಧಾರವಾಡದಲ್ಲಿ
ಜನ
ಸಂಗ್ರಾಮ
ಪರಿಷತ್ತಿನ
ಸಭೆ
ನಡೆಯಲಿದ್ದು,
ಈ
ಸಭೆಯಲ್ಲಿ
'ಭ್ರಷ್ಟರೇ
ಸಾರ್ವಜನಿಕ
ಜೀವನಬಿಟ್ಟು
ತೊಲಗಿ;
ಸಾಮಾಜಿಕ
ಕಳಕಳಿ
ಇರುವ
ವ್ಯಕ್ತಿಗಳಿಗೆ
ಅವಕಾಶ
ಕೊಡಿ'
ಎಂಬ
ಅಭಿಯಾನಕ್ಕೆ
ಅವರು
ಚಾಲನೆ
ನೀಡಲಿದ್ದಾರೆ.