ಚಿತ್ರಾವಳಿ: ಜಯಶ್ರೀ, ದ್ರಾವಿಡ್ ಗೆ ಪದ್ಮ ಪ್ರಶಸ್ತಿ
ಬೆಂಗಳೂರು, ಏ.5: ರಾಷ್ಟ್ರಪತಿ ಭವನದಲ್ಲಿ ಶುಕ್ರವಾರ 2013ನೇ ಸಾಲಿನ ಪದ್ಮ ಪ್ರಶಸ್ತಿ ಪ್ರದಾನ ಮಾಡಲಾಗಿದೆ. ಕ್ರಿಕೆಟಿಗ ರಾಹುಲ್ ದ್ರಾವಿಡ್ ಅವರಿಗೆ ಪದ್ಮಭೂಷಣ ಹಾಗೂ ರಂಗಭೂಮಿ ಕಲಾವಿದೆ ಹಾಗೂ ಗಾಯಕಿ ಬಿ.ಜಯಶ್ರೀ ಅವರಿಗೆ ಪದ್ಮಶ್ರೀ ಪ್ರಶಸ್ತಿ ಪ್ರದಾನ ಮಾಡಲಾಯಿತು. ಕರ್ನಾಟಕದ 6 ಮಂದಿಗೆ ಈ ಸಾಲಿನ ಪದ್ಮ ಪ್ರಶಸ್ತಿಗಳು ಲಭಿಸಿವೆ.
ರಾಷ್ಟ್ರಪತಿ ಭವನದಲ್ಲಿ ನಡೆದ ಸಮಾರಂಭದಲ್ಲಿ ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಅವರು, ಮೇರಿಕೋಮ್ಗೆ ಪದ್ಮಭೂಷಣ, ಬಾಲಿವುಡ್ ನಟಿ ಶ್ರೀದೇವಿಗೆ ಪದ್ಮಶ್ರೀ ಪ್ರಶಸ್ತಿ ಹಾಗೂ ವಿಜ್ಞಾನಿ ರೊದ್ದಂ ನರಸಿಂಹ ಅವರಿಗೆ ಪದ್ಮವಿಭೂಷಣ ಸೇರಿದಂತೆ 108 ಗಣ್ಯರಿಗೆ ಪದ್ಮ ಪ್ರಶಸ್ತಿ ಪ್ರದಾನ ಮಾಡಿದರು. ಪ್ರಣಬ್ ಮುಖರ್ಜಿ ಅವರು, ಒಟ್ಟು ನಾಲ್ಕು ಜನರಿಗೆ ಪದ್ಮವಿಭೂಷಣ, 24 ಜನರಿಗೆ ಪದ್ಮಭೂಷಣ ಹಾಗೂ 80 ಜನರಿಗೆ ಪದ್ಮಶ್ರೀ ಪ್ರಶಸ್ತಿ ಪ್ರದಾನ ಮಾಡಿದರು.
ಪ್ರಶಸ್ತಿ ವಿಜೇತರ ಪಟ್ಟಿ ಇಲ್ಲಿದೆ. ಶುಕ್ರವಾರ ಪ್ರಶಸ್ತಿ ಪಡೆದವರ ಸಂಭ್ರಮ ಮುಂದಿನ ಚಿತ್ರ ಸರಣಿಯಲ್ಲಿ ನೋಡಿ...
ಪದ್ಮಪ್ರಶಸ್ತಿ ವಿಜೇತರು
ಚಿತ್ರನಟಿ ಶ್ರೀದೇವಿ ಅವರಿಗೆ ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಅವರಿಂದ ಪದ್ಮಶ್ರೀ ಪ್ರಶಸ್ತಿ ಪ್ರದಾನ PTI Photo by Atul Yadav
ಪದ್ಮಪ್ರಶಸ್ತಿ ವಿಜೇತರು
ವಂದನಾ ಲೂಥಾರ(VLCC) ಅವರಿಗೆ ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಅವರಿಂದ ಪದ್ಮಶ್ರೀ ಪ್ರಶಸ್ತಿ ಪ್ರದಾನ PTI Photo by Atul Yadav
ಪದ್ಮಪ್ರಶಸ್ತಿ ವಿಜೇತರು
ಗಾಯಕಿ ಬಿ ಜಯಶ್ರೀ ಅವರಿಗೆ ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಅವರಿಂದ ಪದ್ಮಶ್ರೀ ಪ್ರಶಸ್ತಿ ಪ್ರದಾನ PTI Photo by Atul Yadav
ಪದ್ಮಪ್ರಶಸ್ತಿ ವಿಜೇತರು
ಕ್ರಿಕೆಟರ್ ರಾಹುಲ್ ದ್ರಾವಿಡ್ ಅವರಿಗೆ ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಅವರಿಂದ ಪದ್ಮಭೂಷಣ ಪ್ರಶಸ್ತಿ ಪ್ರದಾನ PTI Photo by Atul Yadav
ಪದ್ಮಪ್ರಶಸ್ತಿ ವಿಜೇತರು
ಪ್ರೊ ಯಶ್ ಪಾಲ್ ಅವರಿಗೆ ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಅವರಿಂದ ಪದ್ಮವಿಭೂಷಣ ಪ್ರಶಸ್ತಿ ಪ್ರದಾನ PTI Photo by Atul Yadav
ಪದ್ಮಪ್ರಶಸ್ತಿ ವಿಜೇತರು
ಬಜರಂಗ್ ಲಾಲ್ ಠಾಕೂರ್ ಅವರಿಗೆ ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಅವರಿಂದ ಪದ್ಮಶ್ರೀ ಪ್ರಶಸ್ತಿ ಪ್ರಧಾನ PTI Photo by Atul Yadav
ಪದ್ಮಪ್ರಶಸ್ತಿ ವಿಜೇತರು
ರಾಜೇಂದ್ರ ಅಚ್ಯುತ್ ಬಾಡ್ವೆ ಅವರಿಗೆ ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಅವರಿಂದ ಪದ್ಮಶ್ರೀ ಪ್ರಶಸ್ತಿ ಪ್ರಧಾನ
PTI Photo by Atul Yadav
ಪದ್ಮಪ್ರಶಸ್ತಿ ವಿಜೇತರು
ಬಾಕ್ಸರ್ ನ್ಯಾಗೊಮ್ ಡಿಂಗ್ಕೊ ಅವರಿಗೆ ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಅವರಿಂದ ಪದ್ಮಶ್ರೀ ಪ್ರಶಸ್ತಿ ಪ್ರಧಾನ
PTI Photo by Atul Yadav
ಪದ್ಮಪ್ರಶಸ್ತಿ ವಿಜೇತರು
ಸುರೇಂದ್ರ ಶರ್ಮ ಅವರಿಗೆ ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಅವರಿಂದ ಪದ್ಮಶ್ರೀ ಪ್ರಶಸ್ತಿ ಪ್ರಧಾನ
PTI Photo by Atul Yadav
ಪದ್ಮಪ್ರಶಸ್ತಿ ವಿಜೇತರು
ಡಿಆರ್ ಡಿಒ ಡಿಜಿ ವಿಕೆ ಸಾರಸ್ವತ್ ಅವರಿಗೆ ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಅವರಿಂದ ಪದ್ಮಭೂಷಣ ಪ್ರಶಸ್ತಿ ಪ್ರಧಾನ PTI Photo by Atul Yadav
ಪದ್ಮಪ್ರಶಸ್ತಿ ವಿಜೇತರು
ಪ್ರಧಾನಿ ಮನಮೋಹನ್ ಸಿಂಗ್, ಪತ್ನಿ ಗುರ್ ಶರಣ್ ಕೌರ್ ಹಾಗೂ ಕೇಂದ್ರ ಸಚಿವ ಸುಶೀಲ್ ಕುಮಾರ್ ಶಿಂಧೆ ಅವರು ರಾಷ್ಟ್ರಪತಿ ಭವನದಲ್ಲಿ ನಡೆದ ಪದ್ಮ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಪಾಲ್ಗೊಂಡಿದ್ದರು. PTI Photo by Atul Yadav