ಟಿಕೆಟ್ ಪ್ರತಿಭಟನೆ: ಕಾಂಗ್ರೆಸ್ ಕಾರ್ಯಕರ್ತನ ಬಲಿ
ನಗರದ ಕ್ವೀನ್ಸ್ ರಸ್ತೆಯಲ್ಲಿರುವ ಕೆಪಿಸಿಸಿ ಕಚೇರಿ ಎದುರು ಇಂದು ಮಧ್ಯಾಹ್ನ ಬೃಹತ್ ಸಂಖ್ಯೆಯಲ್ಲಿ ಜಮಾಯಿಸಿದ್ದ ಕಾರ್ಯಕರ್ತರು ಹಿಂಸಾಚಾರಕ್ಕೆ ಇಳಿದಾಗ ಪೊಲೀಸರು ಲಾಠಿ ಪ್ರಯೋಗ ಮಾಡಿದ್ದಾರೆ.
ಆ ವೇಳೆ ಕಾರ್ಯಕರ್ತರು ಚೆಲ್ಲಾಪಿಲ್ಲಿಯಾಗಿ ಓಡತೊಡಗಿದಾಗ ಗಾಬರಿಗೊಂಡ ವೇಲು (45) ಎಂಬ ಕಾರ್ಯಕರ್ತರು ರಸ್ತೆ ಮೇಲೆ ಬಿದ್ದಿದ್ದಾರೆ. ತಕ್ಷಣ ಅವರನ್ನು ಸಮೀಪದ ಜೈನ್ ಆಸ್ಪತ್ರೆಗೆ ಸಾಗಿಸಲಾಯಿತು. ಆದರೆ ಆ ವೇಳೆಗೆ ವೇಲು ಹೃದಯಾಘಾತದಿಂದ ಮೃತಪಟ್ಟಿದ್ದರು ಎಂದು ಪ್ರಾಥಮಿಕ ವರದಿಗಳು ತಿಳಿಸಿವೆ.
ಮಹದೇವಪುರದ ನಾಗೇಶ್ ನಲ್ಲೂರಹಳ್ಳಿಗೆ ಚುನಾವಣೆ ಟಿಕೆಟ್ ನೀಡಬೇಕು ಎಂದು ಕಾರ್ಯಕರ್ತರು ಇಂದು ಬೆಳಗ್ಗೆಯಿಂದ ಪ್ರತಿಭಟನೆಯಲ್ಲಿ ತೊಡಗಿದ್ದರು. ಶಿಸ್ತುಬದ್ಧ ಕಾಂಗ್ರೆಸ್ ಪಕ್ಷದಲ್ಲಿ ಇಂತಹ ದುರ್ಘಟನೆ ನಡೆಯಬಾರದಿತ್ತು ಎಂದು ಕೆಪಿಸಿಸಿ ಚುನಾವಣಾ ಪ್ರಚಾರ ಸಮಿತಿಯ ಅಧ್ಯಕ್ಷ ವೀರಣ್ಣ ಮತ್ತಿಕಟ್ಟಿ ಅವರು ವಿಷಾದ ವ್ಯಕ್ತಪಡಿಸಿದ್ದಾರೆ.
ಪ್ರತಿಭಟನೆ ನಿಲ್ಲಿಸಬೇಕು ಎಂದು ಟಿಕೆಟ್ ಆಕಾಂಕ್ಷಿಗಳಲ್ಲಿ ಮನವಿ ಮಾಡಿರುವ ವೀರಣ್ಣ ಅವರು ಕಾರ್ಯಕರ್ತರನ್ನು ಹೀಗೆ ದುರ್ಬಳಕೆ ಮಾಡಿಕೊಳ್ಳುವುದು ಥರವಲ್ಲ. ಆಕಾಂಕ್ಷಿಗಳು ಯಾರೇ ಆಗಿದ್ದರೂ ಪಕ್ಷದ ಹಿರಿಯ ನಾಯಕರನ್ನು ಖುದ್ದಾಗಿ ಭೇಟಿ ಮಾಡಿ ತಮ್ಮ ಅರ್ಜಿ ಸಲ್ಲಿಸಬೇಕು. ಇಂತಹ ಘಟನೆ ನಡೆಯದಂತೆ ನೋಡಿಕೊಳ್ಳಿ ಎಂದು ಮನವಿ ಮಾಡಿಕೊಂಡಿದ್ದಾರೆ.
ಟಿಕೆಟ್
ನೀಡುವವರೆಗೂ
ಅಂತ್ಯಕ್ರಿಯೆ
ಮಾಡೋಲ್ಲ:
ಆದರೆ
ಈ
ದುರ್ಘಟನೆಗೆ
ಕೆಪಿಸಿಸಿ
ಮುಖಂಡರೇ
ಕಾರಣ
ಎಂದು
ಕಚೇರಿ
ಎದುರು
ಜಮಾಯಿಸಿರುವ
ಕಾರ್ಯಕರ್ತರು
ಆಕ್ರೋಶ
ವ್ಯಕ್ತಪಡಿಸಿದ್ದಾರೆ.
ಮಹದೇವಪುರ
ಕ್ಷೇತ್ರದಲ್ಲಿ
ನಾಗೇಶ್
ನಲ್ಲೂರಹಳ್ಳಿ
ಅವರಿಗೆ
ಟಿಕೆಟ್
ನೀಡುವವರೆಗೂ
ವೇಲು
ಅವರ
ಅಂತ್ಯಕ್ರಿಯೆ
ಮಾಡುವುದಿಲ್ಲ
ಎಂದು
ಸ್ಥಳೀಯ
ಕಾಂಗ್ರೆಸ್
ಕಾರ್ಯಕರ್ತರು
ಪಟ್ಟುಹಿಡಿದಿದ್ದಾರೆ.
ನೀವೇ ಆಗಿರಿ ಕರ್ನಾಟಕದ ಗುರು | ಮತ ಹಾಕ್ತೀನಂತ ಪ್ರಮಾಣ ಮಾಡಿ