ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಯಶವಂತಪುರದಲ್ಲಿ ಚರ್ಚ್ ಪಾದ್ರಿ ಕೊಲೆ

|
Google Oneindia Kannada News

killed
ಬೆಂಗಳೂರು, ಏ.1 :ನಗರದ ಯಶವಂತಪುರದ ಚರ್ಚ್ ನಲ್ಲಿ ಫಾದರ್ ಅವರನ್ನು ದುಷ್ಕರ್ಮಿಗಳು ಕೊಲೆ ಮಾಡಿರುವ ವಿಷಯ ತಡವಾಗಿ ಬೆಳಕಿಗೆ ಬಂದಿದೆ. ಥಾಮಸ್ ಕೊಲೆಯಾದ ಪಾದ್ರಿಯಾಗಿದ್ದು, ಭಾನುವಾರ ರಾತ್ರಿ ಕೊಲೆ ಮಾಡಿರಬಹುದು ಎಂದು ಶಂಕಿಸಲಾಗಿದೆ.

ಯಶವಂತಪುರ ಪೊಲೀಸ್ ಠಾಣೆ ಸಮೀಪದಲ್ಲಿರುವ 8 ನೇ ಮುಖ್ಯ ರಸ್ತೆಯ ಸೆಂಟ್ ಪೀಟರ್ ಸನ್ ಸೆಮಿನರಿ ಚರ್ಚ್‌ನಲ್ಲಿ ಪಾದ್ರಿಯಾಗಿದ್ದ ಥಾಮಸ್ (65) ಕೊಲೆಯಾದವರು. ರಾಡ್ ನಿಂದ ಫಾದರ್ ಗೆ ಹೊಡೆದು, ಚಾಕುವಿನಿಂದ ಇರಿದು ಕೊಲೆ ಮಾಡಲಾಗಿದೆ. ಚರ್ಚ್ ಪಕ್ಕದಲ್ಲಿದ್ದ ಶಾಲೆಯಲ್ಲಿ ಕಳ್ಳತನ ಮಾಡಲು ಬಂದವರು, ಸೆಮಿನರಿಗೆ ಬಂದು ಈ ಕೃತ್ಯ ಎಸಗಿರಬಹುದು ಎಂದು ಶಂಕಿಸಲಾಗಿದೆ.

ಹೊಸ ಪಾದ್ರಿಗಳಿಗೆ ತರಬೇತಿ ನೀಡುವ ಸೆಮಿನರಿಯ ಮುಖ್ಯಸ್ಥರಾಗಿ ಥಾಮಸ್ ಕಾರ್ಯನಿರ್ವಹಿಸುತ್ತಿದ್ದರು. ಮಧ್ಯರಾತ್ರಿಯ ಸುಮಾರಿಗೆ ಸೆಮಿನರಿಗೆ ನುಗ್ಗಿದ ಕಳ್ಳರಿಗೆ ಪಾದ್ರಿಯವರು ಪ್ರತಿರೋಧ ಒಡ್ಡಿದ್ದರಿಂದ ಅವರನ್ನು ಕೊಲೆ ಮಾಡಿರಬಹದು ಎಂದು ಪೊಲೀಸರು ಹೇಳಿದ್ದಾರೆ. ಸೆಮಿನರಿಯಲ್ಲಿ ಎಂಟರಿಂದ ಹತ್ತು ಪಾದ್ರಿಗಳಿದ್ದರು. ಆದರೆ, ಗುಡ್ ಫ್ರೈಡ್ ಗೆ ಉಳಿದ ಪಾದ್ರಿಗಳು ಊರಿಗೆ ತೆರಳಿದ್ದರು ಎಂದು ತಿಳಿದುಬಂದಿದೆ.

ಚರ್ಚ್ ಮುಖ್ಯದ್ವಾರದಲ್ಲಿ ಒಬ್ಬ ಕಾವಲುಗಾರನಿದ್ದಾನೆ. ಭಾನುವಾರ ರಾತ್ರಿ ಜೋರಾಗಿ ಮಳೆ ಸುರಿಯುತ್ತಿದ್ದರಿಂದ ಕಾವಲುಗಾರನಿಗೆ ಯಾರು ಬಂದಿದ್ದರೆಂದು ತಿಳಿದಿಲ್ಲ. ಬೆಳಗ್ಗೆ 5.30ರ ಸುಮಾರಿಗೆ ಕಾವಲುಗಾರ ಪಾದ್ರಿಯವರ ಕೋಣೆ ಬಳಿ ತೆರಳಿದಾಗ ರಕ್ತದ ಕಲೆ ಆಗಿರುವುದು ಕಂಡುಬಂದಿದೆ. ಅನುಮಾನದಿಂದ ಕೋಣೆಯೊಳಗೆ ಪ್ರವೇಶಿಸಿದಾಗ ಪಾದ್ರಿಯವರು ಕೊಲೆಯಾಗಿರುವುದು ಬೆಳಕಿಗೆ ಬಂದಿದೆ.

ಘಟನಾ ಸ್ಥಳಕ್ಕೆ ನಗರದ ಹೆಚ್ಚುವರಿ ಪೊಲೀಸ್ ಆಯುಕ್ತ ಅಲೋಕ್ ಕುಮಾರ್, ಮಲ್ಲೇಶ್ವರಂ ಶಾಸಕ ಅಶ್ವಥ್ ನಾರಾಯಣ ಮುಂತಾದವರು ಸ್ಥಳಕ್ಕೆ ಭೇಟಿ ಘಟನೆಯ ಕುರಿತು ಮಾಹಿತಿ ಪಡೆದರು. ಯಶವಂತಪುರ ಪೊಲೀಸರು ಪಕ್ರಕರಣ ದಾಖಲಿಸಿಕೊಂಡಿದ್ದು, ಶ್ವಾನದಳದೊಂದಿಗೆ ಆಗಮಿಸಿ ಪರಿಶೀಲನೆ ನಡೆಸಿದರು.

ನೀವೇ ಆಗಿರಿ ಕರ್ನಾಟಕದ ಗುರು | ಮತ ಹಾಕ್ತೀನಂತ ಪ್ರಮಾಣ ಮಾಡಿ

English summary
Strangers killed Church Father in Bangalore. In Yeshwanthpur St. Peter's Church Father Thomas killed person. police reached the place. police says may be Father killed ar Sunday, March 31 night.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X