ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

'ಗುಂಡುಗಲಿ' ಸಿಸಿ ಪಾಟೀಲ್ ಬಿಜೆಪಿ ಬಿಡೋಲ್ಲ

By Srinath
|
Google Oneindia Kannada News

Gadag Naragunda MLA SS Patil to contest from BJP only
ನರಗುಂದ, ಮಾ.28: ಹತ್ತು ದಿನಗಳ ಹಿಂದೆ ಗುಂಡೇಟು ತಿಂದು ಬೆಳಗಾವಿಯ ಕೆಎಲ್ಇ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಶಾಸಕ ಸಿಸಿ ಪಾಟೀಲ ಅವರು ಬಿಜೆಪಿ ಬಿಡುವುದಿಲ್ಲ ಎಂದು ತಮ್ಮ ಸೋದರನ ಮೂಲಕ ಸ್ಪಷ್ಟಪಡಿಸಿದ್ದಾರೆ.

ಕುತೂಹಲದ ಸಂಗತಿಯೆಂದರೆ ಯಡಿಯೂರಪ್ಪನವರ ಆಪ್ತ, ಗದಗ ಜಿಲ್ಲೆಯ ನರಗುಂದ ವಿಧಾನಸಭೆ ಕ್ಷೇತ್ರದ ಬಿಜೆಪಿ ಶಾಸಕ, ಮಾಜಿ ಸಚಿವ ಸಿಸಿ ಪಾಟೀಲ ಅವರು ಕೆಜೆಪಿ ಸೇರುತ್ತಾರೆ ಎಂದು ಭಾರಿ ಗಾಳಿ ಸುದ್ದಿ ಹಬ್ಬಿತ್ತು. ಇದೇ ವೇಳೆ ಬಿಜೆಪಿ ರಾಜ್ಯಸಭೆ ಸದಸ್ಯ ಪ್ರಭಾಕರ್ ಕೋರೆ ಅವರೂ ಪಾಟೀಲರನ್ನು ಕೆಜೆಪಿಗೆ ಕರೆತರುವ ಪ್ರಯತ್ನದಲ್ಲಿದ್ದಾರೆ ಎಂದು ಬಿಂಬಿಸಲಾಗಿತ್ತು.

ಆದರೆ ಇದಕ್ಕೆಲ್ಲ ತೆರೆ ಎಳೆದಿರುವ ಸಿಸಿ ಪಾಟೀಲರು ಬಿಜೆಪಿಯಿಂದಲೇ ಈ ಬಾರಿ ಚುನಾವಣೆಯಲ್ಲಿ ಸ್ಪರ್ಧಿಸುತ್ತಾರೆ ಎಂಬುದು ಖಚಿತವಾಗಿದೆ. ಈ ಬಗ್ಗೆ ಬಿಜೆಪಿ ಕಾರ್ಯಕರ್ತರ ಸಮಾವೇಶದಲ್ಲಿ ಮಾತನಾಡಿರುವ ಸಿಸಿ ಪಾಟೀಲರ ಸೋದರ ಅಣ್ಣಪ್ಪಗೌಡ ಪಾಟೀಲ ಅವರು ಶಾಸಕರ ಆರೋಗ್ಯದಲ್ಲಿ ಸಾಕಷ್ಟು ಸುಧಾರಣೆಯಾಗಿದೆ. ಕ್ಷೇತ್ರದ ಜನರ ಕೋರಿಕೆಯ ಮೇರೆಗೆ ಬಿಜೆಪಿಯಿಂದಲೇ ಸ್ಪರ್ಧಿಸುವ ಇಂಗಿತ ವ್ಯಕ್ತಪಡಿಸಿದ್ದಾರೆ.

ಕೆಲ ಮಾಧ್ಯಮಗಳಲ್ಲಿ ಶಾಸಕ ಪಾಟೀಲ ಅವರು ಕೆಜೆಪಿ ಸೇರುತ್ತಾರೆ ಎಂದು ಬಿಂಬಿಸಲಾಗುತ್ತಿದೆ ಎನ್ನುವುದು ಸತ್ಯಕ್ಕೆ ದೂರವಾಗಿದೆ. ಈ ಬಗ್ಗೆ ಜನತೆಗೆ ಯಾವುದೇ ಸಂದೇಹ ಬೇಡ ಎಂದು ಅಣ್ಣಪ್ಪಗೌಡ ಪಾಟೀಲ ಅವರು ಸ್ಪಷ್ಟಪಡಿಸಿದ್ದಾರೆ.

ನೀವೇ ಆಗಿರಿ ಕರ್ನಾಟಕದ ಗುರು | ಮತ ಹಾಕ್ತೀನಂತ ಪ್ರಮಾಣ ಮಾಡಿ

English summary
Gadag Naragunda MLA SS Patil is to contest from BJP only says his brother Appanna Gowda Patil. MLA SS Patil is undergoing surgery at KLE Hospital in Balgaum, as his gunman fired accidentally at Naragunda March 18.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X