ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಫೆ.27: ಚಿತ್ರಗಳಲ್ಲಿ ಕಂಡ ತುಣುಕು ಸುದ್ದಿ

By Mahesh
|
Google Oneindia Kannada News

ಬೆಂಗಳೂರು, ಫೆ .27: ಈ ದಿನದ ಪ್ರಮುಖ ಸುದ್ದಿಗಳನ್ನು ಚಿತ್ರಗಳ ಮೂಲಕ ಹೇಳ ಹೊರಟಿರುವ ಪ್ರಯತ್ನ ನಮ್ಮದು. ಯಡಿಯೂರಪ್ಪ ಬರ್ಥ್ ಡೇ, ಮಾಮೂಲಿ ರಾಜಕೀಯ ಹೇಳಿಕೆಗಳು, ಕೋರ್ಟ್ ಸುದ್ದಿ, ಸಿನಿಮಾ ಸುದ್ದಿಗಳ ನಡುವೆ ಮಿಸ್ ಆಗುವ ವಿಷಯಗಳನ್ನು ಆಯ್ದು ಕೊಡಲಾಗಿದೆ.

ಬೆನೆಡಿಕ್ಟ್ ಪೋಪ್ ಕೊನೆ ಭಾಷಣ, ಕೇಂದ್ರ ಬಜೆಟ್ ಮಂಡನೆಗೆ ಸಿದ್ಧವಾಗುತ್ತಿರುವ ವಿತ್ತ ಸಚಿವ ಪಿ ಚಿದಂಬರಂ, ಬಜೆಟ್ ನಿರೀಕ್ಷೆಗಳು ಬಾಂಬ್ ಸ್ಫೋಟ ಹಿನ್ನೆಲೆಯಲ್ಲಿ ಹೈದರಾಬಾದ್ ನಲ್ಲಿ ಪಂದ್ಯವಾಡಲು ನಿರಾಕರಿಸಿದ್ದ ಆಸೀಸ್ ಆಟಗಾರರು ಹೈದರಾಬಾದಿನಲ್ಲಿ ಬಂದಿಳಿದಿದ್ದಾರೆ.

ಕೋಲ್ಕತ್ತಾದ ಅಗ್ನಿ ದುರಂತ ಸ್ಥಳದಲ್ಲಿ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ, ವೀರಯೋಧ ಚಂದ್ರಶೇಖರ್ ಅಜಾದ್ ಅವರ ಸಂಸ್ಮರಣಾ ದಿನಾಚರಣೆ ಸೇರಿದಂತೆ ಪಾಕಿಸ್ತಾನದಿಂದ ಆಮದಾದ ನಟಿ ವೀಣಾಗೆ ಸಾಮೂಹಿಕವಾಗಿ ಮುತ್ತಿಡುವ ಹುಚ್ಚಾಟದ ಚಿತ್ರಗಳು ಇಲ್ಲಿದೆ ನೋಡಿ ಅನಂದಿಸಿ

ಚಿತ್ರದಲ್ಲಿ ಕಂಡ ಸುದ್ದಿ

ಚಿತ್ರದಲ್ಲಿ ಕಂಡ ಸುದ್ದಿ

ಮುಂಬೈ: ಪಾಕಿಸ್ತಾನಿ ನಟಿ ವೀಣಾ ಮಲಿಕ್ ಮುಂಬೈನಲ್ಲಿ ಅಭಿಮಾನಿಗಳಿಂದ 100 ಕಿಸ್ ಪಡೆದು ಹುಟ್ಟು ಹಬ್ಬ ಆಚರಿಸಿಕೊಂಡರು. ಈ ಮೂಲಕ ಗಿನ್ನಿಸ್ ರೆಕಾರ್ಡ್ ಮಾಡುವ ಪ್ರಯತ್ನ ವೀಣಾ ಅವರದ್ದು. PTI

ಚಿತ್ರದಲ್ಲಿ ಕಂಡ ಸುದ್ದಿ

ಚಿತ್ರದಲ್ಲಿ ಕಂಡ ಸುದ್ದಿ

ಚೆನ್ನೈ: ವೀರ ಸನ್ಯಾಸಿ ಸ್ವಾಮಿ ವಿವೇಕಾನಂದರ 150ನೇ ಜನ್ಮದಿನಾಚರಣೆ ಕಾರ್ಯಕ್ರಮದಲ್ಲಿ ತಮಿಳುನಾಡು ಮುಖ್ಯಮಂತ್ರಿ ಜೆ ಜಯಲಲಿತಾ ಅವರು ರಾಮಕೃಷ್ಣ ಪರಮಹಂಸ, ಶಾರದಾದೇವಿ, ವಿವೇಕಾನಂದರ ಚಿತ್ರಗಳಿಗೆ ಹೂ ಅರ್ಪಿಸಿದರು.

ಚಿತ್ರದಲ್ಲಿ ಕಂಡ ಸುದ್ದಿ

ಚಿತ್ರದಲ್ಲಿ ಕಂಡ ಸುದ್ದಿ

ಶ್ರೀನಗರ: ಬುಧವಾರ ಮುಂಜಾನೆ ಬಿದ್ದ ಮಂಜಿನಿಂದ ಆವೃತವಾದ ಝೇಲಮ್ ನದಿಯ ದಂಡೆಯ ಸುಂದರ ದೃಶ್ಯ

ಚಿತ್ರದಲ್ಲಿ ಕಂಡ ಸುದ್ದಿ

ಚಿತ್ರದಲ್ಲಿ ಕಂಡ ಸುದ್ದಿ

ನವದೆಹಲಿ: 2013-14ನೇ ಸಾಲಿನ ಕೇಂದ್ರ ಬಜೆಟ್ ಗೆ ಅಂತಿಮ ಟಚ್ ನೀಡುತ್ತಿರುವ ವಿತ್ತ ಸಚಿವ ಪಿ. ಚಿದಂಬರಂ ಅವರು ರಾಜ್ಯಸಚಿವ ನಮೋ ನಾರಾಯಣ್ ಮೀನಾ ಹಾಗೂ ಎಸ್ ಎಸ್ ಪಳನಿಮಾಣಿಕಂ ಜೊತೆ ಗ್ರೂಪ್ ಫೋಟೋ

ಚಿತ್ರದಲ್ಲಿ ಕಂಡ ಸುದ್ದಿ

ಚಿತ್ರದಲ್ಲಿ ಕಂಡ ಸುದ್ದಿ

ವ್ಯಾಟಿಕನ್ ನಗರ: ಪೋಪ್ ಬೆನೆಡಿಕ್ಟ್ XVI ಅವರ ಸೆಂಡ್ ಆಫ್, ಸೇಂಟ್ ಪೀಟರ್ಸ್ ಸ್ಕ್ವೈರ್ ನಲ್ಲಿ ಕಟ್ಟ ಕಡೆಯ ಸಾರ್ವಜನಿಕ ಭಾಷಣ, ಭಾವಪೂರ್ಣ ವಿದಾಯ. ಜನರತ್ತ ಕೈಚಾಚಿದ ಬೆನೆಡಿಕ್ಟ್

ಚಿತ್ರದಲ್ಲಿ ಕಂಡ ಸುದ್ದಿ

ಚಿತ್ರದಲ್ಲಿ ಕಂಡ ಸುದ್ದಿ

ಹೈದರಾಬಾದ್: ಇಲ್ಲಿನ ರಾಜೀವ್ ಗಾಂಧಿ ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬಂದಿಳಿದ ಆಸ್ಟ್ರೇಲಿಯಾ ತಂಡ ಆಟಗಾರರು. ಮಾ. 2 ರಿಂದ ಭಾರತ ವಿರುದ್ಧ ಎರಡನೇ ಟೆಸ್ಟ್ ಪಂದ್ಯ ಶುರುವಾಗಲಿದೆ.

ಚಿತ್ರದಲ್ಲಿ ಕಂಡ ಸುದ್ದಿ

ಚಿತ್ರದಲ್ಲಿ ಕಂಡ ಸುದ್ದಿ

ಕೋಲ್ಕತ್ತಾ: ಸೂರ್ಯ ಸೇನ್ ಮಾರುಕಟ್ಟೆಯ ಅಗ್ನಿದುರಂತದ ಸಂತ್ರಸ್ತರಿಗೆ ಸೂಚನೆಗಳನ್ನು ನೀಡುತ್ತಿರುವ ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ. ಈ ಅಗ್ನಿ ದುರಂತದಲ್ಲಿ 20 ಮಂದಿ ಅಸುನೀಗಿದರು.

ಚಿತ್ರದಲ್ಲಿ ಕಂಡ ಸುದ್ದಿ

ಚಿತ್ರದಲ್ಲಿ ಕಂಡ ಸುದ್ದಿ

ECONOMIC SURVEY 2012-13 . PTI Graphics

ಚಿತ್ರದಲ್ಲಿ ಕಂಡ ಸುದ್ದಿ

ಚಿತ್ರದಲ್ಲಿ ಕಂಡ ಸುದ್ದಿ

ಅಲಹಾಬಾದ್: ಇಲ್ಲಿನ ಅಜಾದ್ ಪಾರ್ಕಿನಲ್ಲಿ ಚಂದ್ರಶೇಖರ ಅಜಾದ್ ಅವರ ಸಂಸ್ಮರಣಾ ದಿನಾಚರಣೆ, ಸ್ವಾತಂತ್ರ್ಯ ಯೋಧನಿಗೆ ಹೂ ಅರ್ಪಣೆ

English summary
Feb 27, 2013 News in Pics: Tamil Nadu CM J Jayalalithaa Celebrates 150th birthday celebrations of Swami Vivekananda.Finance Minister P Chidambaram, prepares for Union Budget presentation, Pope Benedict XVI opens his arms during his final general audience in St. Peter's Square at the Vatican and many more
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X