ಕರ್ನಾಟಕದ ವಿರುದ್ಧವೇ ಹರಿಯಿತು ಕಾವೇರಿ ಅಧಿಸೂಚನೆ
ನವದೆಹಲಿ,
ಫೆ.20:
ನಿರೀಕ್ಷೆಯಂತೆ
ಕರ್ನಾಟಕದ
ಮೇಲೆ
ಬರಸಿಡಿಲು
ಬಡಿದಿದೆ.
ಆದರೆ
ಮಾಜಿ
ಪ್ರಧಾನಿ
ದೇವೇಗೌಡರಿಂದ
ಹಿಡಿದು
ಬೆಂಗಳೂರಿನ
ಪ್ರಜೆ
ಸೇರಿದಂತೆ
ಕಾವೇರಿ
ಕೊಳ್ಳದ
ರೈತನವರೆಗೂ
ಯಾರೂ
ಇದನ್ನು
ಆಪೇಕ್ಷಿಸಿರಲಿಲ್ಲ.
ಏನಪ್ಪಾ
ಅಂದರೆ
ಕಾವೇರಿ
ನೀರು
ಹಂಚಿಕೆ
ಕುರಿತು
ಐ
ತೀರ್ಪಿನ
ಅಧಿಸೂಚನೆಯನ್ನು
ಅಧಿಕೃತವಾಗಿ
ಪ್ರಕಟಿಸಲಾಗಿದೆ.
ಆದರೆ
ಇದು
ಜಾರಿಗೆ
ಬರಲು
90
ದಿನಗಳ
ಕಾಲಾವಕಾಶವಿದೆ.
ಕಾವೇರಿ
ಅಧಿಸೂಚನೆಯಿಂದ
ಕರ್ನಾಟಕಕ್ಕೂ
ಏನಾದರೂ
ಪ್ರಯೋಜನವಾಗಲಿದೆಯಾ
ಅಂದರೆ
ಒಂದೆರಡು
ಹೀಗಿವೆ:
*
1991ರ
ಮಧ್ಯಂತರ
ಆದೇಶದಿಂದ
ಬಚಾವು:
ಈ
ತೀರ್ಪಿನ
ಪ್ರಕಾರ
ಮೆಟ್ಟೂರು
ಜಲಾಶಯಕ್ಕೆ
205
ಟಿಎಂಸಿ
ನೀರು
ಹರಿಸಬೇಕಿತ್ತು.
ಆದರೆ
ಈಗ
2007ರ
ಐತೀರ್ಪಿನ
ಪ್ರಕಾರ
192
ಟಿಎಂಸಿ
ನೀರು
ಬಿಟ್ಟರೆ
ಸಾಕಾದೀತು.
ಇನ್ನು,
ಕಾವೇರಿ
ಅಧಿಸೂಚನೆಯಿಂದ
ಕರ್ನಾಟಕಕ್ಕೆ
ಅನಾನುಕೂಲವಾಗಲಿದೆಯಾ
ಅಂದರೆ
ಒಂದಾ,
ಎರಡಾ?
ಹತ್ತಾರುಎನ್ನಬಹುದು.
*
ಮೆಟ್ಟೂರು
ಜಲಾಶಯ
ನೀರು
ಸಂಗ್ರಹ
ಸಾಮರ್ಥ್ಯ
42
ಟಿಎಂಸಿ
ನೀರು.
ಆದರೆ
ನ್ಯಾಯಧಿಕರಣದ
ತೀರ್ಪಿನ
ಪ್ರಕಾರ
55
ಟಿಎಂಸಿ
ನೀರನ್ನು
ಬಿಡಬೇಕಾದ
ಅನಿವಾರ್ಯುತೆ
ಕರ್ನಾಟಕಕ್ಕೆ.
*
ಕಾವೇರಿ
ನದಿ
ನೀರು
ಪ್ರಾಧಿಕಾರ
ಸಂಕಷ್ಟ
ಪರಿಹಾರ
ಸೂತ್ರ
ಅಂತಿಮಗೊಂಡಿಲ್ಲ.
ಹಾಗಿರುವಾಗ,
ಕಾವೇರಿ
ಬಿಕ್ಕಟ್ಟಿಗೆ
ಅಂತಿಮ
ಪರಿಹಾರ
ಸಿಗುವುದು
ದೂರದ
ಮಾತಾಗಿದೆ.
*
ಕರ್ನಾಟಕ
ಕೇಳಿದ್ದು
465
ಟಿಎಂಸಿ
ನೀರು
ಆದರೆ
ದಕ್ಕುವುದು
270
ಟಿಎಂಸಿ
ನೀರು
ಮಾತ್ರ.
*
ತಮಿಳುನಾಡಿನಲ್ಲಿ
ಅಂತರ್ಜಲ
ಮಟ್ಟ
47
ಟಿಎಂಸಿ
ಇದೆ
ಎಂದು
ಸ್ವತಃ
ತಮಿಳುನಾಡೇ
ಮಾಹಿತಿ
ಒದಗಿಸಿತ್ತು.
ಆದರೆ
ಮುಂದೆ
ನ್ಯಾಯಾಧೀಕರಣ
ಸ್ಥಳ
ಸಮೀಕ್ಷೆ
ನಡೆಸಿ,
ತಮಿಳುನಾಡಿನಲ್ಲಿ
ಕೇವಲ
20
ಟಿಎಂಸಿ
ಅಂತರ್ಜಲ
ಇದೆ
ಎಂದು
ಬರೆಯಿತು.
ಹಾಗಾಗಿ
ಈಗ
192
ಟಿಎಂಸಿ
ನೀರು
ಬಿಡುವುದು
ಕರ್ನಾಟಕಕ್ಕೆ
ಅನಿವಾರ್ಯವಾಗಿದೆ.
*
ಕಬಿನಿ
ಎರಡನೆಯ
ಹಂತದ
ಯೋಜನೆಗಳಿಗೆ
ನೀರು
ಹಂಚಿಕೆಯಾಗಿಲ್ಲ.
ಹಾಗೆಯೇ,
ಏತ
ನೀರಾವರಿಗೂ
ನೀರು
ಹಂಚಿಕೆಯಾಗಿಲ್ಲ.
*
ನ್ಯಾಯಾಧಿಕರಣ
ತಮಿಳುನಾಡಿನಲ್ಲಿ
ಭತ್ತ
ಬೆಳೆಯುವ
ಪ್ರದೇಶವನ್ನು
ಸರಿಯಾಗಿ
ಅಳೆದು
ನೋಡಿಲ್ಲ
ಎಂಬ
ಆರೋಪವಿದೆ.
ಹಾಗಾಗಿ,
4
ಟಿಎಂಸಿ
ಹೆಚ್ಚುವರಿ
ನೀರನ್ನು
ಬಿಡುಗಡೆ
ಮಾಡುವ
ಹೊರೆ
ಕರ್ನಾಟಕದ
ಮೇಲೆ
ಬಿದ್ದಿದೆ.