ಇಬ್ಬರು ಗೆಳತಿಯರು ಅಪ್ಪಿಕೊಂಡೇ ಆತ್ಮಹತ್ಯೆಗೆ ಶರಣು
ಅನೇಕಲ್ ಪಟ್ಟಣದಿಂದ ಅನತಿ ದೂರದಲ್ಲಿರುವ ಅರವಾಂತಿಕಾಪುರ ಬಳಿ ಶುಕ್ರವಾರ ಸಂಜೆ ಈ ದುರ್ಘಟನೆ ನಡೆದಿದೆ. ಇನ್ನು ಅವರನ್ನು ಆಹುತಿ ತೆಗೆದುಕೊಂಡ ಟ್ರೈನು ಯಾವುದಪ್ಪಾ ಅಂದರೆ ಕುರ್ಲಾ ಎಕ್ಸ್ ಪ್ರೆಸ್.
ಒಬ್ಬ ವಿದ್ಯಾರ್ಥಿನಿಯ ಹೆಸರು ಅಶ್ವಿನಿ ಆರ್ ರೆಡ್ಡಿ ಎನ್ನಲಾಗಿದ್ದು, ಬನ್ನರುಘಟ್ಟದ ANC College ದ್ವಿತೀಯ ಪಿಯುಸಿ ಓದುತ್ತಿದ್ದಳು ಎಂದು ತಿಳಿದುಬಂದಿದೆ. ಮತ್ತೊಬ್ಬಳ ವಿವರ ತಿಳಿದುಬಂದಿಲ್ಲ.
ರೈಲ್ವೆ ಪೊಲೀಸರು ಇಬ್ಬರ ದೇಹಗಳನ್ನು ಬೌರಿಂಗ್ ಆಸ್ಪತ್ರೆಗೆ ಸಾಗಿಸಿದ್ದು, ಹೆಚ್ಚಿನ ಮಾಹಿತಿ ಕಲೆಹಾಕುವ ಕಾರ್ಯದಲ್ಲಿ ನಿರತರಾಗಿದ್ದಾರೆ. ಇಬ್ಬರೂ ಬನ್ನೇರುಘಟ್ಟ ಬಳಿಯ ಖಾಸಗಿ ಕಾಲೇಜಿನ ವಿದ್ಯಾರ್ಥಿನಿಯರು ಎನ್ನಲಾಗಿದೆ.
'ಆ ಯುವತಿಯರಿಬ್ಬರೂ ಪರಸ್ಪರ ಬಿಗಿಯಾಗಿ ಅಪ್ಪಿಕೊಂಡು ರೈಲ್ವೆ ಕಂಬಿಗಳ ಮೇಲೆ ನಿಂತಿರುವುದು ನನ್ನ ಕಣ್ಣಿಗೆ ಬಿತ್ತು. ಆದರೆ ಏನ್ಮಾಡಲಿ ಹಾಗೆ ಸಡನ್ನಾಗಿ ಬ್ರೇಕ್ ಹಾಕಲು ಬರುವುದಿಲ್ಲ. ಟ್ರೈನು ಗಂಟೆಗೆ 120 ಕಿಮೀ ವೇಗದಲ್ಲಿ ಚಲಿಸುತ್ತಿತ್ತು' ಎಂದು ಮುಂಬೈನತ್ತ ಮುಖ ಮಾಡಿದ್ದ ಕುರ್ಲಾ ಎಕ್ಸ್ ಪ್ರೆಸ್ ಟ್ರೈನಿನ ಚಾಲಕ ವಿಷಾದ ವ್ಯಕ್ತಪಡಿಸಿದ್ದಾರೆ.