ಸಲ್ಮಾನ್ ರಶ್ದಿಯನ್ನು ದ್ವೇಷಿಸಲು ನಾನಾ ಕಾರಣ
ಅವರು ಬರೆದಿರುವ ಕಾದಂಬರಿಗಳನ್ನು ಓದುವುದು ಬಲು ಕಷ್ಟ. ಈ ಮಾತನ್ನು ಅವರನ್ನು ಆರಾಧಿಸುವ ಅನೇಕರು ಒಪ್ಪದಿದ್ದರೂ, ಅವರ ಕಾದಂಬರಿಗಳನ್ನು ಓದಿ ಅರಗಿಸಿಕೊಳ್ಳಲು ಸಾಕಷ್ಟು ಶ್ರಮ ಬೇಕಾಗುತ್ತದೆ. ಮೊದಲ ಬಾರಿ ಓದುತ್ತಿರುವವರಂತೂ ಓದನ್ನು ಅರ್ಧಕ್ಕೇ ನಿಲ್ಲಿಸಿದರೆ ಆಶ್ಚರ್ಯವಿಲ್ಲ. ಇದರರ್ಥ, ರಶ್ದೀಯ ಬರವಣಿಗೆಯ ಆಳ, ಅಗಲ, ಸಾಹಿತ್ಯಿಕ ಸಾರವನ್ನು ಸವಿಯಲು ಓದುಗರು ಸೋತಿದ್ದಾರೆ ಎಂದರ್ಥವೆ? ಇದ್ದರೂ ಇರಬಹುದು. ಆದರೆ, ರಶ್ದಿ ಕಾದಂಬರಿಗಳನ್ನು ಓದದೆ ಸೋತ ಓದುಗರಲ್ಲಿ ನಾನೂ ಒಬ್ಬ.
ಇಂದಿನ ಗಂಭೀರ ಬರವಣಿಗೆಗಳು ಓದುಗರಲ್ಲಿ ಅಸಹನೀಯತೆ ಹೆಚ್ಚಿಸುತ್ತಿವೆ. ಓದುಗರನ್ನು ತೀವ್ರ ಗೊಂದಲಕ್ಕೆ ದೂಡಿ, ಅರ್ಥಮಾಡಿಕೊಳ್ಳಲು ಎರಡೆರಡು ಬಾರಿ ಓದುವಂಥವು ಅತ್ಯುತ್ತಮ ಕಾದಂಬರಿಗಳು ಎಂಬಂತಹ ಅಭಿಪ್ರಾಯ ಮೂಡಿದೆ. ಭಾರತದ ಬಗ್ಗೆ ಬರೆದಂಥ ಪುಸ್ತಕಗಳು ಪಾಶ್ಚಾಮಾತ್ಯರಿಗಾಗಿಯೇ ಬರೆದಂತಿರುವುದರಿಂದ ಇಲ್ಲಿನ ಸರಳ ಮಧ್ಯಮ ವರ್ಗದ ಓದುಗರಿಗಾಗಿ ಇರುವ ಸರಳ ಕಥೆಗಳು, ಕಾದಂಬರಿಗಳು ಧೂಳು ತಿನ್ನುತ್ತಿವೆ.
ನಮ್ಮ ಆಂಗ್ಲ ಲೇಖಕರು ಬರೆದು ಬರೆದು ಬಿಸಾಕುತ್ತಿದ್ದಾರೆ. ಆದರೆ, ಓದುವವರೇ ಇಲ್ಲವಾಗಿದ್ದಾರೆ. ಭಾರತೀಯ ಪುಸ್ತಕಗಳಿಗೆ ಮಾರುಕಟ್ಟೆ ಇಲ್ಲದಂತಾಗಿದೆ. ಇದಕ್ಕೆ ಕಾರಣ ಭಾರತೀಯರು ಪುಸ್ತಕಗಳನ್ನು ಓದುವುದಿಲ್ಲ ಅಂತಲ್ಲ, ಇಲ್ಲಿ ಬರೆಯಲಾದ ಪುಸ್ತಕಗಳು ಭಾರತೀಯರಿಗಾಗಿ ಇರುವುದಿಲ್ಲ, ಅಷ್ಟೆ. ಇಂಥವರಲ್ಲಿ ಅಪರೂಪದ ಲೇಖಕ ಅಂದರೆ, ಅವರು ಚೇತನ್ ಭಗತ್. ಅವರು ಭಾರತೀಯರ ಕಥೆಗಳನ್ನು ಭಾರತೀಯರಿಗಾಗಿ ನೀಡಿದ್ದಾರೆ. ಈ ಚಿಂತನೆಯನ್ನು ಇನ್ನಷ್ಟು ಆಳವಾಗಿ ತಿಳಿಯಬೇಕಿದ್ದರೆ ನಿಟಿ ಸೆಂಟ್ರಲ್ನಲ್ಲಿ ಈ ಲೇಖನವನ್ನು ಓದಿರಿ.