ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸಿಎಂ ಶೆಟ್ಟರ್ ಕೆಳಗಿಳಿಸಿದರೆ ಯಡಿಯೂರಪ್ಪ ಭಸ್ಮ

|
Google Oneindia Kannada News

Beluru Gopalakrishna statement to KJP supporter MLAs
ಬೆಂಗಳೂರು, ಜ 23: ಬಿಜೆಪಿ ಜೇನುಗೂಡಿಗೆ ಕೈಹಾಕುವ ಮುನ್ನ ಯಡಿಯೂರಪ್ಪ ಹತ್ತು ಬಾರಿ ಯೋಚಿಸಲಿ. ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಅವರನ್ನು ಯಡಿಯೂರಪ್ಪ ಮತ್ತು ಕೆಜೆಪಿ ಶಾಸಕರು ಕೆಳಗಿಳಿಸಿದರೆ ಅವರು ಸುಟ್ಟು ಭಸ್ಮವಾಗುತ್ತಾರೆ ಎಂದು ಸಾಗರ ಶಾಸಕ ಬೇಳೂರು ಗೋಪಾಲಕೃಷ್ಣ ಎಚ್ಚರಿಕೆ ನೀಡಿದ್ದಾರೆ.

ಬಿಜೆಪಿ ಬಿಟ್ಟು ಕೆಜೆಪಿ ಸೇರುವುದು ಸ್ವತಃ ಯಡಿಯೂರಪ್ಪ ಪುತ್ರ ಮತ್ತು ಸಂಸದ ಬಿ ವೈ ರಾಘವೇಂದ್ರ ಅವರಿಗೂ ಮನಸಿಲ್ಲ. ಯಡಿಯೂರಪ್ಪ ಅವರಿಗೆ ತಾಕತ್ತಿದ್ದರೆ ಮೊದಲು ತನ್ನ ಮಗನ ರಾಜೀನಾಮೆಯನ್ನು ಪಡೆಯಲಿ ಎಂದು ಬೇಳೂರು ಸವಾಲೆಸೆದಿದ್ದಾರೆ.

ತಂದೆ ಯಡಿಯೂರಪ್ಪನ ಮೇಲೆ ಪುತ್ರನಿಗೇ ವಿಶ್ವಾಸವಿಲ್ಲ. ಹಾಗಾಗಿಯೇ ರಾಘವೇಂದ್ರ ಬಿಜೆಪಿ ಬಿಡಲು ಬಯಸುತ್ತಿಲ್ಲ. ಯಡಿಯೂರಪ್ಪ ಮೊದಲು ತನ್ನ ಮನೆ ತೂತನ್ನು ಸರಿ ಮಾಡಿಕೊಳ್ಳಲಿ ಎಂದು ಬೇಳೂರು ವ್ಯಂಗ್ಯವಾಡಿದ್ದಾರೆ.

ಇಂದು ರಾಜೀನಾಮೆ ನೀಡಿದ ಉದಾಸಿ ಮತ್ತು ಶೋಭಾ ಕರಂದ್ಲಾಜೆ ವಿರುದ್ದ ಟೀಕಾಪ್ರಹಾರ ನಡೆಸಿದ ಬೇಳೂರು, ನಾಲ್ಕೂವರೆ ವರ್ಷಗಳ ಮಂತ್ರಿಗಿರಿ ಅನುಭವಿಸಿ ಈಗ ಬಿಜೆಪಿ ಬಗ್ಗೆ ಮಾತನಾಡುವ ನಿಮಗೆ ನೈತಿಕತೆ ಅನ್ನೋದು ಏನಾದರೂ ಉಳಿದಿದೆಯಾ ಎಂದು ಪ್ರಶ್ನಿಸಿದ್ದಾರೆ.

ಯಡಿಯೂರಪ್ಪ ಅನುಯಾಯಿಗಳು ಪಕ್ಷ ತೊರೆಯುವವರು ತೊರೆಯಲಿ. ಪಕ್ಷ ಬಿಡುವ ನಿರ್ಧಾರ ತೆಗೆದುಕೊಳ್ಳುವ ಮೊದಲು ಬಿಜೆಪಿ ನಿಮಗೆ ಎಲ್ಲವನ್ನೂ ನೀಡಿದೆ ಎನ್ನುವುದನ್ನು ಮರೆಯಬೇಡಿ ಎಂದು ಬೇಳೂರು ಸಲಹೆ ನೀಡಿದ್ದಾರೆ.

English summary
Sagar BJP MLA Beluru Gopalakrishna said, before quitting BJP, BSY supporter MLAs should think. Party has given every thing to them.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X