ಬೆಂಗಳೂರು ಬಾಲಕಿ ಮೇಲೆ ಯುನಾನಿ ವೈದ್ಯ ರೇಪ್
ಬಾಂದ್ರಾ (ಪೂರ್ವ) ಮೌಲಾನಾ ಬಾಬಾ ರಸ್ತೆಯಲ್ಲಿ ಶನಿವಾರ ಬೆಳಗ್ಗೆ (ಜನವರಿ 19) ಶಾಲೆಗೆಂದು ನಡೆದು ಹೋಗುತ್ತಿದ್ದ ನಾಲ್ಕನೆ ತರಗತಿ ಬಾಲಕಿಯನ್ನು ತನ್ನ ಮನೆಗೆ ಕರೆದ ವೈದ್ಯ ತಾಹೀರ್ ಅನ್ಸಾರಿ ಈ ಕುಕೃತ್ಯವೆಸಗಿದ್ದಾನೆ. ಆರೋಪಿ ತಾಹೀರ್ ಅನ್ಸಾರಿನನ್ನು ಜ. 27ರವರೆಗೆ ಪೊಲೀಸ್ ಕಸ್ಟಡಿಗೆ ಒಪ್ಪಿಸಲಾಗಿದೆ.
ಮೊದಲು ಆಲೂಗಡ್ಡೆ ಚಿಪ್ಸ್ ನೀಡಿ, ಬಾಲಕಿಯನ್ನು ವಿಶ್ವಾಸಕ್ಕೆ ತೆಗೆದುಕೊಂಡ ಭೂಪ, ನಿನ್ನ ಆರೋಗ್ಯ ಚೆನ್ನಾಗಿರಬೇಕೆಂದ್ರೆ ಈ ಕಪ್ಪು ಗುಳಿಗೆಗಳನ್ನು ತೆಗೆದುಕೋ ಎಂದು ಹೇಳಿದ್ದಾನೆ. ಅಮಾಯಕ ಮಗು ಅದನ್ನು ನುಂಗಿದೆ. ಅಷ್ಟೇ ಮುಂದೆ ಕೀಚಕ ವೈದ್ಯ ಅವಳ ಮೇಲೆ ಅತ್ಯಾಚಾರವೆಸಗಿದ್ದಾನೆ ಎಂದು ಬಾಂದ್ರಾ ಪೊಲೀಸರು ತಿಳಿಸಿದ್ದಾರೆ.
ತನ್ನ ಕಾಮತೃಷೆ ತೀರಿಸಿಕೊಂಡ ಬಳಿಕ ವೈದ್ಯ ತಾಹೀರ್ ಅನ್ಸಾರಿ ಮಗುವಿಗೆ ಪ್ರಾಣ ಬೆದರಿಕೆಯೊಡ್ಡಿ, ವಿಷಯವನ್ನು ಯಾರಿಗೂ ತಿಳಿಸಬಾರದು ಎಂದು ಎಚ್ಚರಿಸಿದ್ದಾನೆ. ನಂತರ ಮಗುವನ್ನು ಮಧ್ಯಾಹ್ನ 1.30ರಲ್ಲಿ ಮನೆಗೆ ವಾಪಸ್ ಕಳಿಸಿದ್ದಾನೆ.
ಮನೆಗೆ ಬಂದ ಮಗುವಿನ ಆರೋಗ್ಯದಲ್ಲಿ ಏರುಪೇರಾಗಿ, ಭಾನುವಾರದ ವೇಳೆಗೆ ನಿತ್ರಾಣಗೊಂಡಿದ್ದಾಳೆ. ಆಗ ಪೋಷಕರು ಏನಾಗಿದೆಯೆಂದು ಕೇಳಲಾಗಿ ಮಗು ತನ್ನ ಕಷ್ಟವನ್ನು ಹೇಳಿಕೊಂಡಿದೆ.
ಬೆಂಗಳೂರು ಮೂಲದ ಮಗು: ಬಾಧಿತ ಮಗುವಿನ ತಂದೆ ಆಟೋ ಡ್ರೈವರ್ ಆಗಿದ್ದು, ತಮ್ಮ ಪತ್ನಿಯೊಂದಿಗೆ ಬೆಂಗಳೂರಿನಲ್ಲಿದ್ದಾರೆ. ಮಗಳಿಗೆ ಉತ್ತಮ ಶಿಕ್ಷಣ ಕೊಡಿಸುವ ಮಹದಾಸೆಯೊಂದಿಗೆ ಮಗುವನ್ನು ಮುಂಬೈನಲ್ಲಿರುವ ತಮ್ಮನ ಮನೆಯಲ್ಲಿ ಬಿಟ್ಟಿದ್ದರು.