ಪಾದಯಾತ್ರೆಯಲ್ಲ ಇದು ಪಶ್ಚಾತ್ತಾಪ ಯಾತ್ರೆ: ರವಿ
ಕೇಂದ್ರದಲ್ಲಿ ಕಾಂಗ್ರೆಸ್ ನೇತೃತ್ವದ ಯು.ಪಿ.ಎ. ಸರ್ಕಾರ ಕಳೆದ 8 ವರ್ಷಗಳಿಂದ ಆಡಳಿತ ನಡೆಸುತ್ತಿದೆ. ಆದರೆ ಈ ಅವಧಿಯಲ್ಲಿ ದೇಶದ ಅಭಿವೃದ್ಧಿಗಾಗಿ ಯಾವುದೇ ಯೋಜನೆಗಳನ್ನು ರೂಪಿಸಿಲ್ಲ. ಬದಲಿಗೆ ಜನ ವಿರೋಧಿ ಯೋಜನೆಗಳು ವಿದೇಶಿ ಬಂಡವಾಳ ಹೂಡಿಕೆದಾರರಿಗೆ ಅವಕಾಶ ಕಲ್ಪಿಸಲಾಗಿದೆ ಎಂದು ರವಿ ಹೇಳಿದರು.
ಬಹು ಲಕ್ಷ ಕೋಟಿ ರೂ.ಗಳ ಭ್ರಷ್ಟಾಚಾರ, ಅಟಲ್ ಬಿಹಾರಿ ವಾಜಪೇಯಿಯವರು ಜಾರಿಗೆ ತಂದ ಮಹತ್ತರ ಯೋಜನೆಗಳನ್ನು ನಿರ್ಲಕ್ಷಿಸಿದ್ದು, ರಾಷ್ಟ್ರೀಯ ಹಿತಾಸಕ್ತಿಗೆ ವಿರುದ್ಧವಾಗಿ ನಡೆದುಕೊಂಡಿರುವುದು, ಸಿ.ಬಿ.ಐ. ದುರ್ಬಳಕೆ ಮಾಡಿಕೊಂಡಿರುವುದೇ ಯು.ಪಿ.ಎ. ಸರ್ಕಾರದ ಮಹತ್ ಸಾಧನೆ ಎಂದು ರವಿ ಹೇಳಿದರು.
ಕಳೆದ ನಾಲ್ಕು ವರ್ಷಗಳಿಂದ ಪ್ರಧಾನಮಂತ್ರಿ ಗ್ರಾಮ ಸಡಕ್ ಯೋಜನೆಯಡಿ ರಾಜ್ಯಕ್ಕೆ ಅನುದಾನ ಬಿಡುಗಡೆ ಮಾಡಿಲ್ಲ. ನಮ್ಮ ಗ್ರಾಮ, ನಮ್ಮ ರಸ್ತೆ ಯೋಜನೆಯಡಿ ರಾಜ್ಯ ಸರ್ಕಾರ ಅನುದಾನ ಬಿಡುಗಡೆ ಮಾಡದಿದ್ದರೆ ಗ್ರಾಮಾಂತರ ರಸ್ತೆಗಳ ಅಭಿವೃದ್ಧಿಯನ್ನು ಮರೆಯಬೇಕಿತ್ತು ಎಂದು ಸಚಿವ ರವಿ ತಿಳಿಸಿದರು.
ಕಾವೇರಿ ನದಿ ನೀರು ಹಂಚಿಕೆ ವಿಚಾರದಲ್ಲಿ ಕೇಂದ್ರ ರಚಿಸಿದ್ದ ಕಾವೇರಿ ನ್ಯಾಯಾಧಿಕರಣ ಮಂಡಳಿಯು ರಾಜ್ಯದಲ್ಲಿ ಕುಡಿಯುವ ನೀರು ಇಲ್ಲದಿದ್ದರೂ ತಮಿಳುನಾಡಿಗೆ ನೀರು ಸರಬರಾಜು ಮಾಡುವಂತೆ ಸೂಚಿಸಿತು.
ಕಾಂಗ್ರೆಸ್ ನೇತೃತ್ವದ ಯುಪಿಎ ಸರ್ಕಾರದಿಂದ ರಾಜ್ಯಕ್ಕೆ ಇನ್ನಿಲ್ಲದ ರೀತಿಯಲ್ಲಿ ಅನ್ಯಾಯವಾಗಿದೆ. ಈಗ ಸ್ವಯಂಕೃತ ಅಪರಾಧ ಮುಚ್ಚಿಡಲು ಈ ಯಾತ್ರೆಕೈಗೊಂಡಿದ್ದಾರೆ. ಹಾಗಾಗಿ ಇದು ಪಶ್ಚಾತ್ತಾಪದ ಯಾತ್ರೆ ಎಂದು ಕರೆಯಬೇಕಾಗಿದೆ ಎಂದು ರವಿ ನಗೆಯಾಡಿದರು.
ಬಿಜೆಪಿಯು
ಮುಂಬರುವ
ವಿಧಾನಸಭಾ
ಚುನಾವಣೆಯನ್ನು
ಮುಖ್ಯಮಂತ್ರಿ
ಜಗದೀಶ್
ಶೆಟ್ಟರ್
ನೇತೃತ್ವದಲ್ಲಿ
ಎದುರಿಸುವುದಾಗಿ
ಈಗಾಗಲೇ
ಘೋಷಿಸಿದೆ.
ಪಕ್ಷ
ಈಗ
ಇನ್ನಷ್ಟು
ಬಲಗೊಂಡಿದೆ,
ಸಮರ್ಥವಾಗಿ
ಚುನಾವಣೆ
ಎದುರಿಸಲಿದೆ.
ಮೊದಲು
ಕಾಂಗ್ರೆಸ್
ನವರು
ತಮ್ಮ
ಮುಖ್ಯಮಂತ್ರಿ
ಅಭ್ಯರ್ಥಿಯನ್ನು
ಘೋಷಿಸಲು
ಎಂದು
ಸಚಿವ
ರವಿ
ಸವಾಲು
ಹಾಕಿದರು.
ಬಿಎಸ್ ವೈ ಮತ್ತೆ ಬಿಜೆಪಿಗೆ ಮರಳುವ ಬಗ್ಗೆ ಮಾತನಾಡಿದ್ದು ನಿಜ, ಕಲ್ಯಾಣ್ ಸಿಂಗ್, ಉಮಾಭಾರತಿ ರೀತಿಯಲ್ಲಿ ಯಡಿಯೂರಪ್ಪ ಅವರು ತಮ್ಮ ಕೆಜೆಪಿಯನ್ನು ಬಿಜೆಪಿಯಲ್ಲಿ ವಿಲೀನಗೊಳಿಸುವ ಸಾಧ್ಯತೆ ತಳ್ಳಿಹಾಕುವಂತಿಲ್ಲ ಎಂದು ಮತ್ತೊಮ್ಮೆ ರವಿ ಹೇಳಿದರು.